ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಮರ್ಶೆಯ ಮೌನವೂ ಅಪಾಯಕಾರಿ

ಬೆಂಕಿಯಂಥ ನೆನಪು, ನೆನಪಿನ ಬೆಂಕಿ

benki1

ವಿಮರ್ಶೆಯ ಅಹಂಕಾರದಂತೆಯೇ ವಿಮರ್ಶೆಯ ಮೌನವೂ ಅಪಾಯಕಾರಿ. ಒಳ್ಳೆಯ ಕೃತಿಗಳಿಗೆ ಸಕಾಲದಲ್ಲಿ ಸೂಕ್ತ ವಿಮರ್ಶೆ, ಪ್ರಚಾರ ಸಿಗದೆ ಹೋದರೆ ಅವು ಪಡೆಯಬೇಕಾದ ಸ್ಥಾನಮಾನ ಪಡೆಯುವುದೇ ಇಲ್ಲ. ಕೆ.ಪಿ.ಸುರೇಶರ ‘ಬೆಂಕಿಯ ನೆನಪು’ ಇಂಥ ಒಂದು ಕೃತಿ. ಇದು ಪ್ರಕಟವಾಗಿ ಮೂರು ವರ್ಷಗಳಾಗಿವೆ.
ಇದೊಂದು ಅನುವಾದ. ಮೂಲಕೃತಿ ಲ್ಯಾಟಿನ್ ಅಮೆರಿಕಾದ ಉರುಗ್ವೇಯ ಎಡುವರ್ಡೊ ಗೆಲಿಯಾನೊ ಎಂಬವನದು. ಇಲ್ಲಿನ ಹೆಮಿಂಗ್ವೆ, ಮಾರ್ಕ್ವೆಜ್ ಮುಂತಾದ ಪ್ರಖರ ಪ್ರತಿಭೆಗಳ ಮುಂದೆ ಈತ ನಮಗೆ ಕಾಣುವುದೇ ಇಲ್ಲ. ಇದಕ್ಕೂ ‘ಸೆಲೆಕ್ಟಿವ್ ಕ್ರಿಟಿಸಿಸಂ’ ಒಂದು ಕಾರಣ ಇದ್ದೀತು.
ಈತ ಎಂಥ ಅದ್ಭುತ ಪ್ರತಿಭೆ ಎಂದರೆ, ಮೂರನೇ ಜಗತ್ತಿನ ಯಾವ ಲೇಖಕನೂ ಮಾಡದಿದ್ದ ಮಹಾನ್ ಕೆಲಸವೊಂದನ್ನು ಮಾಡಿದ ; ಅದೆಂದರೆ ತನ್ನ ಇಡೀ ಖಂಡದ ಚರಿತ್ರೆಯನ್ನು ಪುನಃ ರಚಿಸಿದ. ಇದು ಮಹಾಕಾವ್ಯಗಳನ್ನು ಬರೆಯುವುದಕ್ಕಿಂತಲೂ ಕಠಿಣವಾದ ಕೆಲಸ. ಯಾಕೆಂದರೆ ಕಾವ್ಯ ಬರೆಯುವುದಕ್ಕೆ ಮುಕ್ಕಾಲು ಪಾಲು ಕಲ್ಪನೆ ಸಾಕು ; ಚರಿತ್ರೆ ಬರೆಯುವುದಕ್ಕೆ ಅಥೆಂಟಿಸಿಟಿ ಬೇಕು.

ಸಂಪೂರ್ಣ ಓದಿಗೆ ಭೇಟಿ ಕೊಡಿ-  ಬೆಟ್ಟದಡಿ

+++

ನಾಲ್ಕನೇ ದಿನ – ನಾಮ್ ಚೆ ಕಡೆಗೆ

dsc02459ಪ್ರಿಯಳಿಗೆ ಈರುಳ್ಳಿ ಬೆಳ್ಳುಳ್ಳಿ ಅಲೆರ್ಜಿ. ಅವಳು ಯಾವಾಗಲು ಹೊಟಲೊಳಗೆ ಹೋಗಿ ಅವುಗಳಿಲ್ಲದೆ ತನಗೆ ಮಾಡಲು ಹೇಳುತ್ತಿದ್ದಳು. ಅವರು ತಬ್ಬಿಬಾಗಿ, ಹಾಗಾದರೆ ಮಸಾಲೆ ಏನು ಹಾಕಬೇಕೆಂದು ಯೋಚಿಸಿತ್ತಿದ್ದರು. ಬೆಳ್ಳಿಳ್ಳಿ ’ಆಲ್ಟಿಟ್ಯುಡ್ ಸಿಕ್ನೆಸ್’ ಗೆ ಬಹಳ ಒಳ್ಳೆಯದಂತೆ. ಇದೂ ಒಂದು ಅವಳ ಚಿಂತೆಯಾಗಿತ್ತು ! ಹೀಗೆ ಜೊರ್ಸಾಲೆಯಲ್ಲಿ ಬಿಡುವು ತೆಗೆದುಕೊಂಡಾಗ, ಜ್ಞಾನಿ, ನಮ್ಮ ಗುಂಪಿನಲ್ಲಿದ್ದ ೬೨ ವರ್ಷ ವಯಸ್ಸಿನ ಶೀಲಾ ಕ್ಯಾಸ್ಟಿಲಿನೊ ಅವರನ್ನು ಮಾತಾಡಿಸುತ್ತಿದ್ದ. ’೧೭ ವರ್ಷಗಳ ಹಿಂದೆ ನಮ್ಮ ತರಗತಿಯಲ್ಲಿ ಆನಂದ್ ಕ್ಯಾಸ್ಟಿಲಿನೊ ಅಂತ ಒಬ್ಬ ಇದ್ದ. ಆದರೆ ಅಡ್ರೆಸ್ಸ್ ಇಲ್ಲದಂತೆ ಮಾಯವಾದ, ನಿಮ್ಮ ಹೆಸರು ಕೇಳಿದಾಗಲಷ್ಟೆ ಅವನ ನೆನಪು’ ಎಂದು ಹೇಳಿದ ತಕ್ಷಣ, ’ಅಯ್ಯೊ, ಅವನು ನನ್ನ ಮಗ’ ಅಂತ ಈ ತಾಯಿ.

ಸಂಪೂರ್ಣ ಓದಿಗೆ ಭೇಟಿ ಕೊಡಿ- ಜೀವ ಜಾಲ 

‍ಲೇಖಕರು avadhi

6 December, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading