ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಧೇಂದ್ರ ಹೊಸ ಕಾದಂಬರಿ ನಿಮ್ಮ ಮುಂದೆ..

ಮಾನ್ಯರೆ,

ನಮಸ್ಕಾರಗಳು. ನನ್ನ ಹೊಸ ಕಾದಂಬರಿ ‘ತೇಜೋ-ತುಂಗಭದ್ರಾ’ ಜನವರಿ ಮೊದಲ ವಾರದಲ್ಲಿ ಅಂಗಡಿಗಳಲ್ಲಿ ಲಭ್ಯವಾಗುತ್ತಿದೆ.

ಸುಮಾರು ಮೂರು ವರ್ಷಗಳ ಕಾಲ ವಿಜಯನಗರ ಇತಿಹಾಸವನ್ನು ಅಧ್ಯಯನ ಮಾಡಿ ಬರೆದ ಕಾದಂಬರಿ ಇದಾಗಿದೆ.

ರೂಢಿಯಂತೆ ಯಾವುದೇ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನಾನು ಹಮ್ಮಿಕೊಳ್ಳುತ್ತಿಲ್ಲ.

ಅದಕ್ಕೆ ಬದಲು ಪ್ರತಿ ದಿನ ನಮ್ಮ ರಾಜ್ಯದ ಒಂದೊಂದು ಕನ್ನಡ ಪುಸ್ತಕದ ಅಂಗಡಿಗಳಲ್ಲಿ ಕುಳಿತು, ಓದುಗರೊಂದಿಗೆ ಮಾತಾಡುವ, ಅವರಿಗೆ ಹಸ್ತಾಕ್ಷರ ಹಾಕಿಕೊಡುವ, ಅವರೊಡನೆ ಸೆಲ್ಫಿ ತೆಗೆದುಕೊಳ್ಳುವ ವಿನೂತನ ಕ್ರಮದಿಂದ ಪುಸ್ತಕ ಪ್ರಚಾರ ಮಾಡುವ ಯೋಜನೆ ಹಾಕಿಕೊಂಡಿದ್ದೇನೆ.

ನನ್ನ ಕ್ಯಾಲೆಂಡರ್ ಈ ರೀತಿ ಇರುತ್ತದೆ.

05-01-2020
ಸಂಜೆ 4 ರಿಂದ 8
ಭಾನುವಾರ
ಅಂಕಿತ ಪುಸ್ತಕ, ಗಾಂಧಿಬಜಾರ್, ಬೆಂಗಳೂರು
06-01-2020
ಸಂಜೆ 4 ರಿಂದ 8
ಸೋಮವಾರ
ನವಕರ್ನಾಟಕ, ಕೆಂಪೇಗೌಡ ರಸ್ತೆ, ಬೆಂಗಳೂರು
07-01-2020
ಸಂಜೆ 4 ರಿಂದ 8
ಮಂಗಳವಾರ
ಸಪ್ನಾ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
08-01-2020
ಸಂಜೆ 4 ರಿಂದ 8
ಬುಧುವಾರ
ಸಪ್ನಾ ಬುಕ್ ಹೌಸ್, ಜಯನಗರ, ಬೆಂಗಳೂರು
09-01-2010
ಸಂಜೆ 4 ರಿಂದ 8
ಗುರುವಾರ
ಸಪ್ನಾ ಬುಕ್ ಹೌಸ್, ರೆಸಿಡೆನ್ಸಿ ರಸ್ತೆ, ಬೆಂಗಳೂರು
10-01-2020
ಬೆಳಿಗ್ಗೆ 11 ರಿಂದ ಮಧ್ಯಾಹ್ನ 2
ಶುಕ್ರವಾರ
ನವಕರ್ನಾಟಕ, ಮೈಸೂರು
10-01-2020
ಸಂಜೆ 4 ರಿಂದ 8
ಶುಕ್ರವಾರ
ಸಪ್ನಾ ಬುಕ್ ಹೌಸ್, ಮೈಸೂರು
1೧-01-2020
ಬೆಳಿಗ್ಗೆ 11 ರಿಂದ ಮಧ್ಯಾಹ್ನ 2
ಶನಿವಾರ
ನವಕರ್ನಾಟಕ, ಮಂಗಳೂರು
1೧-01-2020
ಸಂಜೆ 4 ರಿಂದ 8
ಶನಿವಾರ
ಸಪ್ನಾ ಬುಕ್ ಹೌಸ್, ಮಂಗಳೂರು
1೨-01-2020
ಬೆಳಿಗ್ಗೆ 11 ರಿಂದ ಮಧ್ಯಾಹ್ನ 2
ಭಾನುವಾರ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
1೨-01-2020
ಸಂಜೆ 4 ರಿಂದ 8
ಭಾನುವಾರ
ಸಪ್ನಾ ಬುಕ್ ಹೌಸ್, ಹುಬ್ಬಳ್ಳಿ
೧೩-೦೧-೨೦೨೦
ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೨
ಸೋಮವಾರ
ಭಾರತ್ ಬುಕ್ ಡಿಪೋ, ಧಾರವಾಡ

ವಿಶ್ವಾಸದಿಂದ,

ವಸುಧೇಂದ್ರ

‍ಲೇಖಕರು avadhi

27 December, 2019

2 Comments

  1. Kirana

    ಎಲ್ಲಾ ದೊಡ್ಡ ಊರುಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಕೂಡ ಒಳ್ಳೆಯ, ಡಿಸೆಂಟ್ ಆದ ಪುಸ್ತಕಗಳ ಅಂಗಡಿಗಳು, ಲೈಬ್ರರಿಗಳೂ ಇಲ್ಲದಿರೋದನ್ನು ನೋಡಿದರೇನೇ ಅರ್ಥ ಆಗುತ್ತೆ ನಮ್ಮಲ್ಲಿ ಸಾಂಸ್ಕೃತಿಕ, ಮುಖ್ಯವಾಗಿ ಓದುವ ಅಭ್ಯಾಸ, ಹವ್ಯಾಸ ಎಷ್ಟು ಕ್ಷೀಣಿಸಿದೆ ಮತ್ತು ಕ್ಷೀಣಿಸುತ್ತಿದೆ ಅಂತಾ.
    ಯೂರೋಪ್ ನ ಚಿಕ್ಕ ಚಿಕ್ಕ ದೇಶಗಳಲ್ಲೂ (ಕೆಲವುಗಳ ಜನಸಂಖ್ಯೆ ಲಕ್ಷಗಳಲ್ಲಿ) ಕೂಡ ಅವರ ಭಾಷೆಯ ಪುಸ್ತಕಗಳು ನಮ್ಮ ಹೊಸ ಕನ್ನಡ ಪುಸ್ತಕಗಳಿಗಿಂತ ಹೆಚ್ಚು ಮುದ್ರಿಸುತ್ತಾರೆ ಏಕೆಂದರೆ ಅಲ್ಲಿ ಸಣ್ಣ ಸಣ್ಣ ಊರುಗಳಲ್ಲಿ ಕೂಡ ಒಳ್ಳೆಯ ಸುಸಜ್ಜಿತ ಪುಸ್ತಕದ ಅಂಗಡಿಗಳಿವೆ ಮತ್ತು ಜನರು ಕೊಂಡು ಓದುತ್ತಾರೆ, ಚರ್ಚಿಸುತ್ತಾರೆ ನಮ್ಮ ಏಳು ಕೋಟಿ ಕನ್ನಡಿಗರು ಬರೀ ಅವರಿವರು ಕೊಂಡ ಪುಸ್ತಕ ಪತ್ರಿಕೆಗಳಿಗೆ ಇಣುಕಿ ಅಲ್ಲೇನು ಇಲ್ಲ ಅಂತ ಸಮಾಧಾನ ಪಟ್ಟುಕೊಳ್ಳುತ್ತಾರೆ..

  2. Kantaraj Tavane

    ನಮಸ್ತೆ, ನಮ್ಮ ಮಲ್ಲಾಡಿಹಳ್ಳಿ ಗ್ರೌಪ್ನಲ್ಲಿ ನಿಮ್ಮ ಪುಸ್ತಕದ ಬಗ್ಗೆ ಮಂಜುನಾಥ್ ಬೊಮ್ಮಗಟ್ಟ ಪ್ರಸ್ತಾಪಿಸಿ ಓದುವಂತೆ ಪ್ರೇರೇಪಿಸಿದ್ದಾರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading