ಪ್ರಿಯ ಸ್ನೇಹಿತರೆ,
ನಮಸ್ಕಾರಗಳು. ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ. ಆದರೆ ಮಾತುಗಳು, ಅಭಿಪ್ರಾಯಗಳು ಸ್ಪಷ್ಟವಾಗಿರಲಿ ಎಂಬ ಕಾರಣದಿಂದ ಈ ಕೆಳಗಿನ ಸ್ಪಷ್ಟೀಕರಣ ಕೊಡುತ್ತಿರುವೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಲ್ಲ.
ಕೇವಲ ನೈತಿಕ ಭಿನ್ನಾಭಿಪ್ರಾಯ ವ್ಯಕ್ತ ಪಡಿಸಿದ ಎಲ್ಲರ ಬಗ್ಗೆಯೂ ನನ್ನ ಗೌರವವಿದೆ. ಸಂಭ್ರಮದಲ್ಲಿ ಭಾಗವಹಿಸಿದ ವೈದೇಹಿಯವರೂ ವೇದಿಕೆಯ ಮೇಲೆ ಅದನ್ನು ವ್ಯಕ್ತ ಪಡಿಸಿದ್ದರು. ಎಲ್ಲ ಭಿನ್ನಾಭಿಪ್ರಾಯಗಳನ್ನೂ ಸ್ವೀಕರಿಸುವ ಮುಕ್ತ ವಾತಾವರಣ ಅಲ್ಲಿತ್ತು. ಆದರೆ ಆ ಸಾಹಿತ್ಯ ಸಮಾರಂಭವೇ ಆಗಕೂಡದೆಂದು ಪ್ರಯತ್ನಗಳು ನಡೆದವು. ಅಲ್ಲಿ ಭಾಗವಹಿಸುವುದೇ ತಪ್ಪೆನ್ನುವ ಪಾಪಪ್ರಜ್ಞೆ ಬಿತ್ತುವ ಕೆಲಸವೂ ನಡೆಯಿತು. ಅದು ನಿಮಗೂ ಗೊತ್ತು. ನನ್ನ ವಿರೋಧವೇನಿದ್ದರೂ ಅಂತಹ ತೀವ್ರಗಾಮಿಗಳ ಬಗ್ಗೆ.
ವಿಶ್ವಾಸದಿಂದ
ವಸುಧೇಂದ್ರ





0 Comments