ರವಿಕುಮಾರ್ ಟೆಲೆಕ್ಸ್ ಹೊಸ ಕವಿತೆ: ಒಂದಾನೊಂದು ದೇಶದಲ್ಲಿ

ಎನ್. ರವಿಕುಮಾರ್ ಟೆಲೆಕ್ಸ್

ಮೂರೊತ್ತು ನೆಣತುಂಬಿದ ಮೃಷ್ಟಾನ್ನ ಉಣ್ಣುವ
ದೊರೆ -ಮತ್ತವನ ಸಂತತಿ
ಹಸಿದವರನ್ನು ಲೇವಡಿ ಮಾಡುತ್ತದೆ
**

ತನ್ನ ಅಂಗಿಗೆ ಚಿನ್ನದ ದಾರಗಳನ್ನೆ ಪೋಣಿಸಿಕೊಂಡು
ಊರೂರು ತಿರುಗುವವ ಶೋಕಿದಾರ
ಬೀದಿಯಲ್ಲಿ ಬರೀ ಮೈಲಿ ತಿರುಗುವವರನ್ನು ಮರೆತೆ ಇರುತ್ತಾನೆ
***

ವೈಭವದ ಮೇಳಗಳಲ್ಲಿ ಬಹುಪರಾಕಿನ ರಾಗಗಳಿಗೆ
ಮೈದೂಗುವ ಮೋಜುಗಾರನಿಗೆ
ಮಣಿಹಾರದ ಕಣಿವೆಯಲಿ
ಬೆಂಕಿಯಲ್ಲಿ ಬೆಂದು ನರಳುತ್ತಿರುವವರ
ಆರ್ತನಾದವಾದರೂ ಕೇಳಿಸುವುದಿಲ್ಲ
****
ತುಂಡು ರೊಟ್ಟಿ ಕೊಡಿ ಎಂದು ಹಸಿದು ಅಂಗಲಾಚಿದವರನ್ನು
ಕೇಕು ತಿನ್ನಿ ಎಂದ ಪಾತಕ ಚರಿತ್ರೆಯ ವಿಕಾರ ವಾರಸುದಾರ
ವರ್ತಮಾನದಲ್ಲೂ ಗಡಿ-ಗುಡಿಗಳ ತಿರುಗುತ್ತಾ ಮಾತು ಮಾತಿಗೂ
ಧರ್ಮವೆನ್ನುತ್ತಾನೆ-ದೇವರೆನ್ನುತ್ತಾನೆ-ದೇಶವೆನ್ನುತ್ತಾನೆ
ದೇಶಾವರಿ, ಅನ್ನದ ಬಗ್ಗೆ ಸೊಲ್ಲೆ ಎತ್ತುವುದಿಲ್ಲ

    ***

‍ಲೇಖಕರು avadhi

June 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: