ಯಾರ ಬ್ಯಾಡ ಅಂತರ ಮಾಡಪ್ಪ ಚಿಂತಿ..

hrudaya shiva

ಹೃದಯಶಿವ

ಕೂಡಲೇ ಮನೆಯ ಹೆಂಚು ಸರಿ ಮಾಡಿಸಿದೆ,
ಮಳೆಗಾಲದಲ್ಲಿ ಮಗಳು
ನೆಮ್ಮದಿಯಿಂದ ನಿದ್ರಿಸಬಹುದು.

home greenಈಗಲೇ ಈ ಬಾಗಿಲ ಕಿತ್ತು ಹೊಸ ಹಲಗೆ ಜೋಡಿಸಿ
ಗಟ್ಟಿ ಚಿಲಕ ಮಾಡಿಸಿಬಿಡುತ್ತೇನೆ,
ಪುಸ್ತಕಗಳಾದರೂ ಉಳಿದುಕೊಳ್ಳಲಿ
ಮೊಮ್ಮಕ್ಕಳಿಗೆ ತಾತನಾಸ್ತಿಯ ರೂಪದಲ್ಲಿ
ಕಳ್ಳಕಾಕರಿಂದ ಪಾರಾಗಿ.

ಇಲ್ಲೊಂದು ಕಿಟಕಿ ಇದೆಯಲ್ಲ,
ಇದರ ಸರಳುಗಳ ನಡುವೆಯೇ ಕಾರ್ಖಾನೆಯುಗುಳುವ
ಗಬ್ಬು ವಾಸನೆ
ಕೋಣೆಗೆ ನುಗ್ಗುತ್ತಿದೆ ಇತ್ತೀಚೆಗೆ…
ಇಗೋ ಮುಚ್ಚಿಯೇ ಬಿಟ್ಟೆ,
ಈ ಕಿಟಕಿ ಇತ್ತೆಂಬುದಕ್ಕೆ ಸಾಕ್ಷ್ಯಗಳೇ ಇಲ್ಲ
ಇನ್ನು ನಿರಾತಂಕ ವಿಶ್ರಾಂತಿ ಅಪ್ಪನಿಗೆ.

ಚಕ್ಕೆಗಳಾಗಿ ಉದುರಿಹೋಗುವ ಮುನ್ನ
ಈ ಗೋಡೆಗಳಿಗಿನ್ನಾದರೂ
ಸುಣ್ಣ ಹೊಡೆಸಿಬಿಡಬೇಕು, ಇಲ್ಲವೇ ಬಣ್ಣ
ಹಬ್ಬ ಈಗಲೇ ಈ ಕ್ಷಣವೇ ಆಗ

ಈಗ ಮನೆಗೊಂದು ಕಳೆ,
ನೆಮ್ಮದಿ.
ಉಫ್ !
ರಿಮೋಟಿನೊಳಗಿನ ಜಿರಳೆ ಮರಿ ಕೊಡವಿ
ಟಿವಿ ಮುಂದೆ ಕೂತೆ,
ಹಾಡು ಪ್ರಸಾರವಾಗುತ್ತಿತ್ತು :

“ನೀ ಲೋಕದ ಕಾಳಜಿ ಮಾಡಬೇಕಂತಿ
ಯಾರ ಬ್ಯಾಡ ಅಂತರ ಮಾಡಪ್ಪ ಚಿಂತಿ”.

‍ಲೇಖಕರು admin

July 17, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಆದಿವಾಲ ಗಂಗಮ್ಮ

    ಮನಮುಟ್ಟಿತು ಸರಳ ಸುಂದರ ಮಾರ್ಮಿಕತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: