

ಕನ್ನಡದ ಇಬ್ಬರು ಮುಖ್ಯ ಸಾಹಿತಿಗಳು ಈ ಭಾನುವಾರ ಬೆಂಗಳೂರಿನಲ್ಲಿರುತ್ತಾರೆ. ಕುಂ ವೀರಭದ್ರಪ್ಪ ಹಾಗೂ ಮೊಗಳ್ಳಿ ಗಣೇಶ್ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ನೀಡಿದ್ದಾರೆ. ಮೊಗಳ್ಳಿ ಗಣೇಶ್ ಅವರ ಮೂರು ಕೃತಿಗಳನ್ನು ಚನ್ನಪಟ್ಟಣದ ಪಲ್ಲವ ಪ್ರಕಾಶನ ಪ್ರಕಟಿಸಿದ್ದು ಯು ಆರ್ ಅನಂತಮೂರ್ತಿ ಅವರು ಬಿಡುಗಡೆ ಮಾಡಲಿದ್ದಾರೆ. ಕೆ ಟಿ ಶಿವಪ್ರಸಾದ್. ಕಿ ರಂ ನಾಗರಾಜ್, ಜಿ ಪಿ ಬಸವರಾಜು, ಮೂಡ್ನಾಕೂಡು ಚಿನ್ನಸ್ವಾಮಿ ಹಾಗೂ ಕೃಷ್ಣಮೂರ್ತಿ ಹನೂರು ಮುಖ್ಯ ಅತಿಥಿಗಳು.

ಕುಂ ವೀರಭದ್ರಪ್ಪ ಅವರ ಸಾಹಿತ್ಯದ ಬಗ್ಗೆ ಒಂದು ಭಿನ್ನ ರೀತಿಯ ಕಾರ್ಯಕ್ರಮವನ್ನು ಛಂದ ಪ್ರಕಾಶನ ಆಯೋಜಿಸಿದೆ. ರಾಯಲ ಸೀಮೆ ಎಂಬ ಕತೆಯೂ, ಕುಂ ವೀ ಎಂಬ ಮಾಂತ್ರಿಕನ ಜೊತೆಯೂ..ಮಂಥನದಲ್ಲಿ ಕಿ ರಂ ನಾಗರಾಜ್, ಓ ಎಲ್ ನಾಗಭೂಷಣ ಸ್ವಾಮಿ ಹಾಗೂ ಮಂಜುನಾಥ್ ಲತಾ ಇರುತ್ತಾರೆ. ವಿಕ್ರಮ್ ವಿಸಾಜಿ, ಆನಂದ ಋಗ್ವೇದಿ, ಕವಿತಾ ಕುಸುಗಲ್ಲ ಅವರು ಸಂವಾದ ನಡೆಸುತ್ತಾರೆ. ಇದರೊಂದಿಗೆ ಕುಂ ವೀ ಕಥೆ ‘ದೇವರ ಹೆಣ’ ಏಕಪಾತ್ರಾಭಿನಯವೂ ಇದೆ.
ಇಬ್ಬರೂ ಬಿಚ್ಚಿಡುವ ಹೊಸ ಲೋಕಕ್ಕೆ ತೆರೆದುಕೊಳ್ಳಲು ಇದು ಸದವಕಾಶ.
ಮೊಗಳ್ಳಿ ಮತ್ತು ಕುಂ ವೀ
ನಿಮಗೆ ಇವೂ ಇಷ್ಟವಾಗಬಹುದು…





0 Comments