ಮೈಲಿಗೆ

ಆದಿತ್ಯ ಪ್ರಸಾದ್ ಪಾಂಡೇಲು

ಸಂತಾಪಗಳು ನೆಪಗಳಿಗಷ್ಟೆ
ಆರೈಕೆ ಹಾರಿಕೆಯ ತೋರಿಕೆಗಳಂತೆ
ಬೆಚ್ಚನೆಯ ಮನೆಗಳಲಿ ಹಬೆಯಾಡುವ ಚಹಾಗಳ
ನಡುವೆ ಫೋಟೊ ಕ್ಲಿಕ್ಕಿಸಿಕೊಳ್ಳುವ ನಮಗೆ
ತಿಳಿದೀತೆ ಕಾಲ ಬಿರುಕುಗಳ ದೀರ್ಘ ಅರ್ಥ!

ಬೆಳಗ ಹೊತ್ತಿಗೂ ಚುಕ್ಕಿ ಬೆಳಕು
ಓರೆಗೆ ಕಾಣುವ ಖಾಲಿ ಒಲೆಯ ಭೀಕರ ನೆರಳು
ತುಂಬಿದ ಚೀಲಗಳಲ್ಲಿ ಸೋರಿ ಹೋದ ನಿದಿರೆಗಳು
ನಾಳೆಗೂ ಸುಡಲು ಕೈ ಕಾಲಿದೆ
ಹೊಟ್ಟೆಗೆ ಕಣ್ಣೀರು ಅದ್ದಿದ ಬಟ್ಟೆಯಿದೆ

ಈಗ ಬೀಳುವ ಕನಸುಗಳಿಗೆಲ್ಲಾ ಉತ್ತರಗಳೇ ಸಿಗುತ್ತಿಲ್ಲ
ಹಳಸಿದ ಮಾತಿನೊಳಗೆ ಕಸವ ಹೆಕ್ಕಿ
ರಸ ಸಿಕ್ಕಿದೆಂತು ಹಾಯಾಗಿ ಚಾಪೆ ಬಿಡಿಸಿದವನು
ನಿದ್ದೆ ಯಾಕೆ ಬಾರದೆಂದು ಯೊಚಿಸುವುದನ್ನೂ ಮರೆತಂತಿದೆ!

ಕೆತ್ತ ಹೊರಟಿರುವ ಶಿಲ್ಪಿಗೂ ಅರಿವಿರಲಿ
ವಿಗ್ರಹದ ಕಳೆ ಮೊಗದ ನಗುವಿಗೆ ಮಾತ್ರ ಸೀಮಿತವಲ್ಲ
ಒಳಗು ಬತ್ತಿ ಹೊಗಿರಲು ಹೊರಗ ನಗುವಿನ ಗೆರೆ
ಮರಳು ಕಾಡೊಳು ಕರಿಮೋಡಗಳು ಸುಂಯ್ಯನೆ ಬೀಸಿ ಹೋದಂತೆ
ಮಳೆ ಬರಲು ವರುಷಗಳೇ ಬೇಕು…

ಆದಿತ್ಯ ಪ್ರಸಾದ್ ಪಾಂಡೇಲು : ವೃತ್ತಿಯಲ್ಲಿ ಎಂಜಿನೀಯರ್. ಪ್ರವೃತ್ತಿಯಲ್ಲಿ ಕವಿ ಮತ್ತು ರಂಗನಟ

‍ಲೇಖಕರು Avadhi

October 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: