ಪಂಡಿತಾರಾಧ್ಯ
ಒಮ್ಮೆ ಅಕ್ಬರ್ ಬೀರಬಲ್ ನನ್ನು ಕೇಳಿದ: ‘ಮೂರ್ಖರ ಜೊತೆಯಲ್ಲಿ ಹೇಗಿರಬೇಕು?’
ಅದಕ್ಕೆ ನಾಳೆ ಉತ್ತರಿಸುವುದಾಗಿ ಬೀರಬಲ್ ಹೇಳಿದ.
ಒಬ್ಬನ್ನು ಕರೆದು ಅವನನ್ನು ಅರಮನೆಗೆ ಕರೆದುಕೊಂಡು ಹೋಗಿ ಚಕ್ರವರ್ತಿಗಳನ್ನು ಪರಿಚಯಿಸುವುದಾಗಿ ತಿಳಿಸಿ,
ಅವರು ಏನು ಕೇಳಿದರೂ ಮೌನಿಯಾಗಿರುವಂತೆ ಸೂಚಿಸಿದ.

ಮರುದಿನ ಬೀರಬಲ್ ಆತನೊಂದಿಗೆ ಅರಮನೆಗೆ ಹೋದ. ‘ ಮಹಾಸ್ವಾಮಿ, ಇವರು ಮಹಾ ಜ್ಞಾನಿ. ನೀವು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ‘ ಎಂದು ಅಕ್ಬರನಿಗೆ ತಿಳಿಸಿದ. ಅಕ್ಬರ್ ತನ್ನ.ಪ್ರಶ್ನೆಯನ್ನು ಕೇಳಿದ, ‘ಮೂರ್ಖರ ಜೊತೆಯಲ್ಲಿ ಹೇಗಿರಬೇಕು?’
ಆ ವ್ಯಕ್ತಿ.ಬೀರಬಲ್ ಹೇಳಿದಂತೆ ಮೌನವಾಗಿದ್ದ. ಬಹುಶಃ ಕೇಳಿಸಿರಲಿಕ್ಕಿಲ್ಲ ಎಂದು ಅಕ್ಬರ್ ಮತ್ತೆ ಕೇಳಿದ. ಮತ್ತೆ ಮತ್ತೆ ಕೇಳಿದ.
ಪರಿಣಾಮ ಮಾತ್ರ ಅಷ್ಟೆ. ಅಕ್ವರನಿಗೆ ತಾಳ್ಮೆ ತಪ್ಪಿತು. ಬೀರಬಲ್ ಕಡೆ ತಿರುಗಿ,
‘ ಈತ ಮಹಾ ಜ್ಞಾನಿ ಎಂದೆ, ನೋಡಿದರೆ ಏನೂ ತಿಳಿದೆ ಮೌನದಿಂದ ಇದ್ದಾನೆ ‘ ಎಂದ.
ಬೀರಬಲ್ ಉತ್ತರಿಸಿದ. ಇಲ್ಲ ಮಹಾಸ್ವಾಮಿ, ನಿಮ್ಮ ಪ್ರಶ್ನೆ ‘ಮೂರ್ಖರ ಜೊತೆಯಲ್ಲಿ ಹೇಗಿರಬೇಕು?’ ಎನ್ನುವುದಕ್ಕೆ
ಅವರು ಈಗಾಗಲೇ ಉತ್ತರಿಸಿದ್ದಾರೆ.
ನೀವು ಅರ್ಥಮಾಡಿಕೊಳ್ಳದೆ ಮತ್ತೆ ಮತ್ತೆ ಕೇಳಿದಾಗಲೂ ಅವರು ಬೇಸರಿಸದೆ ಅಷ್ಟೂ ಬಾರಿ ಉತ್ತರಿಸಿದ್ದಾರೆ!’ ಎಂದ.






olle prasanga sir.
ಆದರೆ ಈ ಬಗೆ ನಮ್ಮ ಸದ್ಯದ ಕಾಲಮಾನದಲ್ಲಿ ಉಪಯೋಗವಿಲ್ಲ.
ನಾವು ಮೌನವಾಗಿದ್ದರೆ ಮೂರ್ಖರು ಇನ್ನೂ ಜೋರಾಗಿ ಮಾತಾಡಿ ಅವರ ಸತ್ಯವನ್ನೇ ಪ್ರತಿಷ್ಟಾಪಿಸುತ್ತಾರೆ. ಕೊನೆಗೆ ಜನರು ಅವರನ್ನೇ ಕೇಳತೊಡಗಿ ನಿಜವಾಗಿ ಮಾತಾಡಬೇಕಾದವರು ಮೂಲೆಗುಂಪಾಗುತ್ತಾರೆ.
ಮದುವೆಯಾಗಿದ್ದರೆ ಇದು ಇನ್ನೂ ಚೆನ್ನಾಗಿ ಅರ್ಥವಾಗುತ್ತೆ!