ಮುರಳಿ ಕೃಷ್ಣ
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಕಲಾಪ್ರದರ್ಶನವೂ ಯುವಕಲಾವಿದೆಯೊಡನೆ ಮಾತುಕತೆಯೂ
ಸುಮಾರು ಎರಡು ವಾರಗಳ ಹಿಂದೆ ಚಿತ್ರಕಲಾ ಪರಿಷತ್ತಿನಲ್ಲಿ ಎರಡು ಚಿತ್ರಕಲಾ ಪರ್ದರ್ಶನಗಳನ್ನು ವೀಕ್ಷಿಸುವ ಸಂದರ್ಭ ಒದಗಿ ಬಂದಿತು. ನಾನು ಪೈಂಟಿಂಗ್ಸ್ ಗಳನ್ನು ವೀಕ್ಷಿಸುತ್ತಿದ್ದಾಗ ಹತ್ತಿರದಲ್ಲೇ ಯುವತಿಯೊಬ್ಬಳು ನಿಂತಿದ್ದಳು. ನಾನು ” ನೀವು ಕಲಾವಿದೆಯೇ?” ಎಂದು ಪ್ರಶ್ನಿಸಿದಾಗ, ಆಕೆ ಹೌದೆಂದಳು. ಬಹುಶಃ ನನ್ನ ಅವತಾರವನ್ನು ಕಂಡು, ನನಗೆ ಅದೇ ಪ್ರಶ್ನೆ ಆಕೆಯಿಂದ ಬಂದಿತು. ನಾನು ಒಬ್ಬ ಸಣ್ಣ ಲೇಖಕ ಎಂದು ತಿಳಿಸಿದೆ. ಸುಮಾರು 10-15 ನಿಮಿಷಗಳ ಕಾಲ ಮಾತನಾಡಿದೆವು.
ಆಕೆ ಕೇರಳದ ಕೊಚ್ಚಿಯ ‘ ಸಾಮರಸ್ಯ ‘ ಎಂಬ ಚಿತ್ರಕಲಾ ತಂಡದ ಸುಮಾರು 30 ಕಲಾವಿದರ ಜೊತೆ ಬೆಂಗಳೂರಿಗೆ ಬಂದಿದ್ದಳು. ಕೊಚ್ಚಿ ಎಂದಾಕ್ಷಣ ಅಲ್ಲಿ ನಡೆದ Biennale 2023ರ ಬಗೆಗೆ ಪ್ರಸ್ತಾಪಿಸಿದೆ. ಆಕೆ ಇನ್ನೂ ನಡೆಯುತ್ತಿದೆ ಎಂದಳು. ಮೂಲತಃ ಒಡಿಶಾದವಳಾದ, ಕೊಚ್ಚಿಯಲ್ಲಿ ನೆಲೆಸಿರುವ ಆ ಯುವತಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ್ದಾಳೆ. ಆದರೆ ಅದನ್ನು ಬದಿಗಿಟ್ಟು ಕಲಾಪ್ರಪಂಚದ ಭಾಗವಾಗಲು ನಿರ್ಧರಿಸಿ, ಅದರಂತೆ ಕಾರ್ಯಪ್ರವೃತ್ತರಾಗಿದ್ದಾಳೆ! ತನ್ನ ಮನೆಯವರೆಲ್ಲರೂ ಕಲಾಭಿಮಾನಿಗಳು ಎಂದು ತಿಳಿಸಿದಳು.
ಕೊಚ್ಚಿಯಲ್ಲಿ ಚಿತ್ರಕಲಾ ವಾತಾವರಣ ಚೆನ್ನಾಗಿದೆ ಎಂದಳು. ಪಕ್ಕದಲ್ಲಿದ್ದ ನನ್ನ ಮಗ ಅಭಿನವ್ ಮುರಳಿಯನ್ನು ಪರಿಚಯಿಸುತ್ತ ” ಈತನೂ ಒಬ್ಬ ಕಲಾವಿದ ” ಎಂದು ತಿಳಿಸಿದೆ. ನನ್ನ ಮಗ ತಾನೊಬ್ಬ ಹಾಬಿ ಆರ್ಟಿಸ್ಟ್ ಎಂದು ಸ್ಪಷ್ಟೀಕರಣವನ್ನು ನೀಡಿದ. ಅದಕ್ಕೆ ಆಕೆ ” ನಾವೆಲ್ಲರೂ ಹಾಬಿ ಆರ್ಟಿಸ್ಟ್ ಗಳೇ”ಎಂದು ನಸುನಕ್ಕಳು! ಆಕೆಯ 2-3 ಪೈಂಟಿಂಗ್ಸ್ ಗಳು ಗಮನಾರ್ಹವಾಗಿದ್ದವು. ಪ್ರದರ್ಶನದಿಂದ ಹೊರಗೆ ಹೋಗುವಾಗ ‘ Visitors Book ‘ ನಲ್ಲಿ ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ ಎಂದಳು. ನಾವು ಹಾಗೇ ಮಾಡಿದೆವು.
ನೀವು ಏನೇ ಹೇಳ್ರೀ, ಕ್ರಿಯಾಶೀಲ, ಸೃಜನಶೀಲ ಯುವಕ-ಯುವತಿಯರ ಜೊತೆ ಸ್ವಲ್ಪ ಸಮಯವನ್ನು ಕಳೆದರೆ ನನಗೆ ಒಂದು ತೆರನಾದ ಚೈತನ್ಯ ಬರುತ್ತದೆ !
0 ಪ್ರತಿಕ್ರಿಯೆಗಳು