ಮತ್ತೆ ಆ ಬ್ಲಾಗ್ ಗೆ ಜೀವ ಬಂದಿದೆ. ನಮಗೂ ಒಂದು ಸಮಾಧಾನ. ಮಂಗಳೂರಿನ ಪುಸ್ತಕ ಪ್ರೇಮಿ ನರೇಂದ್ರ ಪೈ ಅವರು ಒಂದಿಷ್ಟು ಕಿರಿಕಿರಿಯಿಂದಾಗಿ ತಮ್ಮ ‘ಓದುವ ಹವ್ಯಾಸ’ ಎಂಬ ಬ್ಲಾಗ್ ಗೆ ತಿಲಾಂಜಲಿ ಇಟ್ಟಿದ್ದರು. ಅವರ ಬರಹಗಳನ್ನು ನಿರಂತರವಾಗಿ ಓದುತ್ತಿದ್ದ ‘ಅವಧಿ’ ಎಲ್ಲೋ ಒಳ್ಳೆಯ ಬ್ಲಾಗ್ ಗಳು ಕಣ್ಣು ಮುಚ್ಚುತ್ತಿದೆಯಲ್ಲಾ ಎಂಬ ಆತಂಕಕ್ಕೆ ಒಳಗಾಯಿತು.

ಜೋಗಿ ಇತ್ತೀಚಿಗೆ ತಾನೆ ಬ್ಲಾಗ್ ಬಾಗಿಲು ಎಳೆದು ದೇಶಾಂತರ ಹೊರಟು ಹೋದರು. ಆದರೆ ನಮಗಂತೂ ಒಂದು ನಂಬಿಕೆ ಇದೆ- ‘ಬರೆಯಲು ಬಂದವನು ಬ್ಲಾಗ್ ಗೆ ಬಾರನೇ…’ ಅಂತ. ಜೋಗಿ ಮತ್ತೆ ಅಷ್ಟೇ ದಿಢೀರನೆ ಬ್ಲಾಗ್ ಬಾಗಿಲು ತೆರೆದು ಕೂಡುವ ಆಸಾಮಿಯೇ. ಹಾಗಾಗಿ ಅಂತಹ ಆತಂಕವೇನೂ ಇಲ್ಲ. ಆದರೆ ಎಲ್ಲಿಂದಲೋ ಎರಗಿ ಬರುವ ಅನಾಮಿಕ ಅಥವಾ ಮಾರುವೇಷದ ಪತ್ರಗಳಿಂದ ಬಾಗಿಲು ಮುಚ್ಚಿದ್ದು ಇದೇ ಮೊದಲೇನೋ.
ಹಾಗಾಗಿ ಅವಧಿ ನರೇಂದ್ರ ಪೈಗಳ ಮನಸ್ಥಿತಿಗೆ ಮಾತು ಕೊಟ್ಟಿತ್ತು. ನಮ್ಮ ಓದುಗರನೇಕರು ಪೈ ಗಳಿಗೆ ಫೋನ್ ಮಾಡಿ, ಮೇಲ್ ಮಾಡಿ ಸಮಾಧಾನ ಹೇಳಿದ್ದಾರೆ. ‘ಕಡಲ ತೀರ’ದ ಸಂದೀಪ್ ಕಾಮತ್ ಅವರಂತೂ ಓದುವ ಹವ್ಯಾಸ ಕ್ಕೆ ಎರಡನೇ ರಂಗಪ್ರವೇಶ ಒದಗಿಸಿದ್ದಾರೆ.
ಇಲ್ಲಿ ನರೇಂದ್ರ ಪೈಗಳ ಪತ್ರ ಪ್ರಕಟಿಸುತ್ತಿದ್ದೇವೆ. ಅನಾಮಿಕ ಪತ್ರ ಯಾವ ಬ್ಲಾಗಿಗರಿಗೂ ಹೊಸದಲ್ಲ. ಅದರಲ್ಲೂ ಟೀನಾ ಅವರನ್ನು ಕೇಳಿ ನೋಡಿ. ಒಂದು ಪಟ್ಟಿಯನ್ನೇ ಮುಂದಿಡುತ್ತಾರೆ. ಹಾಗಾಗಿ ನಾವು ಮನನೋಯಿಸಿಕೊಳ್ಳಬೇಕಾದದ್ಧೇನೂ ಇಲ್ಲ ಎನ್ನುತ್ತಾ ಈ ಪ್ರಕರಣಕ್ಕೆ ‘ಜಯಮಂಗಲಂ ನಿತ್ಯ ಶುಭ ಮಂಗಳಂ’
I shall inform you that my deleted blog is restored back by blogger team. All the credit shall go to Mr Sandeep Kamath who took lot of trouble to get this done. This has become possible because of Avadhi (odubazar) without which I would not have thought much about my deleted blog.
Those who emailed me and called me to show their concern about the issue were all informed about the end of blog through odubazar.
Somewhere I do feel committed to the books and the authors whose books have been reviewed by me in this blog.
Thank you and your readers for all the support and wishes.
Regards,
Narendra
ಮತ್ತೆ ಆ ಬ್ಲಾಗ್ ಗೆ ಜೀವ ಬಂದಿದೆ


ಅವಧಿ ಫಲಶೃತಿ,
ನಿಮ್ಮ ಪ್ರಯತ್ನದಿಂದ ನನಗಿಷ್ಟವಾದ ಕನ್ನಡದ ಉತ್ತಮ ಬ್ಲಾಗೊಂದು ಮತ್ತೆ ಕಾಣುವಂತಾಯಿತು.
ಧನ್ಯವಾದಗಳು ಅವಧಿ ಹಾಗು ನರೇಂದ್ರ ಪೈ ಅವರಿಗೆ,
-ಚಂದಿನ
thanx avadhi
ಅವಧಿಗೆ ಧನ್ಯವಾದಗಳು.
ನಾವಡ
I liked your blog,good job done Keep going Visit my website http://www.vanihegde.wordpress.com