– ಗೋಪಾಲ ವಾಜಪೇಯಿ
ಐದು ಐದು ಹತ್ತು
ಎರಡೂ ಕೈ ಒತ್ತು
ಹಾಂಗs ಮ್ಯಾಲಕ ಎತ್ತು…
ಮನ ‘ನಮ’ ಆಗ್ತದ…
-ದ. ರಾ. ಬೇಂದ್ರೆ
(ಇದು ವರಕವಿಯ ಪದಚಮತ್ಕಾರ. ಅಷ್ಟೇ ಅಲ್ಲ, ಸುಲಭ ಆಧ್ಯಾತ್ಮ ಸಾರ. ಅವರು ಮೊದಲು ಎರಡೂ ಹಸ್ತಗಳನ್ನು, ಬೆರಳುಗಳನ್ನು ತೋರಿಸಿ ಮೇಲಿನಂತೆ ಹೇಳಿ ಮಾತು ಶುರುಮಾಡುತ್ತಿದ್ದರು. ಅವರು ಎರಡೂ ಹಸ್ತಗಳನ್ನು ಬಿಡಿಸಿ ಎಲ್ಲರಿಗೂ ಕಾಣುವಂತೆ ಮೇಳಕ್ಕೆ ಎತ್ತಿ ಹಿಡಿದಾಗ, ಸಂಪೂರ್ಣ ಶರಣಾಗತಿಯ ಭಾವ ಅವರಲ್ಲಿ ಕಾಣುತ್ತಿತ್ತು. ಹತ್ತೂ ಬೆರಳುಗಳನ್ನು ಒಂದಕ್ಕೊಂದು ಒತ್ತಿ, ಎರಡೂ ಕೈಗಳನ್ನು ಜೋಡಿಸಿ, ಮೇಲಕ್ಕೆ ಎತ್ತಿದಾಗ, ಸಭೆಗೆ ವಂದಿಸುತ್ತಿರುವಂತೆ ಭಾಸವಾಗುತ್ತಿತ್ತು. ಬೇಂದ್ರೆ ಅಂದರೆ ಬೇಂದ್ರೆಯೇ…)
]]>





0 Comments