ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಲಮುರುಳಿಗೆ ಸೀತಾರಾಂ ಸಲ್ಯೂಟ್

t n seetaram art

ಟಿ ಎನ್ ಸೀತಾರಾಂ 

ಹೌದು …ಜೇನದನಿ ಅಂದರೆ ನನಗೆ ಅವರೇ ನೆನಪು ಬರೋದು…

ಬಾಲಮುರಳಿ ಕೃಷ್ಣ, ಭೀಮಸೇನ ಜೋಷಿ ಯವರ ಹಾಡುಗಳನ್ನು ಕೇಳಲು ‘ಸಂಧ್ಯಾರಾಗ’ ಚಿತ್ರವನ್ನು ಕನಿಷ್ಠ ನಾಲ್ಕು ಬಾರಿ ನೋಡಿದ್ದೇನೆ… ರೆಕಾರ್ಡ್ ಗೀಚು ಬಿದ್ದು ಹಾಳಾಗುವವರೆಗೂ ರೆಕಾರ್ಡ್ ಹಾಕಿಕೊಂಡು ಕೇಳಿದ್ದೇನೆ… ಸ್ಟಾರ್ ಹಾಡುಗಾರ…
ಸಾವು ಅನಿವಾರ್ಯವಾದರೂ ಚಿಕ್ಕಂದಿನ ದಿನಗಳಿಗೆ ಕೊಂಚವಾದರೂ ಮಾಧುರ್ಯ ತಂದ ಬಾಲ ಮುರಳಿ ಕೃಷ್ಣರ ಸಾವು
ಮನಸಿಗೆ ವಿಷಾದ ತಂದಿದೆ..

ಬಾಲಚಂದರ್ ವೀಣೆ, ಮಹಾಲಿಂಗಂ ಕೊಳಲು ಇವರಿಬ್ಬರ ಗಾಯನ… ರಾಮ ನವಮಿಯ ಉಲ್ಲಾಸದ ನೆನಪುಗಳನ್ನು ತರುತ್ತದೆ… ರಾಮನವಮಿ ಅಂದರೆ ಆಗತಾನೇ ಶುರುವಾಗುತ್ತಿದ್ದ ಬೇಸಿಗೆಯ ರಜ…

ಆಗ ಹೈಸ್ಕೂಲ್ ಓದುತ್ತಿದ್ದೆ…  ಎಷ್ಟು ಸಂತೋಷದ
ದಿನಗಳು ಅವು… ಗಂಧರ್ವರು ಅನಿಸುತ್ತಿತ್ತು… ಈಗ ಯಾರೂ ಬದುಕಿಲ್ಲ… ಅವರನ್ನು ಮೀರಿಸುವ ಸಂಗೀತಗಾರರು ಈಗ ಬಂದಿರಬಹುದು, ಗೊತ್ತಿಲ್ಲ… ಆದರೆ ಬಾಲ್ಯದ ಹೀರೋಗಳನ್ನು ಯಾರೂ ಸೋಲಿಸಲಾರರು…

ನಿಮ್ಮ ನೆನಪಿಗೊಂದು. ಸವಿ ಸೆಲ್ಯೂಟ್ ಬಾಲಮುರಳಿ ಕೃಷ್ಣ ಸರ್…

‍ಲೇಖಕರು Admin

23 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading