ದಿಲಾವರ್ ರಾಮದುರ್ಗ

ಹೆಗಡೆ ನಗರದ ಬಾಲಾಜಿ ಕೃಪಾ ಬಡಾವಣೆಯಲ್ಲಿ ನನ್ನ ಮನೆ ಇದೆ. ಬಡಾವಣೆಯ ಹೆಸರು ಒಂದು ಧರ್ಮಸೂಚಿ. ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಸ್ಥೆಯೂ ಇದೆ. ವರ್ಮಾ ಎನ್ನುವವರು ಅದರ ಅಧ್ಯಕ್ಷ.
ಭಾನುವಾರ ಬೆಳಿಗ್ಗೆ, ಗಣಪತಿ ಉತ್ಸವ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಚಂದಾ ಕೊಡಲೇಬೇಕು ಅಂದರು. ವರ್ಮಾ ಸಾಹೇಬರೆ, ಬಡಾವಣೆಯಲ್ಲಿ ಸಂಸ್ಥೆಯ ಹಣದಿಂದ ಗಣಪತಿ ಹಬ್ಬ ಆಚರಿಸುವುದಾದರೆ, ರಂಜಾನ್, ಈದ್ ಮಿಲಾದ್, ಕ್ರಿಸ್ ಮಸ್, ಬೌದ್ಧಪೂರ್ಣಿಮೆ… ಕೂಡ ಆಚರಿಸಬಹುದಲ್ಲ… ಡೆಮಾಕ್ರೆಟಿಕ್ ದೇಶದ ಸಂವಿಧಾನದ ಆಶಯದಂತೆ ಬಡಾವಣೆಯ ಸಂಸ್ಥೆಯೂ ಕಾನೂನು ರೀತ್ಯ ಡೆಮಾಕ್ರಟಿಕ್ ಆಗಿರಲೇಬೇಕಲ್ಲವೇ? ಅಂದೆ. ಅವರು, ಹ್ಞೂ… ವಿಚಾರ ಏನೋ ಚೆನ್ನಾಗಿದೆ ಅಂದರು. ಜತೆಗಿದ್ದವರಲ್ಲೊಬ್ಬರು ಸರ್ ಎಷ್ಟು ರೂಪಾಯಿ ರಸೀದಿ ಹರಿಯಲಿ ಎಂದು ಕೇಳಿದರು.






“Sangha-samsthegalu kaanoonu reetyalalli maatra demcratic, kaaryaroopadalli alla.” Short, sweet and thought provoking message.