ಹಾಗೆ ಇವತ್ತು ಪೇಟೆ ಕಡೆ ಹೋಗಿದ್ದಾಗ ನವಕನಾ೯ಟಕ ಪಬ್ಲಿಕೇಷನ್ ನಿಂದ ನನ್ನ ಇಷ್ಟದ ಲೇಖಕ ಪೂಣ೯ಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನು ಖರೀದಿಸಿದೆ. ಎಲ್ಲಾ ಓದಿದ್ದ ಪುಸ್ತಕಗಳೇ. ಪುಸ್ತಕ ಕೊಂಡು ಹೋಗಿದ್ದ ಗೆಳೆಯರು ಪುಸ್ತಕ ಕೊಡುವುದನ್ನು ಮರೆತಿದ್ದರು. ಹೇಗೂ ಕಣ್ಣಿಗೆ ಕಟ್ಟುವಂತಹ ಬೈಂಡಿಂಗ್ ನ ತೇಜಸ್ವಿ ಯ 10 ಪುಸ್ತಕಗಳನ್ನು ಒಂದೇ ಬೀಸಿಗೆ ಕೊಂಡು ತಂದೆ.
ನಮ್ಮ ಝೆನ್ ಟೀಮಿ ವತಿಯಿಂದ ತೇಜಸ್ವಿ ಅವರ `ಜುಗಾರಿ ಕ್ರಾಸ್’, ರಹಸ್ಯ ವಿಶ್ವ, `ಅಬಚೂರಿನ ಪೋಸ್ಟಾಫೀಸ್’ ನಾಟಕಗಳನ್ನು ಆಡಿಸಿದ್ದೆವು. ಮೊನ್ನೆ ಹೆಸರಾಂತ ರಂಗ ನಿದೇ೯ಶಕರೊಬ್ಬರು ಸಿಕ್ಕಿದ್ದರು. ಹೊಸ ನಾಟಕ ಮಾಡುವ ತಯಾರಿಯಲ್ಲಿದ್ದರು. ತೇಜಸ್ವಿ ಅವರ `ಮಾಯಾ ಲೋಕ’ ಮಾಡಿಸಿ ಎಂದು ಒತ್ತಾಯ ಕೂಡ ಮಾಡಿದೆ. ಇರಲಿ. ಕವಾ೯ಲೂ, ಚಿದಂಬರ ರಹಸ್ಯ, ಜುಗಾರಿಕ್ರಾಸ್, ಪರಿಸರದ ಕಥೆಗಳು, ಅಣ್ಣನ ನೆನಪು ಮುಂತಾದ ಪುಸ್ತಕಗಳು ಈಗ ನನ್ನ ಮುಂದೆ…
–ಉಗಮ ಶ್ರೀನಿವಾಸ್]]>
ಪೇಟೆಯಲ್ಲಿ ಸಿಕ್ಕ ತೇಜಸ್ವಿ..
ನಿಮಗೆ ಇವೂ ಇಷ್ಟವಾಗಬಹುದು…





0 Comments