ಪುಟ್ಟ ಭಾಗೀರಥಿ

chetana2.jpg“ಭಾಮಿನಿ ಷಟ್ಪದಿ”

524033077_233da54062.jpg

ಚೇತನಾ ತೀರ್ಥಹಳ್ಳಿ

ಷ್ಟೊಂದು ಕಂಬ ಸಾಲು?
ಕಂಬ ಕಂಬ ತಬ್ಬಿ ನಿಂತಿವೆ ಉಪ್ಪಿನಾಟದ ಮಕ್ಕಳು.
ಎಲ್ಲಿ ಹೋದವು ಆ ನನ್ನ ದಿನಗಳು?
ಉಪ್ಪು ಬೇಕಾ ಉಪ್ಪು…
ಉಪ್ಪಿನ ಋಣ ತೀರಿಸಬೇಕಿನ್ನೂ.

ಅರಳಿ ಮರದ ಕೆಳಗೆ ಅನಾಥೆ, ಅಳುತ್ತಿದ್ದೆನಂತೆ.
ಅಂಗೈಲಿಟ್ಟು ಸಾಕಿದರು. ನಿಜ.
ಕಣ್ರೆಪ್ಪೆ ಹಾಗೆ ಕಾದರು.
ಈಗಿನ ಕಾಲದಲ್ಲಿ ಹೀಗೆ… ಅಪರೂಪದ ಜನ-
ಅಪ್ಪ, ಅಮ್ಮ.

ಅವರ ಮನೆಗೆ ಹೀಗೊಬ್ಬ ಬರುತ್ತಾನೆ ಯಾವಾಗಲೂ…
ಹದಿನಾಲ್ಕಕ್ಕೇ ಮದುವೆಯಾಗಿತ್ತಂತೆ.
ಈಗ ಇಪ್ಪತ್ತು. ಚೊಚ್ಚಲ ಬಾಣಂತಿ ಹೆಂಡತಿ, ಹಾಗೇ ಹೊರಟುಹೋದಳು.
ಅಂವ ಪುರೋಹಿತ.
ಹೆಂಡತಿ ಸತ್ತು ಹೊಟ್ಟೆಪಾಡಿಗೆ ಸೊನ್ನೆ.
ಮದುವೆ, ಮುಂಜಿ, ತಿಥಿ…
ಜೀವನ ನಡೆಯಬೇಕು.

ಛೆ! ನಾನು ನೆರೆಯಲೇಬಾರದಿತ್ತು.
ವಾರಗೆಯ ಹುಡುಗಿಯರೀಗ ಹೈಸ್ಕೂಲು ಮುಗಿಸುತ್ತಾರೆ.
ಓ! ನಾಳೆ ತಪ್ತ ಮುದ್ರಾಂಕ ಧಾರಣೆ ನನಗೆ!!
ಯಾವ ಜಾತಿಯೋ… ನಾನು ಯಾವ ಕುಲವೋ?
ದೋಷವೆಲ್ಲ ಸುಟ್ಟುಹೋಗುವುದಂತೆ!

ಅಮ್ಮ ಯಾರ ಹತ್ತಿರವೋ ಹೆಳುತ್ತಿದ್ದಾರೆ-
“ಜೋಡು ಜಡೆಯ ಪುಟ್ಟ ಭಾಗೀರಥಿ,
ಇನ್ನು “ಆಚಾರ್ರ ಹೆಂಡತಿ”ಯಾಗುತ್ತಾಳೆ…
ಭಾಗಮ್ಮಳಾಗಿ, ಅವರಿವರಿತ್ತ ಬಾಗಿನ ಹೊರುತ್ತಾಳೆ!”

‍ಲೇಖಕರು avadhi

November 3, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. mallikarjun

    Nice poem

    ಎಲ್ಲಿ ಹೋದವು ಆ ನನ್ನ ದಿನಗಳು?
    ಉಪ್ಪು ಬೇಕಾ ಉಪ್ಪು…
    ಉಪ್ಪಿನ ಋಣ ತೀರಿಸಬೇಕಿನ್ನೂ. These nice lines

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: