ನಾವು ಬ್ಲಾಗಿಗರು ಭಯೋತ್ಪಾದನೆ ವಿರುದ್ಧ ಒಂದು ಆಂದೋಲನ ಯಾಕೆ ಮಾಡಬಾರದು?
ನಮ್ಮೆಲ್ಲರ ಬ್ಲಾಗಿನ ಹಣೆಪಟ್ಟಿ ಬದಲಾಯಿಸುವುದು. ಇಲ್ಲ ಅಂದರೆ ಒಂದು ಚಿಕ್ಕ ಚಿಹ್ನೆಯನ್ನು ಬ್ಲಾಗಿನಲ್ಲಿಪ್ರದರ್ಶಿಸುವುದು.
ಮಾನ್ಯ ಅಪಾರ ಅವರೇ,
ನಮಗೆಲ್ಲ ಅಂತ ಹೀಗೊಂದು ಲಾಂಛನ ಮಾಡಿಕೊಡುತ್ತೀರಾ?
ಮಾನ್ಯ ಮೋಹನ್ ಅವರೇ,
ನಿಮ್ಮ ಮೀಡಿಯಾ ಹೌಸ್ ವತಿಯಿಂದ ಈ ಲಾಂಛನವುಳ್ಳ ಸಾಮನುಗಳನ್ನು ಮಾರುಕಟ್ಟೆ ಮಾಡಬಹುದಲ್ಲವೇ?ಹೇಗೆ ಹನುಮಾನ್ ಕೀ ಬಂಚಗಳು, ವಾಚುಗಳು ಬಂದವೋ ಹಾಗೆ.
ಅದರಲ್ಲಿ ಬಂದ ಲಾಭದ ಒಂದಾಂಶದಲ್ಲಿ ಭಯೋತ್ಪಾನೆಯಿನ್ದ ಸತ್ತ ಜನರಿಗೆ ಸಹಾಯ ಮಾಡಬಹುದಲ್ಲವೇ ?
ಹಾಗೆನೇ ಆದರಿಂದಲೇ ಟೀನಾ ಅವರು ಹೇಳಿದ ಹಾಗೆ ಸಾಮಾನ್ಯ ಜನರ ಸಂಘಟನೆ ಕಟ್ಟಬಾರದೇಕೆ ? (”ಈ ಬ್ಲೇಮ್ ಗೇಮುಗಳನ್ನು ನಾವೆ ಆಚೆ ಬಿಸಾಕಿ ಒಟ್ಟುಗೂಡಿ ಲೋಕಲ್ ಸರ್ವೇಲೆನ್ಸ್ ಟೀಮುಗಳನ್ನೇಕೆ ರಚಿಸಿಕೊಳ್ಳಬಾರದು. ಆರಾಮವಾಗಿ ಕೆಲಸವಿಲ್ಲದೆ ತಿರುಗುವ ಯುವಕರಿದ್ದಾರೆ, ಮನೆಯಲ್ಲಿ ಕುಳಿತಿರುವ ಯುವತಿಯರಿದಾರೆ. ಯಾವುದೆ ಮನೆಗೆ ಯಾರೆ ಹೊಸಬರು ಬಂದರೂ ಟೀಮಿಗೆ ಮಾಹಿತಿಸಿಗಬೇಕು. ಯಾವುದೆ ಹೊಟೆಲಿಗೆ ಜನ ಬರುವ ಮೊದಲು ತಪಾಸಣೆ ನಡೆಯಬೇಕು. ಹೀಗೆ ಕೈಹೊಸಕಿಕೊಂಡು ಕೂರುವ ಬದಲು ಏನಾದರು ಮಾಡಬೇಕು. ನಾವು ಕೈಲಾಗದವರಲ್ಲ ಎಂದು ತೋರಬೇಕು”-ನೆಲದ ಮಾತು ಬ್ಲಾಗಿನಿಂದ)
ನಿಮ್ಮೆಲ್ಲರನ್ನೂ ಹೀಗೆ ಎಳೆದು ತಂದಿದ್ದಕ್ಕೆ ಕ್ಷಮೆಯಿರಲಿ. ನನ್ನದು ಬಾಲಿಶ ಐಡಿಯಾ ಎಂದು ಅನ್ನಿಸಿದರೆ ಸ್ಸಾರಿ.
ನನ್ನ ಓದುಗರೇ , ಹೀಗೆ ಮಾಡೋಣವೇ? ಏನಂತೀರಿ ??
-ನೀಲಾಂಜಲ
ಮಾನ್ಯ ಅಪಾರ ಅವರೇ,
ನಮಗೆಲ್ಲ ಅಂತ ಹೀಗೊಂದು ಲಾಂಛನ ಮಾಡಿಕೊಡುತ್ತೀರಾ?
ಮಾನ್ಯ ಮೋಹನ್ ಅವರೇ,
ನಿಮ್ಮ ಮೀಡಿಯಾ ಹೌಸ್ ವತಿಯಿಂದ ಈ ಲಾಂಛನವುಳ್ಳ ಸಾಮನುಗಳನ್ನು ಮಾರುಕಟ್ಟೆ ಮಾಡಬಹುದಲ್ಲವೇ?ಹೇಗೆ ಹನುಮಾನ್ ಕೀ ಬಂಚಗಳು, ವಾಚುಗಳು ಬಂದವೋ ಹಾಗೆ.
ಅದರಲ್ಲಿ ಬಂದ ಲಾಭದ ಒಂದಾಂಶದಲ್ಲಿ ಭಯೋತ್ಪಾನೆಯಿನ್ದ ಸತ್ತ ಜನರಿಗೆ ಸಹಾಯ ಮಾಡಬಹುದಲ್ಲವೇ ?
ಹಾಗೆನೇ ಆದರಿಂದಲೇ ಟೀನಾ ಅವರು ಹೇಳಿದ ಹಾಗೆ ಸಾಮಾನ್ಯ ಜನರ ಸಂಘಟನೆ ಕಟ್ಟಬಾರದೇಕೆ ? (”ಈ ಬ್ಲೇಮ್ ಗೇಮುಗಳನ್ನು ನಾವೆ ಆಚೆ ಬಿಸಾಕಿ ಒಟ್ಟುಗೂಡಿ ಲೋಕಲ್ ಸರ್ವೇಲೆನ್ಸ್ ಟೀಮುಗಳನ್ನೇಕೆ ರಚಿಸಿಕೊಳ್ಳಬಾರದು. ಆರಾಮವಾಗಿ ಕೆಲಸವಿಲ್ಲದೆ ತಿರುಗುವ ಯುವಕರಿದ್ದಾರೆ, ಮನೆಯಲ್ಲಿ ಕುಳಿತಿರುವ ಯುವತಿಯರಿದಾರೆ. ಯಾವುದೆ ಮನೆಗೆ ಯಾರೆ ಹೊಸಬರು ಬಂದರೂ ಟೀಮಿಗೆ ಮಾಹಿತಿಸಿಗಬೇಕು. ಯಾವುದೆ ಹೊಟೆಲಿಗೆ ಜನ ಬರುವ ಮೊದಲು ತಪಾಸಣೆ ನಡೆಯಬೇಕು. ಹೀಗೆ ಕೈಹೊಸಕಿಕೊಂಡು ಕೂರುವ ಬದಲು ಏನಾದರು ಮಾಡಬೇಕು. ನಾವು ಕೈಲಾಗದವರಲ್ಲ ಎಂದು ತೋರಬೇಕು”-ನೆಲದ ಮಾತು ಬ್ಲಾಗಿನಿಂದ)
ನಿಮ್ಮೆಲ್ಲರನ್ನೂ ಹೀಗೆ ಎಳೆದು ತಂದಿದ್ದಕ್ಕೆ ಕ್ಷಮೆಯಿರಲಿ. ನನ್ನದು ಬಾಲಿಶ ಐಡಿಯಾ ಎಂದು ಅನ್ನಿಸಿದರೆ ಸ್ಸಾರಿ.
ನನ್ನ ಓದುಗರೇ , ಹೀಗೆ ಮಾಡೋಣವೇ? ಏನಂತೀರಿ ??
-ನೀಲಾಂಜಲ



thanx for supporting
ನೀಲಾಂಜಲ,
ನಾನು ನಿಮ್ಮೊಂದಿಗೇ ರೆಡಿಯಾಗಿದ್ದೇನೆ 🙂
Very constructive idea, I am in.
ನಾನು ರೆಡಿ.
ನಾನು ನಿಮ್ಮೊಂದಿಗಿದ್ದೇನೆ.
ನೀಲಾಂಜನ ಅವರೇ ನಿಮ್ಮ ಆಲೋಚನೆ ಸರಿಯಾಗಿಯೇ ಇದೆ. ’ಬರ್ಕ್ವೈಟ್ ಕಂಡ ಭಾರತ’ ಪುಸ್ತಕದಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಿಂದ ನಡೆದ ಕೋಮುದಳ್ಳುರಿ ಸಮಯದಲ್ಲಿ ಬಟ್ಟೆ ಗಿರಣಿ ಕಾರ್ಮಿಕರು ಸಂಘಟಿತರಾಗಿದ್ದರಿಂದ ಅಲ್ಲಿ ಅಷ್ಟಾಗಿ ಕೋಮು ಗಲಭೆ ನಡೆಯಲಿಲ್ಲ ಎಂಬದನ್ನು ದಾಖಲಿಸಿದ್ದಾರೆ. ಅಂದರೆ ಜನಸಾಮಾನ್ಯರಿಗೆ ಬಾಧಿಸುವ ಸಮಸ್ಯೆಗಳು, ದುಃದುಮ್ಮಾನುಗಳಿಗೆ ಸ್ಪಂದನೆ ಈ ಬಗ್ಗೆ ನಾವು ಮಾತನಾಡತೊಡಗಿದರೆ, ಈ ಬಗ್ಗೆ ಅವರ ಸಂಘಟನೆ, ಒಡನಾಟ ಬೆಳೆಸಿಕೊಂಡರೆ ಖಂಡಿತ ಅಲ್ಲಿ ಮೂಲಭೂತವಾದ, ಭಯೋತ್ಪಾದಕ ಚಟುವಟಿಕೆಯನ್ನು ತಡೆಯಬಹುದು.
-ಪರುಶುರಾಮ ಕಲಾಲ್
pratikriye hege thorisabeku annuva gondaladalli-
ddatha samayadalli idondu olleya yojane.