ಈ ತಿಂಗಳ 17, ಅಂದರೆ ಬರುವ ಭಾನುವಾರ ಬೆಳಗ್ಗೆ 10 ರಿಂದ 12-30 ರವರೆಗೆ ನೀವು ನಮ್ಮ ಜೊತೆ ಇರುತ್ತೀರಿ.
ನಿಮ್ಮ ಅಮೂಲ್ಯ ಎರಡೂವರೆ ಘಂಟೆಯನ್ನು ನಮಗೆ ನೀಡಲೇಬೇಕು ಎಂಬ ಹಕ್ಕೊತ್ತಾಯ ನಮ್ಮದು.
ನನ್ನ ಮೀಡಿಯಾ ಬರವಣಿಗೆ ‘ಮೀಡಿಯಾ ಮಿರ್ಚಿ’ ಹಾಗೂ ನಾನು ಬಂದ ಕಾಲದತ್ತ ಹೊರಳಿ ನೋಡಿದ ‘ಡೋರ್ ನಂ 142’ ಬಿಡುಗಡೆಯಾಗುತ್ತಿದೆ.
ಜೋಗಿಯ ಹೊಸ ಕಾದಂಬರಿ ‘ಊರ್ಮಿಳೆ’ ಸಹಾ ಈ ಸಂಭ್ರಮದಲ್ಲಿ ಜೊತೆ ಸೇರಲಿದೆ.
ಈ ಮೂರೂ ಪುಸ್ತಕಗಳು ಅಂಕಿತ ಪುಸ್ತಕದ ಪ್ರಕಾಶ್-ಪ್ರಭಾ ಕಂಬತ್ತಳ್ಳಿ ಅವರ ಕೊಡುಗೆ
ಜರ್ಮನಿಯ ಊರ್ಜ್ಬರ್ಗ್ ವಿ ವಿ ಯ ಅತಿಥಿ ಪ್ರಾಧ್ಯಾಪಕರಾದ ವಿದ್ವಾಂಸ ಪ್ರೊ ಬಿ ಎ ವಿವೇಕ ರೈ, ಆತ್ಮೀಯರಾದ ನಾಗೇಶ ಹೆಗಡೆ, ಬಿ ಸುರೇಶ ಕಾರ್ಯಕ್ರಮವನ್ನು ಮುನ್ನಡೆಸುತ್ತಾರೆ.
ನಿಮ್ಮ ಸಮಯವನ್ನು ನಮಗಾಗಿ ಕೊಡಿ ಎನ್ನಲು ಈ ಅಡ್ವಾನ್ಸ್ ಪತ್ರ.
ಆಹ್ವಾನ ಪತ್ರಿಕೆ ನಿಮ್ಮ ಕೈ ಸೇರಲಿದೆ.
-ಜಿ ಎನ್ ಮೋಹನ್







It our Progrm We will comme… VENUE elli ?
ಜೋಗಿ ಮತ್ತು ಮೋಹನ್,
ಅಭಿನಂದನೆಗಳು. ನಿಮ್ಮ ಪುಸ್ತಕಗಳು ಓದುಗರ ಪ್ರೀತಿಯನ್ನು ಗಳಿಸಲಿ.
ವಸುಧೇಂದ್ರ
mohan nimma pustikebidugade karyakrmagalella bangalore seemita agodu beda,namagu omme avakasha madikodi naavu karyakrama madikodthivi,nimma hagu jogi pustakakke haddu kada hage kadiruve jaga elli guruve,onduvele naavu bandre bari jaga hudkodrage karyakrama mugidu hogi bidutteno all the best d.ravi varma hospet
ಜೋಗಿ ಹಾಗೂ ಮೋಹನ್ ಸರ್ ಗೆ ಅಭಿನಂದನೆಗಳು. ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬರಲು ಪ್ರಯತ್ನಿಸುವೆ. ಇಲ್ಲದಿದ್ದರೆ ನಿಮ್ಮ ಪುಸ್ತಕ ಓದುವ ಸಂಭ್ರಮ ಇದ್ದೇ ಇರುತ್ತೆ.
-ಉಗಮ ಶ್ರೀನಿವಾಸ್
ನೆಚ್ಚಿನ ಲೇಖಕರ ಪುಸ್ತಕಗಳು. ಶುಭವಾಗಲಿ.
ಖಂಡಿತ… ತಪ್ಪಿಸೋ ಛಾನ್ಸೇ ಇಲ್ಲ..