ನಾಳೆ ಮೈಸೂರಿನಲ್ಲಿ ಸಿಕ್ತೀರಾ?
ಮೈಸೂರಿನಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಇದೆ. ಮಾತು ಬಾರದ, ಕಿವಿ ಕೇಳಿಸದ ಮಕ್ಕಳ ಚಿಕಿತ್ಸೆಗೆಂದು ಇರುವ ದೇಶದ ಅತ್ಯುತ್ತಮ ಆಸ್ಪತ್ರೆಗಲ್ಲಿ ಅದೂ ಒಂದು. ನಾಳೆ, ಅಂದರೆ ಮೇ ೩೧ ರ ಬೆಳಗ್ಗೆ ೧೦.೩೦ ಕ್ಕೆ ಆ ಸಂಸ್ಥೆಯಲ್ಲಿ, ಮಾತು ಬಾರದ, ಕಿವಿ ಕೇಳಿಸದ ವಿಶೇಷ ಮಕ್ಕಳಿಗೆ ನಡೆಸಲಾದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ ಇದೆ. ಆ ಮುದ್ದು ಮಕ್ಕಳು ನಾಳೆ ಬಿ ವಿ ಕಾರಂತರ ರಚನೆಯ “ನೀಲಿ ಕುದುರೆ” ನಾಟಕವನ್ನು ಪ್ರದರ್ಶಿಸಲಿದ್ದಾರೆ.
ಶ್ರವಣ ಸಮಸ್ಯೆ ಇರುವ ಮಕ್ಕಳು ಕೇವಲ ಸಂಜ್ಞೆಯಿಂದಲೇ ಎಲ್ಲವನ್ನೂ ಅರ್ಥ ಮಾಡಿಕೊಂಡು ನಾಟಕ ಮಾಡುವುದನ್ನು ನೋಡುವುದೇ ಒಂದು ದಿವ್ಯ ಅನುಭವ. ಈ ಕಾರ್ಯಕ್ರಮಕ್ಕೆ, ಆ ವಿಶೇಷ ಮಕ್ಕಳ ಸಂಭ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದಲೇ ನಾನು ಹೋಗುತ್ತಿದ್ದೇನೆ. ಮೈಸೂರಿನಲ್ಲಿರುವ ಮಿತ್ರರು, ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆಬಂದರೆ ತುಂಬಾ ಖುಷಿಯಾಗುತ್ತದೆ
ಕಾರ್ಯಕ್ರಮ ೧೨. ೩೦ ಕ್ಕೆ ಮುಗಿಯುತ್ತದೆ. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.
ಮಣಿಕಾಂತ್





0 Comments