‘ಕನ್ನಡಪ್ರಭ’ ದ ಸಂಗ್ರಹದಲ್ಲಿ ಗಂಗೂಬಾಯಿ ಹಾನಗಲ್ ಅವರ ಅಪರೂಪದ ಛಾಯಾಚಿತ್ರಗಳಿವೆ.
ಅಪಾರ ಅವರ ಅನ್ ಲಿಮಿಟೆಡ್ ಬ್ಲಾಗ್ ನಲ್ಲಿ ಎಸ್ ಮಂಜುನಾಥ್ ಬರೆದ ಕವಿತೆಯಿದೆ. ಈ ಎರಡರ ಜುಗಲ್ಬಂದಿ ಇಲ್ಲಿದೆ.
ಭೈರವಿಯ ಹಾಡಲು ಗಂಗವ್ವ
ಎಂಥ ಬೆಳ್ಳಿಯ ಚಂದ್ರ
ಶಿವನ ಮುಡಿಯಲ್ಲಿರಲು ಯೋಗ್ಯ
ಶಿವನೆಲ್ಲಿ?
ನಕ್ಷತ್ರವೆಲ್ಲೆಲ್ಲು ಬೀಳುತಿವೆ ಉದುರುದುರಿ
ಕೀಳುತಿರುವವರು ಯಾರು?
ಮಿಂಚಿನ ಬಳ್ಳಿಯನ್ನೆಳೆದಿರುವರು ಧರೆಗೆ
ಬಾನಂಚಿಗೆ ಕೆಂಪು ಬಳಿದು ತೊಡೆದು
ಕತ್ತಲಗೊಳಿಸಿರುವರು
ಮತ್ತೆ ಅದ ಚಲಿಸಿರುವರು
ಯಾರು ಈ ಭುವಿಯನ್ನೊಮ್ಮೆ ಮೀಟಿಬಿಟ್ಟರು?
–
ಭೈರವಿಯ ಹಾಡಲು ಗಂಗವ್ವ
ದಿಕ್ಕುಗಳ ಎಂಟೆದೆಯು ಸೀಳಿರುವುದು
ಬೆಳಕಿನ ಒಡಲುಗಿದು ಕಾವು
ದಳದಳವಾಗಿ ಅರಳಿರುವುದು
–
ತಾಯ ಮಾರಿಮುಖ ತೋರಿರುವುದು
ಭಯದ ದಯೆ ನಿಡಿದಾಗಿ ಚಾಚಿರುವುದು









0 Comments