ಪ್ರಸಾದ್ ರಕ್ಷಿದಿ
ಕಾರ್ನಾಡರ ‘ತುಘಲಕ್’ ನಾಟಕದ ಒಂದು ಸಂದರ್ಭ.
ಅಜೀಝನೆಂಬ ವಂಚಕ ತುಘಲಕ್ ನನ್ನು ಹಾಸ್ಯಾಸ್ಪದ ಸ್ಥಿತಿಯಲ್ಲಿ ಸಿಕ್ಕಿಸಿದ್ದಾನೆ. ಹಲವಾರು ಜನರಿಗೆ ಅತ್ಯುಗ್ರ ಹಿಂಸೆ ಶಿಕ್ಷೆ ನೀಡಿದ ತುಘಲಕ್ ಕೂಡಾ ಅವನನ್ನು ಶಿಕ್ಷಿಸಲಾರ.
ಆಗ ತುಘಲಕ್ ನ ಆಸ್ಥಾನದ ಇತಿಹಾಸಕಾರ – ಈತನೊಬ್ಬನೇ ತುಘಲಕನ್ನು ವಿಮರ್ಶಿಸಿ ಟೀಕಿಸಬಲ್ಲವನು. ತುಘಲಕನ ಹಿಂಸಾಮಾರ್ಗವನ್ನು ವಿರೋಧಿಸಿ ಎಚ್ಚರಿಸಬಲ್ಲವನು.
ಅಜೀಝನ ಸಂದರ್ಭದಲ್ಲಿ ಇವರಿಬ್ಬರ ಸಂಭಾಷಣೆಯನ್ನು ಗಮನಿಸಿ.
ಬರನಿ : ಪ್ರಜೆಗಳನ್ನೇಕೆ ಕಂಗೆಡಿಸಿ ಸಾಯಿಸುತ್ತೀರಿ? ಆ ನೀಚ ಅಗಸನಿಗೆ ಮಾತ್ರ ಬಹುಮಾನ. ಅವನನ್ನು ಕೊಲ್ಲಬೇಕು. ದೇಹಾಂತ ಶಿಕ್ಷೆ ಸಾಲದು. ಚೀಲದಲ್ಲಿ ತುಂಬಿ ಕುದುರೆಯ ಕಾಲಿಗೆ ಕಟ್ಟಿ ಎಳೆಸಬೇಕು. ಅವನ ನಾಲಿಗೆಯನ್ನು ಎಳೆಸಿ ಸಾಯಿಸಿದರೂ ಸಾಲದು..,
ತುಘಲಕ್ : ಬರನಿ ಚಿತ್ರಹಿಂಸೆಯ ಇಷ್ಟು ವಿಧಾನಗಳು ಆ ಅಗಸನಿಗೂ ಗೊತ್ತಿರಲಾರದು ನೋಡು !
ಇದು ಯಾಕೆ ನೆನಪಾಯಿತೆಂದರೆ. ಅತ್ಯಾಚಾರಿಗಳಿಗೆ ನಮ್ಮ ಕಾನೂನು ವಿಧಿಸುವ ಅತ್ಯುಗ್ರ ಶಿಕ್ಷೆಯಾಗಬೇಕೆಂಬ ಬಗ್ಗೆ ಮನುಷ್ಯರಾದವರಲ್ಲಿ ತಕರಾರು ಇರಲಾರದು. ಆದರೆ ನಮ್ಮ ಯೋಚನಾ ಲಹರಿ ಅತ್ಯಾಚಾರಿಗಳ ಮನಸ್ಸಿನಂತೆಯೇ ಯೋಚಿಸುತ್ತಿದೆಯೇ..
ಈ ಪ್ರಶ್ನೆ ಯಾರಿಗೂ ಅಲ್ಲ ನನಗೇ !
ಕಟ್ಟೆಚ್ಚರದ ದಿಟ್ಟ ಹೆಣ್ಣುಮಕ್ಕಳು ನಾವಾಗಿರಲು ಯಾವುದೋ ನಾಯಿಗೆ ಹೆದರಬೇಕಾ . ಇಲ್ಲ ಈ ಸೃಷ್ಠಿಯಲಿ ಹೆಣ್ಣನ್ನು ವೈಭೋಗದ ಸರಕನ್ನಾಗಿ ಕಾಣುವಾ, ಅವಳನ್ನು ಸುಡಲು ಹಿಂಜರಿಯದ ಆ ಹೀನ ಜನರಿಗೆ ಶಿಕ್ಷೆ ಕೊಡುವದೊಂದು ದಾರಿ.
ಚಿಂತಿಸುವಂತೆ ಮಾಡಿದ ಸಾಲುಗಳು