'ನನ್ನ ಹೆಣ ಹೊತ್ತ ಆತ್ಮಕೊಂದು ನಮ್ರ ವಿನಂತಿ…'

ನೆರಳ ಸೂತಕ

ಆನಂದ ಈ ಕುಂಚನೂರ

ಇದೀಗ ತಾನೇ ಮಣ್ಣು ಮಾಡಿದ ನನ್ನ ಗೋರಿಯಿಂದ
ಹಿಡಿಮಣ್ಣ ಹಿಡಿದು ಬಿಕ್ಕುತಿರುವಂತೆ
ಕಣ್ಣಿಗೊತ್ತಿ ಅಳುತಿರುವಂತೆ ಯಾರೋ…
ಈ ಕಂಪನ ಈ ಕತ್ತಲು, ತಡವರಿಸಿದೆ ಆತ್ಮ
ಬೆವರಿದೆ ಜೀವ
ಸಾಕಿನ್ನು ನನಗೆ ಒಂದೇ ಸಾವು
 
ಯಾರು?
ಯಾರಿರಬಹುದು?

ಒಡಲು ಬರಿದಾಯಿತೆಂದಳುವ ಹೆತ್ತವರೆ?
ಓದು ಅರ್ಧವಾಯಿತೆಂದು ಬಂದ ಮಾಸ್ತರರೆ?
ಪ್ರೀತಿ ಸಿಗದಾಯಿತೆಂದು ದುಃಖಿಸುವ ನಲ್ಲೆಯೇ?
ನೋವಿಗೆ ಹೆಗಲಾಗಲಿಲ್ಲವೆಂದ ಆತ್ಮೀಯ ಗೆಳೆಯನೆ?
ಬಾಕಿ ಚುಕ್ತಾ ಮಾಡಿಲ್ಲೆಂದು ಕೊರಗುವ ಸಾಲಗಾರನೆ?
ಹರಕೆ ತೀರಿಸಿದೆ ಉಳಿಸಿ ಬಂದ ಆ ಗುಡಿಯ ಪೂಜಾರಿಯೇ?
ಯಾರಾದರೇನು?
ಮಣ್ಣ ಸೇರಿ ಎಲ್ಲವೂ ಮನ್ನಾ!
 
ಮಣ್ಣ ಬೆರೆತ ನನ್ನ ಉಸಿರು
ಮತ್ತೆ ಹಬೆಯಾಡುತಿದೆ
ಅಲ್ಲೊಂದು ಪ್ರೇಮದೊರತೆ ಅಣಿಯಾಗುತಿದೆ
ಪುನರುಜ್ಜೀವನಕೆ
ಕೈ ಬಿಡಲೊಲ್ಲರು ಮಸಣದೀ ಜನತೆ
ತಾಮಸದ ತರಗೆಲೆ
ಹುಮ್ಮಸ್ಸಿನ ಅರೆಬೆಂದ ಘಾಟು ಧೂಮ
ದಾರಿಯೂ ಕಾಣದು ಅಮಾಸೆಯ ರಾತ್ರಿ
ಥತ್, ಇದು ಎಲ್ಲ ಸತ್ತವರ ಲೋಕ!
 
ಮಣ್ಣನಪ್ಪಿದ ನೆರಳಿಗೂ ಸೂತಕ
ಮಾಡಬೇಕೆ ಮಡಿಯ ಜಳಕ?
ಜನ್ಮ ಮುಗಿದರೂ ತೀರದು ಋಣ
ತೀರಿಸಿಲೆಂದರೆ ಸಿಗುವುದೇ ಚೇತನ ಮರ್ಮ
ಪ್ರಾಪ್ತಿಯಾಗುವುದೆ ಜೀವಕೆ ಜೀವ
ನನ್ನ ಹೆಣ ಹೊತ್ತ ಆತ್ಮಕೊಂದು
ನಮ್ರ ವಿನಂತಿ
 

‍ಲೇಖಕರು G

June 26, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. D.Ravivarma

    ಮಣ್ಣನಪ್ಪಿದ ನೆರಳಿಗೂ ಸೂತಕ
    ಮಾಡಬೇಕೆ ಮಡಿಯ ಜಳಕ?
    ಜನ್ಮ ಮುಗಿದರೂ ತೀರದು ಋಣ
    ತೀರಿಸಿಲೆಂದರೆ ಸಿಗುವುದೇ ಚೇತನ ಮರ್ಮ
    ಪ್ರಾಪ್ತಿಯಾಗುವುದೆ ಜೀವಕೆ ಜೀವ
    ನನ್ನ ಹೆಣ ಹೊತ್ತ ಆತ್ಮಕೊಂದು
    ನಮ್ರ ವಿನಂತಿ..ultimate manakaaduva chitra kaavya…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: