ಇಲ್ಲಿದ್ದಾನಲ್ಲಾ… ನಾನು ಗಲ್ಲ ತಟ್ಟುತ್ತಿರುವ ಈ ಹುಡುಗ, ನನ್ನ ಪ್ರೀತಿಯ ಮಣಿಕಾಂತ…
ಈಗ ‘ಅಪ್ಪ ಅಂದರೆ ಆಕಾಶ…’ ಅಂತ ಒಂದು ಪುಸ್ತಕವನ್ನ ನಾವೆಲ್ಲ ಓದಲಿ ಅಂತ ಸಿದ್ಧಪಡಿಸಿಕೊಂಡು ಕೂತಿದ್ದಾನೆ.
ಇದೇ ಭಾನುವಾರ, ಫೆಬ್ರವರಿ 17, 2013ರ ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಕೃತಿಯ ಬಿಡುಗಡೆ.
ಮಣಿಕಾಂತ ಅನೇಕ ಅರ್ಥದಲ್ಲಿ ‘ಮಣಿ’ಯೆ. ವ್ಯಕ್ತಿತ್ವ, ಬರಹ, ಅಕ್ಷರಗಳು, ಪ್ರೀತಿ, ಸ್ನೇಹ, ಹಿರಿಯರ ಬಗೆಗಿರುವ ಗೌರವಭಾವ ಎಲ್ಲದರಲ್ಲೂ ಆತ ‘ಅಮೂಲ್ಯ ಮಣಿ’ಯೇ.
ಈ ಕಾರಣದಿಂದಲೇ ನಿಮ್ಮ ಮೆಚ್ಚಿನ ಕವಿಗಳು, ಚಿತ್ರ ನಟರು, ನಿರ್ದೇಶಕರು ಮುಂತಾಗಿ ಅನೇಕ ಮಹನೀಯರು ಈ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ.
”ನೀವೂ ತಪ್ಪದೆ ಬನ್ನಿ,” ಅಂತ ನನ್ನ ಈ ಹುಡುಗನ ಪರವಾಗಿ ನಿಮ್ಮೆಲ್ಲರನ್ನೂ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಮಂತ್ರಿಸುತ್ತಿದ್ದೇನೆ.
ಅವತ್ತು ಅಲ್ಲಿ ಎಲ್ಲರೂ ಭೇಟಿಯಾಗೋಣ.







0 Comments