ನನ್ನ ತಂದೆ, ನನ್ನ ಕಲಾಗುರು ಜಿ.ಎಸ್.ಭಟ್ ಧಾರೇಶ್ವರ. ಶಿಕ್ಷಕರೂ, ಯಕ್ಷಗಾನ ಕಲಾವಿದರೂ ಆಗಿದ್ದವರು. ಯಕ್ಷಗಾನ ಕ್ಷೇತ್ರದಲ್ಲಿ ಧಾರೇಶ್ವರ ಮಾಸ್ತರರು ಎಂದೇ ಖ್ಯಾತರು.
ಅವರ ನಿಧನದ ನಂತರ ಅವರ ಹೆಸರಿನಲ್ಲಿ ಆರ್.ವಿ.ಭಂಡಾರಿಯವರ ನೆನಪಿನ ಸಹಯಾನ ಪ್ರತಿವರ್ಷ ಯಕ್ಷಗಾನ ಕಲಾವಿದರೊಬ್ಬರಿಗೆ ಸಹಯಾನ ಸಮ್ಮಾನ ನೀಡುವುದರ ಮೂಲಕ ತಂದೆಯವರನ್ನು ಗೌರವಿಸುವ ಕಾರ್ಯ ಮಾಡುತ್ತಿದೆ.
ಈ ವರ್ಷ ಶಿವರಾಮ ಕಾರಂತರಂತವರಲ್ಲಿ ಯಕ್ಷನೃತ್ಯ ಕಲಿತ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದ ಗಣೇಶ ನಾಯ್ಕರಿಗೆ ಈ ಸಮ್ಮಾನ ದೊರೆತಿದೆ.
24 ರಂದು ಹೊನ್ನಾವರದ ಕೆರೆಕೋಣದಲ್ಲಿ ನಡೆವ ಈ ಕಾರ್ಯಕ್ರಮಕ್ಕೆ ಮತ್ತು ಆ ನಂತರ ನಡೆವ ಯಕ್ಷಗಾನ ಪ್ರದರ್ಶನಕ್ಕೆ ನಿಮ್ಮೆಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸುತ್ತಿದ್ದೇನೆ.
-ಶ್ರೀಪಾದ ಭಟ್
0 ಪ್ರತಿಕ್ರಿಯೆಗಳು