‘ದೇಶ ಕಾಲ’ ವಿಶೇಷ ಸಂಚಿಕೆ ಬಗ್ಗೆ ಮಂಜುನಾಥ್ ಲತಾ ಹಾಗೂ ಚಂದ್ರಶೇಕರ್ ಐಜೂರು ಬರೆದ ಲೇಖನ ಪ್ರಕಟವಾಗಿತ್ತು. ಜುಗಾರಿ ಕ್ರಾಸ್ ನಲ್ಲಿ ಅದನ್ನು ಚರ್ಚೆಗೆ ಇಡಲಾಗಿತ್ತು. ಕವಿ ಡಿ ಎಸ್ ರಾಮಸ್ವಾಮಿ ಬರೆದ ಪ್ರತಿಕ್ರಿಯೆ ಇಲ್ಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಸಾಹಿತಿ ಎಸ್ ಜಿ ಸಿದ್ಧರಾಮಯ್ಯ ಅವರು ಮಂಡಿಸಿದ ಅಭಿಪ್ರಾಯ ಇಲ್ಲಿದೆ. ಮಂಗಳೂರಿನಿಂದ ಜಿ ಎನ್ ಅಶೋಕವರ್ಧನ ತಮ್ಮ ಅನುಭದ ಜೊತೆ ದೇಶಕಾಲದ ಕಥೆಯನ್ನು ಮೇಳೈಸಿದ್ದಾರೆ ಅದು ಇಲ್ಲಿದೆ. ಸಂದೀಪ್ ಕಾಮತ್ ಬರಹದ ರುಚಿ ನಿಮಗೆಲ್ಲರಿಗೂ ಗೊತ್ತೇ ಇದೆ. ಇಲ್ಲಿ ಅವರು ಪತ್ರ ಬರೆದಿದ್ದಾರೆ.
ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ-]]>
ದೇಶಕಾಲ: ಚರ್ಚೆಗೆ ಸ್ವಾಗತ





ನಾನ್ಯಾವುದಕ್ಕೂ ಕಾಮೆಂಟ್ ಮಾಡುವುದಿಲ್ಲವಪ್ಪ…ಮಾಡಿದರೆ ನಾನು ಕೂಡ ‘ಶಾನುಭಾಗ’ ಅಥವಾ ‘ಗೌಡ’ ನಾಗುವ ಅಪಾಯವಿದೆ. 🙁
ಒಬ್ಬ ವ್ಯಕ್ತಿಯ ಬರವಣಿಗೆಯನ್ನು ಅವನ ಹೆಸರಿನ ಆಧಾರದ ಮೇಲೆ, ಜಾತಿಯನ್ನು ಗುರುತಿಸುವುದು ಅಪಾಯಕಾರಿ ಬೆಳವಣಿಗೆ.
D.S. Ramaswamy you wrote very good article. keep it up.
ಚರ್ಚೆ ಹಳಿತಪ್ಪುತ್ತಿದೆ.
ಬದುಕು ದಿನೇ ದಿನೇ ದುರ್ಭರವಾಗುತ್ತಿರುವಾಗ ಯಾವ ದೇಶ ಯಾವ ಕಾಲದಲ್ಲಿ ಯಾವುದರ ಬಗ್ಗೆ ಚರ್ಚೆನಡೆಯುತ್ತಿದೆ?
** ಫೆಸಬುಕ್ಕಿನ ಕುರಿತು ಕುತೂಹಲ ,ಬೆರಗಿನಿಂದ ಅದರ ಒಳಹೊಕ್ಕವ ನಾನು. ನಿವೃತ್ತಿಯ ನಂತರದಲ್ಲಿ ,ಹೆಚ್ಚು ಅದರಲ್ಲಿ ತೊಡಗಿದರೂ ನನಗೆ ಇನ್ನೂ ಅದರ ಆಳ,ಅಗಲ ಅರಿಯಲಾಗಿಲ್ಲ!
ಇಂಥ ಕುರುಡು ಪಯಣದಲ್ಲಿ; ಈ ದೇಶಕಾಲ: ಚರ್ಚೆಯ ಚಾವಡಿಗೆ ಬಂದು ನಿಂತೆ!
**
ಸಾಹಿತ್ಯವನ್ನು ಪ್ರೀತಿಸುವ ನನಗೆ ; ಅದು ಅಗಾಧ ಶಕ್ತಿಯ
ಜೀವರಸವನ್ನು ಕರುಣಿಸಿ ಉಣಿಸಿದೆ.ಅದರ ಬಲದಿಂದ ನನ್ನ
ವೃತ್ತಿ ಜೀವನದ ಅಗ್ನಿದಿವ್ಯಗಳನ್ನು ದಾಟಿ ಬಂದ ಸಂತಸವಿದೆ.
**
ಇಂಥ ಸಾಹಿತ್ಯ ಕ್ಷೇತ್ರದಲ್ಲಿನ ವಾಗ್ವಾದಗಳನ್ನು ಓದಿ,ಕೇಳಿ ಬಲ್ಲೆನಾದರೂ,ಇತ್ತೀಚಿನ ದಿನಮಾನದಲ್ಲಿ ಈ ಕ್ಷೇತ್ರದಲ್ಲಿನ
ಹಿರಿಯ ನಾಮಾಂಕಿತ ಸಾಹಿತಿಗಳೇ ಮಾತ್ಸರ್ಯದ ಒಳ ಕಿಚ್ಚಿನ ನಗ್ನ ತಾಂಡವದ ಕೆಂಡದೆರಚಾಟ ಮಾಡುವುದ ಕಂಡು ಕಂಗಾಲಾದವ ನಾನು.
**
ಇಂಥ ಚರ್ಚೆಗಳು; ” ಸ್ವಪ್ರತಿಷ್ಠೆಯ,ಅಹಂ ಬೂಯಿಷ್ಠ” ಮಾತುಗಳಂತೆ ಕಂಡರೂ “ಬಟ್ಟೆ ಬಿಚ್ಚಿದ ಮೇಲೆ ಎಲ್ಲರೂ ಒಂದೇ ರೀತಿ ಕಾಣುವ ಸತ್ಯ! ” ನೋವಿನದಾಗುತ್ತದೆ.
**
“ಮೇಲಿನ ಕೆಳಗಿನ”ವರ ಈ ಕುಸ್ತಿ ಮಸ್ತ ಕಾಣಿಸಿದರೂ.. ತರವಲ್ಲವೆನಿಸಿತ್ತದೆ.ಅಮಾಯಕ ನಾನು! ಬರುವೆ.
ಸಾಮಾನ್ಯ ಸಾಹಿತ್ಯ ಪ್ರೇಮಿ ನಾನು.