-ದೇವನೂರ ಮಹಾದೇವ
ತುಂಬಾ ಹಿಂದೆ ಆಫ್ರಿಕಾದ ಲೇಖಕ ಚಿನುವ ಅಚಿಬೆ ಮೈಸೂರಿಗೆ ಬಂದಿದ್ದಾಗ ಶ್ರೀರಂಗಪಟ್ಟಣದ ಸಮೀಪದ ಹಳ್ಳಿಯೊಂದರಲ್ಲಿ ದಲಿತರ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ ಕೊಲೆಗಳು ನಡೆದಿದ್ದವು. ನಾವೊಂದಷ್ಟು ಜನ ಅಚಿಬೆಯನ್ನು ಕರೆದುಕೊಂಡು ಆ ಹಳ್ಳಿಗೆ ಹೋಗಿದ್ದೆವು. ಆ ಘಟನೆಯ ಚಿತ್ರಗಳನ್ನು ತನ್ನ ಕಣ್ಣಾರೆ ಕಂಡ ಚಿನುವ ಅಚಿಬೆ ನೋವಿನಿಂದ ಹೇಳಿದ್ದು: ‘ಆಫ್ರಿಕಾದ ಶೋಷಿತರನ್ನು ದೇವರು ಮಕ್ಕಳು ಎಂದು ಕರೆಯಲಾಗುತ್ತದೆ. ಅವರ ರಕ್ತ ನೆಲಕ್ಕೆ ಬಿದ್ದರೆ ಏನೋ ಅನಿಷ್ಟ ಕಾದಿದೆ ಎಂಬ ನಂಬಿಕೆ ಆಫ್ರಿಕಾದಲ್ಲಿದೆ. ಇಲ್ಲಿ ದೇವರ ಮಕ್ಕಳ ರಕ್ತ ನೆಲಕ್ಕೆ ಬಿದ್ದರೆ ಪುಣ್ಯಬರುತ್ತದೆ ಎಂಬ ನಂಬಿಕೆಗಳನ್ನು ಇಟ್ಟುಕೊಂಡವರನ್ನು ಕಂಡೆ. ಇದು ಭಾರತದಲ್ಲಿ ನನ್ನನ್ನು ಹೆಚ್ಚು ಖಿನ್ನನಾಗಿಸಿದ ಘಟನೆ.’
(ಇದೇ ಡಿಸೆಂಬರ್ ನಲ್ಲಿ ಪ್ರಕಟಗೊಳ್ಳಲಿರುವ ದೇವನೂರರ ಹೊಸ ಕೃತಿಯಿಂದ)
Through Chandrashekhar Aijoor






tumba hinde kanda dourjanya,indu kuda munduvareeeede iruvadu,dalitara dourbagyavo,agnanada sanketavo,aartika dourbalyavo alla, avara jagrutiya chetana shakti mudadiruvade agide…..banni maanva manavanannu preetisi,belesuvadannau madona….