ಸಾಲಿಗ್ರಾಮ ಗಡಿಯಾರಗಳು
ಶುಭಕಾರ್ಯಗಳ ಸಮಯದಲ್ಲಿ ಸ್ನೇಹಿತರಿಗೆ (ಹತ್ತಿರದವರಿಗೆ ) ಆತ್ಮೀಯವಾದ ಕಾಣಿಕೆಯನ್ನು ಕೊಡುವುದು ಒಂದು ಪದ್ಧತಿ . ಮಾರ್ಕೆಟಿನಲ್ಲಿ ಬೇಕಾದಷ್ಟು ರೀತಿಯ ಕೊಡುಗೆಗಳು ಸಿಗ್ತಾವೆ . ಆದರೆ ಕೊಡುವ ಉಡುಗೊರೆ ಹೊಸ ರೀತಿಯಾಗಿ ನಮ್ಮ ಜೀವಮಾನವಿಡೀ ಜಾಗ್ರತೆಯಾಗಿ ಗುರುತು ಇರುವಂತಹದ್ದಾಗಿರಬೇಕು .
ಇಂತಹ ಆಸಕ್ತಿವುಳ್ಳವರಿಗೊಸ್ಕರವೇ ಉಡುಪಿ ಜಿಲ್ಲೆಯ ಸಾಲಿಗ್ರಾಮಕ್ಕೆ ಸೇರಿದ ಕಲಾಕಾರರಾದ (ವೆಬ್ ಡಿಸೈನರ್ ಕೂಡ ) ದಿನೇಶ್ ಹೊಳ್ಳರು ಇಂತಹ ಉಡುಗೊರೆಯನ್ನು ತಯಾರಿಸುತ್ತಾರೆ . ಸ್ಥಳೀಯವಾಗಿ ದೊರೆಯುವ ಮರದ ಹಲಗೆಯನ್ನು ವ್ರತ್ತಕಾರದಲ್ಲಿ ಕೊಯ್ದು , ನುಣುಪಾಗಿ ಮಾಡಿ , ಅದರ ಮೇಲೆ ನಾವು ಹೇಳಿರುವಂತಹ ವ್ಯಂಗ್ಯ ಚಿತ್ರವನ್ನು ಕೆತ್ತನೆ ಮಾಡಿ , ಇವುಗಳು ವೈವಿಧ್ಯವಾದ ಉಡುಗೊರೆಗಳಾಗಿ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತಿದೆ .
ಕೊಂಡುಕೊಳ್ಳುವವರು ತಮ್ಮ ಭಾವಚಿತ್ರವನ್ನು ಕಳಿಸಿದ್ರೆ ಸಾಕು . ಗಡಿಯಾರದ ಮೇಲೆ ಹಾಗೆಯೇ ಕೆತ್ತನೆ ಕೆತ್ತುತ್ತಾರೆ . ಒಂದೊಂದು ಗಡಿಯಾರದ ತಯಾರಿಗೆ 4-5 ದಿನಗಳ ಸಮಯ ಬೇಕಾಗುತ್ತದೆಯೆಂದು ದಿನೇಶ್ ಹೇಳಿರುತ್ತಾರೆ . ಹುಟ್ಟುಹಬ್ಬ , ಮದುವೆ , ಗೃಹಪ್ರವೇಶ ಇನ್ನಿತರ ಶುಭಕಾರ್ಯಗಳ ಸಂದರ್ಭದಲ್ಲಿ ಬಂಧು ಮಿತ್ರರ ಹೆಸರು , ವ್ಯಂಗ್ಯಚಿತ್ರದೊಡನೆ ಉಡುಗೊರೆಯಾಗಿ ಕೊಡಲಿಕ್ಕೆ ಅನುಕೂಲವಾಗಿರುತ್ತದೆ .
ಇಲ್ಲಿಯತನಕ ಬೆಂಗಳೂರು , ಕಲ್ಬುರ್ಗಿ , ಮಂಗಳೂರು ಇನ್ನಿತರ ನಗರಗಳಿಗೆ ಕಳಿಸಲಾಗಿದೆ . ಉತ್ತರ ಪ್ರದೇಶದಿಂದ ಕೂಡಾ ಬೇಡಿಕೆಗಳು ಬರುತ್ತಿದೆ. ಫೇಸ್ ಬುಕ್ ನಿಂದ ಈ ಗಡಿಯಾರಗಳ ಬಗ್ಗೆ ಗೊತ್ತಾಗಿ ಬ್ರೆಜಿಲ್ , ದಕ್ಷಿಣ ಆಫ್ರಿಕಾ ದೇಶದಿಂದ ಕೂಡಾ ಬೇಡಿಕೆ ಬಂದಿದೆ .
ನಿಮಗೂ ಕೂಡಾ ಇಂತಹ ಉಡುಗೊರೆ ಕೊಡಬೇಕೆಂದು ಆನಿಸುತ್ತಿದ್ದರೆ – ದಿನೇಶ್ ಹೊಳ್ಳ- 88610 39229 ಗೆ ಸಂಪರ್ಕಿಸಿರಿ.
ಈನಾಡು ವರದಿ
0 ಪ್ರತಿಕ್ರಿಯೆಗಳು