ತುಳಿಲು,
ಕನ್ನಡವೆಂಬ ಹಿರಿನುಡಿಯಲ್ಲೇ ಬೇಕಾದಶ್ಟು ಸಾಕಾಗುವಶ್ಟು ಉಶ್ಟೋ ಪದಗಳು ಇದ್ದರೂ, ಬೇರೆನುಡಿಯ, ಪದಗಳನ್ನು ತುಂಬಿ, ಬರಹಗನ್ನಡವನ್ನು ಅದರ ದಿಟದ ತನದಿಂದ ಸೊಗಡಿನಿಂದ ದೂರಾಗಿಸಿರುವ ಬಗ್ಗೆ ಬೇಸರಗೊಂಡ ನಾವು, ನಮ್ಮ ತಿಳಿವಿನ ಮಟ್ಟದಲ್ಲಿ, ಕನ್ನಡದ್ದೇ ಆದ ಉಲಿಗಳನ್ನು ಬಳಸಿ, ಬರಹಗಳನ್ನು ನೆಗಳಲು ಒಂದು ತಾವನ್ನು ಕಟ್ಟಿಕೊಂಡಿದ್ದೇವೆ. ಕನ್ನಡದಲ್ಲಿ ದೊರೆಯದ ಒರೆಗಳಿಗೆ, ಹೊರನುಡಿಯಿಂದ ಒರೆಗಳನ್ನು ಕನ್ನಡಯಿಸಿ ಬಳಸಿಕೊಳ್ಳವೆವು.
ನಮ್ಮ ಗುರಿ, ಕನ್ನಡದ್ದೇ ಆದ ಒರೆಗಳನ್ನು ಬಳಕೆಯಲ್ಲಿ ಉಳಿಸುವುದು, ಮತ್ತೂ ಬಳಕೆ ತಪ್ಪಿಸಿದ ಒರೆಗಳನ್ನು ಮರುಬಳಕೆಗೆ ತರುವುದೇ ಹೊರತು, ಇದು ಊ ನುಡಿಯ ಬಗ್ಗೆ ಹಗೆದೋರುವ, ಮೇಣ್ ಕೀಳುಗಳೆಯುವ ಮೊಗಸಲ್ಲ.
ತಿಳಿ ಎಂದರೆ ಕನ್ನಡದಲ್ಲಿ ಅಪ್ಪಟ ಎಂಬ ತಿಳಿವೂ ಇದೆ. ಅದಕ್ಕೆ ತಿಳಿಗನ್ನಡ ಎಂದರೆ ಅಪ್ಪಟವಾದ, ಬೆರಕೆಯಲ್ಲದ, ಕನ್ನಡದ್ದೇ ತನದ ಕನ್ನಡ ಎಂಬ ಅರಿತ.
ತಿಳಿಗನ್ನಡದ ಬರಹಗಳನ್ನು ಬರೆದು ಇಲ್ಲಿ ಹೊರತರಲು ಹುರುಪಿರುವವರಿಗೆ, ಊಗಲೂ ನಮ್ಮ ನಲ್ವರುವು.
ತಿಳಿಗನ್ನಡದಲ್ಲಿ ಬರೆಯಲು ಶಂಕರಬಟ್ಟರ ಹೊತ್ತಗೆಗಳು ನೆರವಾಗುವುವು.
ನನ್ನಿ,
ತಿಳಿಗನ್ನಡಿಗರು.
*****
ತಿಳಿಗನ್ನಡದಲ್ಲಿ ಬರೆಯೋರು
ಬರತ ಕುಮಾರ
ಬೇರೂರು – ಚಾಮರಾಜನಗರ
ನೆಲೆಯೂರು – ಬೆಂಗಳೂರು
ಕೆಲಸ – ಹಾರ್ಡ್ವೇರ್ ಇಂಜಿನಿಯರ್
ಮಾಯ್ಸ
ಬೇರೂರು – ನಾಗಮಂಗಲ, ಮಂಡ್ಯ
ನೆಲೆಯೂರು – ಬೆಂಗಳೂರು
ಕೆಲಸ – ಸಾಪ್ಟ್ವೇರ್ ಇಂಜಿನಿಯರ್
ಹರೆಯ – ೨೬
ಮಂಜುನಾತ
ಬೇರೂರು – ವೆಂಕಟಾಪುರ, ಕೋಲಾರ
ನೆಲೆಯೂರು – ಬೆಂಗಳೂರು
ಕೆಲಸ – ಸಿನಿಮ, ಪಾಪೆಗಾರ, ಕಲೆಗಾರ
ಹರೆಯ – ೨೫
ಹೇಳಿಕೆ – “ತಿಳಿಗನ್ನಡ ತಿಳ್ಯೋದು ಅಶ್ಟು ಸುಲಬಾನ.. ಯಾಕೆಂದ್ರೆ ಬೆಂಗ್ಳೂರ್ ಕನ್ನಡದಲ್ಲಿ ಬೆಂದೋಗಿರೋ ನಂಗೆ ತಿಳಿ ಮಂಡ್ಯ ಕನ್ನಡ ಅರ್ತ ಆಗೋದು ತುಂಬಾನೆ ಕಶ್ಟ….ಪುಸ್ತಕದ ಕನ್ನಡ್ದಲ್ಲಿ ಪಳ್ಗೋಗಿರೊ ಕೈಗೆ ಅದ್ನ ಬರೆಯೋದು ಇನ್ನೂ ಕಶ್ಟ… ಆದ್ರೂ ಒಂದು ಕೈ ನೋಡೇಬಿಡೊಣ… ನನ್ ಕೋಲಾರ್ದ ತಿಳೀನ ವಸಿ ಇಲ್ಲಿ ತೋರ್ಸೋಣ ಅಂತ ಸುರು ಮಾಡ್ತಾ ಇದೀನಿ…”
ಸಂಗನ ಕಾನಗವ್ಡ
ಬೇರೂರು – ಬಾಗಲಕೋಟೆ
ನೆಲೆಯೂರು – ಬೆಂಗಳೂರು
ಕೆಲಸ – ಸಾಪ್ಟ್ವೇರ್ ಇಂಜಿನಿಯರ್
0 ಪ್ರತಿಕ್ರಿಯೆಗಳು