ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಾರಿಣಿ ಶುಭದಾಯಿನಿ ಅವರ ’ಪೂರ್ವಭಾಷಿ’ ಓದುತ್ತಾ..

‘ಪೂರ್ವಭಾಷಿ’ – ಮೊದಲ ಓದಿನ ಟಿಪ್ಪಣಿಗಳು

ಮುರಳೀಧರ ಉಪಾಧ್ಯ ಹಿರಿಯಡಕ

ಆರ್. ತಾರಿಣಿ ಶುಭದಾಯಿನಿ ಅವರ ನಾಲ್ಕನೆಯ ಕವನ ಸಂಕಲನ – ’ಪೂರ್ವಭಾಷಿ ’(೨೦೧೩). ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ [2013 ] ಪಡೆದಿರುವ ಈ ಸಂಕಲನದಲ್ಲಿ ೪೧ ಕವನಗಳಿವೆ.
ವಡ್ಡಾರಾಧನೆಯ ಹಿನ್ನೆಲೆ ಇರುವ ಎರಡು ಕವನಗಳು ಗಮನ ಸೆಳೆಯುತ್ತವೆ -ತನ್ನ ಮದುವೆ ದಿನದ ಅಲಂಕಾರವನ್ನು ಸೋದರ ಮಾವನಿಗೆ ತೋರಿಸಬೇಕೆಂದು ನಡುರಾತ್ರಿಯಲ್ಲಿ ಮನೆಯಿಂದ ಹೊರಟ ಸುಧಾಮೆಯನ್ನು ಕುರಿತ ಕವನ-’ ರೂಪವಂತ ಹೆಣ್ಣಿನ ಭಾಷೆ ’. ತಪಸ್ವಿಗಳನ್ನು ಅನುಸರಿಸುತ್ತಾ ಮುಂದೆ ತಪಸ್ವಿಯೆ ಆದ ಮಂದಮತಿ ನಂದಿಮಿತ್ರನ ಕತೆ ಆಧರಿಸಿದ ಕವನ-’ ನಂದಿಮಿತ್ರನ ಪ್ರಶ್ನೆಗಳು ’.

ಈ ಸಂಕಲನದ ’ ಮುದ್ದಣ ಮನೋರಮೆ ’ ಸಮಕಾಲೀನ ಕನ್ನಡ ಕಾವ್ಯದ ಒಂದು ಪ್ರಾತಿನಿಧಿಕ ಕವನ-
” ಓ ಪತಿ ದೇವರೇ ಕೇಳಿ,
ನಾನೀಗ ಕತೆ ಕೇಳುವವಳಲ್ಲ
ನಿಮ್ಮ ಕತೆಗಳ ಮಧ್ಯೆ
ನನ್ನ ಕತೆಯ ರೆಕ್ಕೆ ಪುಕ್ಕ
ಸಿಕ್ಕಿಕೊಂಡಿರಬಹುದು
ಮಲ್ಲಿಗೆ ಹೂವಿನಂತೆ ಕಿತ್ತುಕೊಳ್ಳುವೆ ಅದನು.
ಹಕ್ಕಿಯನು ಗಗನಕೆ ದಾಟಿಸಿಬಿಡುವೆ ನೋಡಿ ”
– ಎಂದು ಆರಂಭವಾಗುವ ಕವಿತೆ ನನಗೆ ಇಷ್ಟವಾಯಿತು .
ಕಡೆಂಗೋದ್ಲು ಪ್ರಶಸ್ತಿ ಸ್ವೀಕರಿಸಿದಾಗ ತಾರಿಣಿ ಅವರು ಓದಿದ ಕವನಗಳು- ’ ಸ್ವಾಮಿ ಮೀಯುವನು ಷಣ್ಮುಖಿಯಲ್ಲಿ ’ , ಮತ್ತು ’ ಕುವೆಂಪು ಕಂದ ಸಿಬ್ಬಲು ಗುಡ್ಡೆ ’. (ಅವರ ಕವಿತಾ ವಾಚನದ ಆಡಿಯೊ ಅಂತರ್ಜಾಲದಲ್ಲಿ ಲಭ್ಯವಿದೆ – http://mupadhyahiri.blogspot.in)
ಈ ಸಂಕಲನ ಓದಿ ಮುಗಿಸಿದಾಗ ಕಾಡುವ ಕೆಲವು ಸಾಲುಗಳು –
ಲಿಂಗವೆಂಬ ಘನವ ಇಳಿಸಬಹುದೇ
ಗಂಡು ಹೆಣ್ಣೆಂಬ ದ್ವಿತ್ವಕ್ಕೆ ? ” [ – ಜಗವೆಲ್ಲಾ ಹೆಣ್ಣು ನೋಡಾ ]
ಹಳಸಿದ ವಿಷಾನ್ನವ ಗುಟುಕು ನೀಡಿ
ಭವ ಚಕ್ರ ಮುರಿದವನು ಆ ಚುಂದ
ಅವನಿಗೆ ನನ್ನ ನಮಸ್ಕಾರ .
” ಪಾಯಸದ ಕರುಣೆಯ ತುತ್ತ್ಯಿಟ್ಟು
ಅರಿವಿನ ಮಾಯೆ ಮುಸುಕ ತೆಗೆದಳು
ಆ ಸುಜಾತೆ , ಅವಳಿಗೆ ನನ್ನ ನಮಸ್ಕಾರ . ” (-ತಥಾಗತ ಹೇಳಿದ್ದು)
 
” ಎಷ್ಟೋ ಸಾಲುಗಳು ಸತ್ತು
ಎಷ್ಟೊ ಪದಗಳು ಹುಟ್ಟಿ
ಒರಟು ತೊಗಟೆ ಚರ್ಮವೆ
ಹಸಿರ ಬಿಟ್ಟು ಕೊಟ್ಟಂತೆ ಕಾವ್ಯ ”
 
” ಹುಟ್ಟೆಂಬ ಹುಟ್ಟಿಗೆ ಸಾವಿಲ್ಲ
ಇಲ್ಲ ಅಮರ್ತ್ಯದ ಕನಸಿಗೆ
ಕೊನೆಯಿಲ್ಲ , ಬೇಂದ್ರೆ ಕನಸಿದ
ಅಡಿಗ ವಿಷಾದಿಸಿದ ಯುಗಾದಿಗೆ. ” (- ಪುನರಪಿ)
 
” ಶಬ್ದ ಪಾಚಿಗಟ್ಟಿದ ಮಡುವಿನಲ್ಲಿ
ಕವಿತೆ ಸಿಕ್ಕುಬಿದ್ದಿದೆ.
ಓ ದೇವತೆಗಳೆ ಕರುಣಿಸಿ
ಒಂದು ಶಿಶು ಗೀತೆಯನ್ನು ” ಶಿಶು ಗೀತೆ
ಆರಿಫ್ ರಾಜ ತನ್ನ ಬೆನ್ನುಡಿಯಲ್ಲಿ ತಾನು ಮೆಚ್ಚಿದ ಕವನಗಳನ್ನು ಉಲ್ಲೇಖಿಸಿದ್ದಾರೆ . ಈ ಸಂಕಲನವನ್ನು ಮೆಚ್ಚಿ ಮುನ್ನುಡಿ ಬರೆದಿರುವ ಎಚ್. ಎಸ್. ಶಿವಪ್ರಕಾಶ್ ಯಾವ ಕವನವನ್ನೂ ಉಲ್ಲೇಖಿಸಿಲ್ಲ.
” ಹುತ್ತಗಟ್ಟಿದ ಚಿತ್ತದಲ್ಲಿ ಹೊರಳುವ ಹಾವುಗಳ ಎಳೆಯುವೆ ” ಎನ್ನುವ ’ ಪೂರ್ವಭಾಷಿ ’ ಯ ಕವಯಿತ್ರಿಗೆ ಅಭಿನಂದನೆಗಳು .
ಪೂರ್ವ ಭಾಷಿ’ – ಸಂಕಲನವನ್ನು ಶಿವಮೊಗ್ಗದ ಗೀತಾಂಜಲಿ ಪುಸ್ತಕ ಪ್ರಕಾಶನ ಪ್ರಕಟಿಸಿದೆ .email-gbtmohan@gmail.com

‍ಲೇಖಕರು avadhi

13 August, 2013

2 Comments

  1. Shashikala

    The thoughts, expression, the language so fresh

  2. ಇಂದ್ರಕುಮಾರ್ ಎಚ್.ಬಿ.

    ಲೇಖನ ಸೊಗಸಾಗಿದೆ. ಕವನ ಸಂಕಲನವನ್ನು ಓದಲು ಪ್ರೇರೇಪಿಸುತ್ತದೆ. ಲೇಖನದಲ್ಲಿ ಉಲ್ಲೇಖಿಸಿರುವ ಸಾಲುಗಳು ನಿಜಕ್ಕೂ ಉತ್ತಮವಾಗಿವೆ. ಲೇಖಕರಿಗೆ ಅಭಿನಂದನೆಗಳು.
    ಪ್ರಶಸ್ತಿ ವಿಜೇತ ಮೇಡಂ ಗೆ ಹೃತ್ಪೂರ್ವಕ ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading