-ಜಿ ಎನ್ ಮೋಹನ್
ಶ್ರೀಮಂತ
ಒಬ್ಬ ಸ್ಕೂಟರ್ ಕೊಂಡ. ಅದು ಬೇಡ ಅನ್ನಿಸಿತು, ಕಾರುಕೊಂಡ. ಕಾರು ಕೂಡ ಸಾಕೆನ್ನಿಸಿತು. ಹೆಲಿಕಾಪ್ಟರಿನಲ್ಲಿ ಹಾರಿದ.
ಕೊನೆಯವರೆಗೂ ಆತ ನಡೆಯಲೇ ಇಲ್ಲ. ಅವನ ಕಾಲನ್ನು ಗ್ಯಾಂಗ್ರಿನ್ ತಿಂದು ಹಾಕಿತ್ತು.
ತಿಳಿಯಲಿಲ್ಲ
ಮಿಡತೆಯೊಂದರ ರೆಕ್ಕೆ ಸುಟ್ಟಿತು ಜ್ವಾಲೆ. ಒಂಟಿ ರೆಕ್ಕೆಯಲ್ಲಿ ತೆವಳುತ್ತ ಹೋದ ಅದು ಸ್ವಲ್ಪ ಹೊತ್ತಿನ ನಂತರ ಮರಳಿತು. ಹಿಂದೆ ಅಸಂಖ್ಯಾತ ಮಿಡತೆಗಳು. ಎಲ್ಲವೂ ಎರಗಿದವು. ಜ್ವಾಲೆಯ ಕಥೆ ಮುಗಿಯಿತೋ ಮಿಡತೆಯ ಕತೆ ಮುಗಿಯಿತೋ
ಕಾಲು
ಮರಗಟ್ಟಿದೆ. ಬಹುಶಃ ಇದು ನನ್ನ ಕಾಲಲ್ಲ. ಕುರ್ಚಿಯ ಕಾಲೇ? ಇಲ್ಲ ಇಲ್ಲ ಚಿಗಿತಿ ಚಿಗಿತು ಮರವಾಗುತ್ತಿದೆ. ಕಣ್ಣು ಬಿಟ್ಟಾಗ ಎದುರಿದವನು ಬಡಗಿ.
ಸುಖದ ಸಾವು
ಒಬ್ಬನಿಗೆ ಸುಖದ ಸಾವು ಬೇಕು ಅನ್ನಿಸುತ್ತೆ. ನಿದ್ದೇಲಿ ಸತ್ತೋರು ಸುಪ್ಪತ್ತಿಗೇಲಿ ಸತ್ತೋರು, ಸಂಭೋಗದಲ್ಲೇ ಸತ್ತೋರು. ಹೀಗೆ ಎಲ್ಲರನ್ನೂ ನೋಡಿ ಸಾಕಾದ ಅವನಿಗೆ ಹಕ್ಕಿಯೊಂದು ಕಾಣುತ್ತೆ. ಅದರ ದಾರಿ ಹಿಡಿತಾನೆ.
ಗುಲಾಬಿ
ಅವಳು ಯಾರಿಗೂ ಕಾಣದಂತೆ ಅವನ ಸಮಾಧಿ ಮೇಲೆ ಹೂವಿಟ್ಟು ಅತ್ತಳು.
ಬ್ಲಾಸ್ಟ್
ಪ್ರಾರ್ಥನಾ ಮಂದಿರವೊಂದರಲ್ಲಿ ಬಾಂಬ್ ಸಿಡಿಯಿತು. ಪಾರಿವಾಳಗಳೆಲ್ಲ ಬೆಚ್ಚಿದವು. ಮತ್ತೆಂದೂ ಅವು ಅಲ್ಲಿ ಕೂರಲಿಲ್ಲ. ಎಲ್ಲಿ
ಲಿವಿಂಗ್ ಟುಗೆದರ್
ಮಂಚದ ಮೇಲೆ ಮಜಬೂತಾದ ಶೀಶೆ. ಇಂಪೋರ್ಟೆಡ್ ಅನ್ನಿಸುತ್ತೆ. ಒಳ್ಗೆ
ಹಸಿರು ದ್ರವ. ಮುಚ್ಚುಳ ತಗೆದ. ಮೈಗೆಲ್ಲಾ ಪೂಸಿಕೊಳ್ಳಬೇಕೆನಿಸಿತು. ಅದರಡಿ ಒಂದು ಲೆಟರ್. ಇದ್ದದ್ದು ಒಂದೇ ಸಾಲು.
“ನಿನ್ನ ಸೆಂಟ್ ಡಬ್ಬಿಯೊಳಗೆ ನನ್ನ ಎಷ್ಟೊಂದು ಹೂಗಳು ಪ್ರಾಣ ಬಿಟ್ಟಿವೆ.” ಮತ್ತವಳು ಮರಳುವುದಿಲ್ಲ ಅನ್ನಿಸಿತು.










ತುಂಬಾ ಚೆನ್ನಾಗಿವೆ ಕತೆಗಳು.
kavethegalu kooda naachu vanthide .namaskara sogemane g n mohan
lokesh mosale
ಅರೆ, ಅರೆರೆ…. ಏನ್ ಮಗಾ. ಹೊಟ್ಟೆ ಹುರಿಸ್ತಾ ಇದ್ದೀಯಲ್ಲೋ. ಹ್ಯಾಟ್ಸ್ ಅಪ್ ಮಗಾ.
ರಮೇಶ್, ಕಥೆ ಹೇಳುವ ರೀತಿ ಮತ್ತು ಕಥೆಯ ಗಾತ್ರದ ಬಗ್ಗೆ ಯೋಚನೆಗೆ ಹಚ್ಚುವಂಥ ಪ್ರಯೋಗ. ಇವುಗಳ ಚುರುಕು ನಡಿಗೆ ನಿಜಕ್ಕೂ ಮೆಚ್ಚಿಗೆಯಾಗುತ್ತದೆ. – ಎಸ್.ಗಂಗಾಧರಯ್ಯ
ಕಥೆಗಳು ಇಷ್ಟ ಆಯ್ತು. ಓಹ್ ಅರ್ಥ ಆಯ್ತು ಅನ್ನುವಷ್ಟರಲ್ಲಿ ಇನ್ನೇನೋ ಹೊಳೆದು
ಕಥೆಗಳು ಇನ್ನಷ್ಟು ಕುತೂಹಲಕ್ಕೆ ಹಚ್ಚುತ್ತವೆ.
ಇನ್ನಷ್ಟು ಬರೀರಿ ಸೋಗೆಮನೆ.
ಸೋಗೆಮನೆಯಲ್ಲಿ ಕುಳಿತೇ ಇಷ್ಟು ಚೆಂದಗೆ ಬರೆವ ನೀವು ನಮ್ ಹಾಗೆ ಆರ್ಡಿನರಿ ಮನೇಲಿ ಕೂತರೆ ಇನ್ನೆಷ್ಟು ಚಂದ ಬರೀಬಹುದು ಅಂತ ಯೋಚಿಸುತ್ತಿದ್ದೇನೆ.
sumaru dingala notra mnssinolgae glibili anisithide kathegalu mnsinolge adengae prvesha madibidtu annodu gotagode illa.tumba hottaekichagtha ide.
kategalu tumba uttamavagide inta chikka chikka ka
kategalannu tumba kaluhisi.dhanyavaadagalu