ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ ಎನ್ ಸೀತಾರಾಮ್ ಲಂಕೇಶ್ ಮೇಷ್ಟ್ರ ಜೊತೆ ಪ್ರತಿಭಟನೆ ಮಾಡಿದ ಕಥೆ

ಟಿ ಎನ್ ಸೀತಾರಾಮ್

ದೀಪಾವಳಿ ನನಗೆ ಮುಂಚಿನಿಂದ ಸಂಭ್ರಮ, ಗೆಲುವುಗಳನ್ನು ತರುತ್ತಿದ್ದ ಕಾಲ…… ಆಗ ೧೮ ತುಂಬಿತ್ತು… ಕಾಲೇಜ್ ನಲ್ಲಿದ್ದೆ… ಲಂಕೇಶ್ ಮೇಷ್ಟ್ರ ಪ್ರಿಯ ಶಿಷ್ಯ…
ಪ್ರಜಾವಾಣಿಯವರು ದೀಪಾವಳಿ ನಾಟಕಸ್ಪರ್ಧೆ ಮತ್ತು ಕಥಾ ಸ್ಪರ್ಧೆ ಮಾಡುತ್ತಿದ್ದರು.
ನಾನು ನಾಟಕವೊಂದನ್ನು ಬರೆದು ‘ ಯಾರಾದರೇನಂತೆ ‘ ಎಂದು ಹೆಸರಿಟ್ಟು ಗುಟ್ಟಾಗಿ ಸ್ಪರ್ಧೆಗೆ ಕಳಿಸಿದೆ… ಮೇಷ್ಟ್ರೂ ಕೂಡ ‘ಪೋಲೀಸರಿದ್ದಾರೆ ಎಚ್ಚರಿಕೆ ‘ ನಾಟಕವನ್ನು ಗುಟ್ಟಾಗಿ
ಕಳಿಸಿದ್ದರು…

ಗುಣಮಟ್ಟದಲ್ಲಿ ನನ್ನ ನಾಟಕ ಮೇಷ್ಟ್ರ ನಾಟಕದಲ್ಲಿ ಅರ್ಧ ಕೂಡ ಇರಲಿಲ್ಲ .. ಆದರೂ ಆಗ ತೀರ್ಪುಗಾರರು ನಮ್ಮಿಬ್ಬರಿಗೂ ಮೊದಲ ಬಹುಮಾನ ಅರ್ಧರ್ದ ಹಂಚಿಬಿಟ್ಟರು… !
ಮೇಷ್ಟ್ರಿಗೆ ಎಷ್ಟು ಕೋಪ ಬಂದಿತ್ತು ಎಂದರೆ ಪ್ರಜಾವಾಣಿ ವಿರುದ್ಧ ಪ್ರತಿಭಟನೆ ಮಾಡಲು ನನ್ನನ್ನೇ ಕರೆದಿದ್ದರು… !! ನಾನು ಹೋಗಿದ್ದೆ ಕೂಡ… !!
೧೯೬೯ ರ ಪ್ರಜಾವಾಣಿ ದೀಪಾವಳಿ ಸಂಚಿಕೆಯಲ್ಲಿ ಅವೆರಡು ನಾಟಕಗಳು ಈಗಲೂ ಸಿಗುತ್ತದೆ …
ಆಗ ಬಂದ ೫೦೦ ರೂಪಾಯಿ ನನ್ನ ಜೀವನದ ಮೊದಲ ಸಂಪಾದನೆ….
 

‍ಲೇಖಕರು G

27 October, 2014

3 Comments

  1. Maluru Venkataswamy

    ಬಹಳ ಕುತೂಹಲಕರ ಮಾಹಿತಿ. ಈ ಪ್ರಸಂಗದಲ್ಲಿ ಗುರುವಿನ ಜೊತೆ ಬಹುಮಾನ ಹಂಚಿಕೊಂಡಿದ್ದು ಸಂತೋಷದ ವಿಷಯವಾದರೂ,ಒಂದು ಬಹುಮಾನ ಅಥವಾ ಪ್ರಶಸ್ತಿಯನ್ನು ಇಬ್ಬರಿಗೆ ಹಂಚುವ ಪದ್ಧತಿ ಸರಿಯಲ್ಲ.

  2. udayakumar habbu

    ನಿಜಕ್ಕೂ ಇದು ಆಶ್ಚರ್ಯದ ಸಂಗತಿ. ಆದರೂ ಗುರುವಿನ ಜೊತೆ ಸ್ಪರ್ಧೆ ಕುತೂಹಲವನ್ನುಂಟುಮಾಡಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading