ಜ್ಞಾನಪೀಠ ಪ್ರಶಸ್ತಿ ಸ್ವೀಕಾರ ಸಂದರ್ಭದ ಭಾಷಣದಿಂದ :
ಕುವೆಂಪು
‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ವ್ಯಾವಹಾರಿಕವಾಗಿ ‘ಕುವೆಂಪುಕೃತಿ’ ಎಂದು ಕರೆಯಲಾಗಿದ್ದರೂ ಪಾರಮಾರ್ಥಿಕವಾಗಿ ನೋಡಿದರೆ ‘ಕುವೆಂಪು’ವನ್ನೇ ಅದು ಸೃಜಿಸಿದೆ.
ಅದು ಯುಗಚೈತನ್ಯದ ಸಮಷ್ಟಿಪ್ರಜ್ಞೆಯ ಸೃಷ್ಟಿ. ಅದು ಶ್ರೀ ರಾಮಾಯಣದ ಅತ್ಯಂತ ಆಧುನಿಕ ಅವತಾರ ;
ಅದು ವೈದಿಕ ಸಂಪ್ರದಾಯದ ವಾಲ್ಮೀಕಿ ರಾಮಾಯಣಕ್ಕೆ ಋಣಿಯಾಗಿರುವಂತೆ ಜೈನಸಂಪ್ರದಾಯದ ರಾಮಾಯಣಗಳಿಗೂ ಋಣಿಯಾಗಿದೆ. ವ್ಯಾಸ, ವಾಲ್ಮೀಕಿ, ಪಂಪ, ನಾಗಚಂದ್ರಾದಿಗಳಿಗೆಂತೊ ಅಂತೆಯೇ ಹೋಮರ್, ವರ್ಜಿಲ್, ಡಾಂಟೆ, ಮಿಲ್ಟನ್ ರಿಗೂ ಋಣಿಯಾಗಿದೆ.
ಅಲ್ಲಿ ಶ್ರೀ ರಾಮಕೃಷ್ಣ- ವಿವೇಕಾನಂದರ ಸಮನ್ವಯ ದರ್ಶನವನ್ನೆಂತೊ ಅಂತೆಯೇ ಗಾಂಧೀಜಿ – ವಿನೋಬಾಜಿಯವರಿಂದ ಪ್ರಣೀತವಾದ ಸರ್ವೋದಯ ಭಾವನೆಯನ್ನೂ , ಪಾಶ್ಚಾತ್ಯ ವಿಜ್ಞಾನದ ವಿಕಾಸವಾದವನ್ನೆಂತೊ ಅಂತೆ ಶ್ರೀ ಅರವಿಂದ ಪ್ರಣೀತವಾದ ಪೂರ್ಣಯೋಗ ದರ್ಶನವನ್ನೂ ಸಂದರ್ಶಿಸಬಹುದು.
ಸಮನ್ವಯ > ಸರ್ವೋದಯ > ಮತ್ತು ಪೂರ್ಣದೃಷ್ಟಿ…
ಇವುಗಳೇ ‘ಶ್ರೀ ರಾಮಾಯಣ ದರ್ಶನಂ’
(ಮಹಾಕಾವ್ಯ)ದ ತ್ರಿಣೇತ್ರಗಳಾಗಿವೆ….
[ನವದೆಹಲಿ: 20 ಡಿಸೆಂಬರ್ 1968]
ಚಂದ್ರಶೇಖರ ನಂಗಲಿ ಅವರ ಫೇಸ್ ಬುಕ್ ಪೇಜ್ ನಿಂದ..
0 ಪ್ರತಿಕ್ರಿಯೆಗಳು