
ರಾಜಹಂಸ, ಜೀವನ ಪ್ರಕಾಶನ
ಜೀವನ ಪ್ರಕಾಶನ ಪ್ರತೀ ವರ್ಷ ನಡೆಸುವ ದಸರಾ ಕಾವ್ಯ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕು ಸ ಮದುಸೂಧನ್ ನಾಯರ್ ಹಾಗೂ ಎಚ್ ಎಸ್ ರಾಮನಗೌಡ ಅವರು ಕ್ರಮವಾಗಿ ಮೊದಲ ಹಾಗೂ ಎರಡನೆಯ ಬಹುಮಾನವನ್ನು ಪಡೆದಿದ್ದಾರೆ. ೯ ಕವಿತೆಗಳು ಮೆಚ್ಚುಗೆಗೆ ಪಾತ್ರವಾಗಿವೆ.
ಕವಿ ಎಲ್.ಎನ್.ಮುಕುಂದರಾಜ್ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಬಹುಮಾನಿತ ಮತ್ತು ಮೆಚ್ಚುಗೆ ಪಡೆದ ಕವಿತೆಗಳು ‘ಅವಧಿ’ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಾಶನದ ರಾಜಹಂಸ ಅವರು ತಿಳಿಸಿದ್ದಾರೆ.
ಈ ಸಾಲಿನ ಯುಗಾದಿ ಹಾಗೂ ದಸರಾ ಕಾವ್ಯ ಸ್ಪರ್ಧೆಯ ಕವಿತೆಗಳ ಸಂಕಲನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಹುಮಾನಿತ ಕವಿತೆಗಳು

ಕು ಸ ಮದುಸೂಧನ್ ನಾಯರ್
01. ಗುಲ್ಬರ್ಗಾ ಸೊಸೈಟಿ-ಕು.ಸ.ಮಧುಸೂದನ್ ನಾಯರ್(ಚಿಕ್ಕಮಗಳೂರು)
02. ಅವ್ವ, ಅಕ್ಕ ಮತ್ತು ರೊಟ್ಟಿ-ಹೆಚ್.ಎಸ್.ರಾಮನಗೌಡ (ಧಾರವಾಡ)
ಮೆಚ್ಚುಗೆ ಪಡೆದ ಕವಿತೆಗಳು
ಬಯಲು ಆಲಯ ನಾನು- ಶ್ರೀಮತಿ ವಿದ್ಯಾ ಕುಂದರಗಿ (ಧಾರವಾಡ)
ನವಿಲುಗಳು ಕರೆಯುತ್ತಿವೆ-ಶ್ರೀಮತಿ ಆಶಾಜಗದೀಶ್ (ಗುಡಿಬಂಡೆ)
ಈ ನೆಲದ ಮಕ್ಕಳು ನಾವು-ಬೀದಲೋಟಿ ರಂಗನಾಥ್ (ತುಮಕೂರು)
ಬೆಳಕು ನೇಯುವ ಕವಿತೆ-ಸ್ಮಿತಾ ಅಮೃತ್ ರಾಜ್, ಸಂಪಾಜೆ (ಕೊಡಗು)
ಅವಳ ರಂಗೋಲಿ ಮತ್ತು ನಾನು-ಡಾ.ನಟರಾಜ್ ಕೆ.ಎಸ್. (ದಾವಣಗೆರೆ)
ವಿರಕ್ತ-ಮಧು ಮಾಚಯ್ಯ ಎನ್.ಬಿ. (ಕೊಡಗು)
ದೀಪ ಹಚ್ಚೋಣ ಬಾ-ರಮ್ಯ ಕೆ.ಜಿ.ಮೂರ್ನಾಡು (ಕೊಡಗು)
ಅಪ್ಪ ಎಂದಿಗೂ ಆಪ್ತ ಎನಿಸುತ್ತಾನೆ-ಕೃಷ್ಣ ದೇವಾಂಗಮಠ (ಬೆಳಗಾವಿ)
ಸಾಕು ಈ ಜನ್ಮಕ್ಕೆ-ರೇಣುಕಾ ಹೆಳವರ್ (ಕಲ್ಬುರ್ಗಿ)





ವಿಜೇತರೆಲ್ಲರಿಗೂ ನನ್ನ ಅಭಿನಂದನೆಗಳು