ಜಿ ಎನ್ ಮೋಹನ್ ಅವರು ಅನುವಾದಿಸಿರುವ ಪಿ ಸಾಯಿನಾಥ್ ಅವರ
‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಕೃತಿಗೆ
ಶ್ರೀ ಸಿದ್ಧವನಹಳ್ಳಿ ಕೃಷ್ಣಶರ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ
ಈ ಪ್ರಶಸ್ತಿ ೧೦ ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ. ಇದೇ ಜುಲೈ ೪ ರಂದು ಗಾಂಧಿ ಸಾಹಿತ್ಯ ಸಂಘದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ
ಜಿ ಎನ್ ಮೋಹನ್ ಅವರು ಅನುವಾದಿಸಿರುವ ಈ ಕೃತಿ ಈಗಾಗಲೇ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಬೋಧನಾ ವಿಷಯವಾಗಿದೆ. ಖ್ಯಾತ ಪತ್ರಕರ್ತ ಪಿ ಸಾಯಿನಾಥ್ ಅವರು ಭಾರತದ ಕಡು ಬಡ ಜಿಲ್ಲೆಗಳಲ್ಲಿ ಸುತ್ತಿ ಕಟ್ಟಕಡೆಯ ಮನುಷ್ಯನ ನೋವನ್ನು ಈ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ
ಗಾಂಧಿವಾಧಿಯಾಗಿದ್ದ ಸಿದ್ಧವನಹಳ್ಳಿ ಕೃಷ್ಣಶರ್ಮ ಅವರ ಟ್ರಸ್ಟ್ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಪ್ರತೀ ವರ್ಷ ಗಾಂಧಿ ಚಿಂತನೆಯನ್ನು ಪ್ರಸಾರ ಮಾಡುವಲ್ಲಿ ನೆರವಾಗುವ ಕೃತಿಗೆ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.







congrats sri G N MOHAN,sri L N ANAND, mattu dharitri trust avrige vijayanagarabimba ranga shikshna kendradinda.
ಹೃದಯ ಪೂರ್ವಕ ಧನ್ಯವಾದಗಳು ಸರ್ ..ಬರ ಅಂದ್ರೆ ಎಲ್ಲರಿಗು ಇಷ್ಟ ಅತ್ಯಂತ ವಾಸ್ತವ ಚಿತ್ರಣ ನೀಡುವ ನಮ್ಮ ಸಮಾಜದ ಕಣ್ಣು ತೆರೆಸುವ ಕೃತಿ …
ಶುಭಾಶಯಗಳು, ಸರ್.
Congrats g n sir
ಅಭಿನಂದನೆಗಳು ಸರ್