ಕನ್ನಡ ಕಲಾ ಸಂಘ ಪ್ರಶಸ್ತಿ ಪ್ರಕಟ
ನಾಡಿನ ಹಿರಿಯ ರಂಗ ತಂಡ ಹೊಸಪೇಟೆಯ ಕನ್ನಡ ಕಲಾ ಸಂಘ, ರಂಗಭೂಮಿಯಲ್ಲಿ ಗಣನೀಯ ಸಾಧನೆ ಸಲ್ಲಿಸಿದವರಿಗೆ ಪ್ರಶಸ್ತಿ ಘೋಷಿಸಿದೆ
ಖ್ಯಾತ ರಂಗಕರ್ಮಿ, ಪತ್ರಕರ್ತ ಗೋಪಾಲ ವಾಜಪೇಯಿ, ತೊಗಲುಬೊಂಬೆ ಕಲಾವಿದ ನಾರಾಯಣಪ್ಪ ಕರಿಗನೂರು ಹಾಗೂ ಹವ್ಯಾಸಿ ರಂಗಭೂಮಿಯ ಹೆಸರಾಂತ ರಂಗಕರ್ಮಿ ವೈ ಡಿ ಬದಾಮಿ ಅವರನ್ನು ೨೦೧೪, ೨೦೧೫ ಹಾಗೂ ೨೦೧೬ ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಮೂವರೂ ಪ್ರಶಸ್ತಿ ಪುರಸ್ಕೃತರನ್ನು ಹೊಸಪೇಟೆಯಲ್ಲಿ ಜುಲೈ ೩೦ ರಂದು ಸನ್ಮಾನಿಸಲಾಗುವುದು. ಪ್ರಶಸ್ತಿಯು ೫ ಸಾವಿರ ರೂ ನಗದು ಹಾಗೂ ಸ್ಮರಣಿಕೆಗಳನ್ನೊಳಗೊಂಡಿರುತ್ತದೆ.





ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ “ಗೋವಾ”ರವರಿಗೆ-ಹಾಗೂ-ಈ ಸವಿಸುದ್ದಿಯನ್ನು ತಿಳಿಸಿದ “ಅವಧಿ”ಗೆ ಹೃತ್ಪೂರ್ವಕ ಅಭಿನಂದನೆಗಳು. ಹೊಸಪೇಟೆಯಲ್ಲಿ ಜುಲೈ-30ರಂದು ಸಮಾರಂಭ ಜರುಗುವ ಸ್ಥಳ-ಸಮಯ ತಿಳಿಸಬೇಕು. ಅವಧಿಯಲ್ಲಿ ಆಮಂತ್ರಣ ಪತ್ರಿಕೆಯನ್ನೇ ಅಪ್ ಲೋಡ್ ಮಾಡಿದರೆ ಒಳಿತು.-ಟಿ.ಕೆ.ಗಂಗಾಧರ ಪತ್ತಾರ