ಗಾಳಿಪಟ ನಂತರ ಮತ್ತೆ ಒಂದಾದ ಯೋಗರಾಜ್ ಮತ್ತು ಗಣೇಶ್

ಮುಂಗಾರು ಮಳೆ, ಗಾಳಿಪಟ ಚಿತ್ರಗಳ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ಟರು ಕೂಡಿ ಮತ್ತೆ ಸಿನೆಮಾ ಮಾಡಲು ಉತ್ಸುಕರಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್ ತೆರೆಯ ಮೇಲೆ ಚೆನ್ನಾಗಿ ವರ್ಕೌಟ್ ಆಗಿದೆ. ಹಲವು ವರ್ಷಗಳ ನಂತರ ಈ ಜೋಡಿ ಒಂದಾಗಿ ಸಿನಿಮಾ ಮಾಡಲು ಸಮಯ ಕೂಡಿ ಬಂದಿದೆ, ಇದರಿಂದ ಗಣೇಶ್ ಅಭಿಮಾನಿಗಳ ಮನದಲ್ಲಿ ಸಂತಸ ಮೂಡಿದೆ. ಗಣೇಶ್ ಮತ್ತು ಯೋಗರಾಜ್ ಭಟ್ಟರ ಜೋಡಿ ಎರಡು ಯಶಸ್ವಿ ಚಿತ್ರಗಳನ್ನು ಸಿನಿರಸಿಕರಿಗೆ ನೀಡಿತ್ತು.

08-1470652434-yogaraj-bhat-and-ganesh-1ಹೆಸರಿಡದ ಹೊಸ ಚಿತ್ರವು ಅತ್ಯಂತ ಸರಳವೂ, ದಿನನಿತ್ಯದ ಬದುಕಲ್ಲಿ ಗೋಚರಿಸುವ ಹುಡುಗ-ಹುಡುಗಿಯರ ಭಾವನಾ ಪ್ರಪಂಚವೂ ಈ ಕಥಾನಕದಲ್ಲಿದೆ. ಇದೊಂದು ಒಬ್ಬ ಹುಡುಗನ ಜೀವನದ ಕಥೆ, ಆತನ ಜೀವನ, ವೃತ್ತಿ, ಪ್ರೀತಿ, ತಂದೆ-ತಾಯಿ, ಸಮಾಜ ಎಲ್ಲದರ ‘ಹೊಸ ಹೊಳಹು’ ಇದರಲ್ಲಿದೆ. ಸಂಗೀತ ವಿ. ಹರಿಕೃಷ್ಣ ಅವರದ್ದು. ಗೀತರಚನೆ ಜಯಂತ್ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಇಬ್ಬರದ್ದು. ಅಂತರಾಳಕ್ಕೆ ತಾಕುವಂಥ ಹೊಸ ರೀತಿಯ ಹಾಡುಗಳ ರಚನೆ, ಸಂಯೋಜನೆ ಜಾರಿಯಲ್ಲಿದೆ. ಸ್ಕ್ರಿಪ್ಟ್ ಬರವಣಿಗೆ ಭಾಗಶಃ ಮುಗಿದಿದೆ. ಚಿತ್ರದ ನಿರ್ಮಾಣವನ್ನು ಇಬ್ಬರೂ ಸೇರಿ ಮಾಡುತ್ತಿದ್ದೇವೆ. ಚಿತ್ರದ ಇತರೆ ತಾರಾಗಣ ಹಾಗೂ ತಂತ್ರಜ್ಞರ ವಿವರಗಳನ್ನು ಕೆಲವೇ ದಿನಗಳಲ್ಲಿ ನಿಮಗೆ ಹೇಳುತ್ತೇವೆ. ಚಿತ್ರೀಕರಣವು ಮೈಸೂರು ಹಾಗೂ ಕರ್ನಾಟಕದ ಇತರೆ ಹಲವಾರು ಜಿಲ್ಲೆಗಳಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 25 ರ ಅಕ್ಕಪಕ್ಕ ಚಿತ್ರೀಕರಣ ಶುರುವಾಗುವುದು.

‍ಲೇಖಕರು admin

August 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: