ಮಂಜುನಾಥ್ ಚಾಂದ್ ಹಿರಿಯ ಪತ್ರಕರ್ತರು ಮೊನ್ನೆ ಅವರ ಕದ ತೆರೆದ ಆಕಾಶ ಕೃತಿ ಬಿಡುಗಡೆಯಾಯಿತು
ದಿಗ್ಗಜರೆಲ್ಲ ವೇದಿಕೆಯ ಮೇಲೂ ಸಭಾಂಗಣದಲ್ಲೂ ತುಂಬಿದ್ದರು.
ವಿಷಯ ಅದಲ್ಲ. ಎಂದೂ ಕಾಣದ ಒಂದು ಪ್ರೀತಿ ಘಟನೆ ಅಲ್ಲಿ ಜರುಗಿಹೋಯಿತು. ನೋಡಿ-
ಇಡೀ ಬದುಕಿನಲ್ಲಿ ಕಾಯಕವನ್ನೇ ಕಿರೀಟ ಮಾಡಿಕೊಂಡವರು ಅಪ್ಪಾ. ಬರ್ತ್ ಡೇ, ಸೆಲಬರೇಷನ್ನು ಯಾವುದೂ ಅವರ ಜೀವನದ ಪಟ್ಟಿಯಲ್ಲಿ ಇಲ್ಲ. ಹಾಗೇ 92 ವಸಂತಗಳನ್ನು ಪೂರೈಸಿದ ದಿನದಂದೇ ಅವರ ಸಮ್ಮುಖದಲ್ಲಿ ನನ್ನ ಕಥಾ ಸಂಕಲನ ಬಿಡುಗಡೆ ಕಂಡಿದ್ದು ನಿಜಕ್ಕೂ ಧನ್ಯ ಕ್ಷಣ. ರಂಗನಾಥ್ ಚಾಂದ್ ಅವರ ಊಹೆಗೂ ನಿಲುಕದಂತೆ ಆ ದೊಡ್ಡ ವೇದಿಕೆಯಲ್ಲಿ ಒಂದು ಅಚ್ಚರಿಯ ಸಂಮಾನ ನಡೆದೇ ಹೋಯಿತು. ಇದನ್ನು ಸಾಧ್ಯವಾಗಿಸಿದ ಹಿರಿಯರಾದ ಲಕ್ಷ್ಮಣ್ ಅವರಿಗೆ, ಸಾಥ್ ನೀಡಿದ ರವಿ, ದಿನೇಶ್, ಜೋಗಿ, ಕುಮಾರ್ ಎಲ್ಲರಿಗೂ ವಂದೇ…
ಖುಷಿಯ ನೆನಪುಗಳು
ಕಣ್ಣೀರಾಗೇ ಬರುತ್ತವೆ!
-ಮಂಜುನಾಥ್ ಚಾಂದ್
ಇದ್ದರೆ ಇಂತಹ ಮಗನಿರಬೇಕು ಎಂದು ಹೇಳುವ ತಂದೆ-ತಾಯಿ ಅಲ್ಲಿದ್ದರು,ಇದ್ದರೆ ಇಂತಹ ಶಿಷ್ಯನಿರಬೇಕು ಎಂದು ಹೇಳುವ ಗುರು ಎ.ವಿ.ನಾವಡ ಅಲ್ಲಿದ್ದರು, ಇದ್ದರೆ ಇಂತಹ ಗಂಡ,ಅಪ್ಪ ಇರಬೇಕು ಎಂದು ಹೇಳುವ ಪತ್ನಿ ಮಕ್ಕಳು ಅಲ್ಲಿದ್ದರು. ಇದ್ದರೆ ಇಂತಹ ಗೆಳೆಯನಿರಬೇಕು ಎಂದು ಹೇಳುವ ಗೆಳೆಯರಾದ ನಾವಲ್ಲಿದ್ದೆವು. ಚಾಂದ್ ಪುಣ್ಯವಂತರು, ಈ ಭಾಗ್ಯ ಕ್ಕೆ ಅರ್ಹ
-ದಿನೇಶ್ ಅಮೀನ್ ಮಟ್ಟು
It was really nice and touching event.