ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸಾಲಿನ ದಿ ಡಿ ದೇವರಾಜ ಅರಸು ನೆನಪಿನ ಪ್ರಶಸ್ತಿ ಘೋಷಿಸಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರ ಮೃದು ಹೃದಯದ ಈ ಬರಹ ಓದಿ
ಸಂಗಮೇಶ್ ಮೆನಸಿನಕಾಯಿ
ನಾವು ಉತ್ತರ ಕರ್ನಾಟಕದ ಜನ ನೋಡಲು ಒರಟರು, ಹಳ್ಳಿ ಹುಂಬರು. ನಮ್ಮ ಖರ್ಗೆಯವರನ್ನು ‘ನಗಲು ಬಾರದ ಭಾವನಾರಹಿತ ವ್ಯಕ್ತಿ’ ಎಂಬಂತೆ ಕೆಲವರು ಬಿಂಬಿಸಿದ್ದಾರೆ. ನಮ್ಮ ಭಾಷೆ, ನಮ್ಮ ದೇಹಭಾಷೆ ಒರಟು ಇರಬಹುದು. ಆದರೆ ನಾವು ‘ವಜ್ರದೇಹಿ, ಮೃದು ಹೃದಯಿಗಳು’.
ಇತ್ತೀಚೆಗೆ ಧರ್ಮಸಿಂಗ್ ನಿಧನರಾದಾಗ ಅವರ ಗೆಳೆಯ ಖರ್ಗೆ, ಸಿಂಗ್ ಕುಟುಂಬದವರು ಭೋರ್ಗರೆದು, ಬಿಕ್ಕಿಬಿಕ್ಕಿ ಅಳುವುದನ್ನು ನೋಡಿದಾಗ ಇವೆಲ್ಲ ವಿಚಾರಗಳು ತಲೆಯಲ್ಲಿ ಓಡಾಡಿದವು.
ನೆನಪಿರಲಿ- ನಾನು ಖರ್ಗೆಯವರ ಬೆಂಬಲಿಗನೂ ಅಲ್ಲ, ವಿರೋಧಿಯೂ ಅಲ್ಲ, ಅವರೊಳಗಿನ ಅಥವಾ ಅಂಥವರೊಳಗಿನ ಮನುಷ್ಯತ್ವದ ಪ್ರಶಂಸೆಯಷ್ಟೇ ಈ ಪೋಸ್ಟ್ ನ ಉದ್ದೇಶ.
ನಿಜ ಸಂಗಮೇಶ ಸರ್… ನಾವೂ ಉತ್ತರ ಕರ್ನಾಟಕದ ಜನ ಮಾತು ಮಾತ್ರ ಘಡಸು… ಮನಸ್ಸು , ವ್ಯೆಕ್ತಿತ್ವ ಎಲ್ಲವೂ ಸರಳ… ಅದೇ ನಮ್ಮ ಜನರ ವಿಶೇಷತೆ… ☺
ನಾವು ಉತ್ತರ ಕರ್ನಾಟಕದ ಜನ ನೋಡಲು ಒರಟರು, ಹಳ್ಳಿ ಹುಂಬರು. ನಮ್ಮ ಖರ್ಗೆಯವರನ್ನು ‘ನಗಲು ಬಾರದ ಭಾವನಾರಹಿತ ವ್ಯಕ್ತಿ’ ಎಂಬಂತೆ ಕೆಲವರು ಬಿಂಬಿಸಿದ್ದಾರೆ. ನಮ್ಮ ಭಾಷೆ, ನಮ್ಮ ದೇಹಭಾಷೆ ಒರಟು ಇರಬಹುದು. ಆದರೆ ನಾವು ‘ವಜ್ರದೇಹಿ, ಮೃದು ಹೃದಯಿಗಳು’.
ಇಡೀ ಉತ್ತರ ಕರ್ನಾಟಕದ ಜನರ ವ್ಯೆಕ್ತಿತ್ವ ಹೇಳಿದ್ದೀರಿ ತುಂಬಾ ಧನ್ಯವಾದಗಳು ಸರ್..
ಹೌದು