ಇದೇ ತಿಂಗಳ ಕೊನೆಯ ಭಾನುವಾರ, ಜೂನ್ ಇಪ್ಪತ್ತಾರರ ಸಂಜೆ, ಮೂರೂವರೆಯಿಂದ ಆರೂವರೆಯ ತನಕ
ನಿಮ್ಮೆಲ್ಲರ ಸಹವಾಸ ನಮಗೆ ಬೇಕು. ನಿಮ್ಮೆಲ್ಲರ ಸಾಹಚರ್ಯ ನಗೆ ಬೇಕು. ನಿಮ್ಮೆಲ್ಲರ ಸಹಕಾರ ನಮಗೆ ಬೇಕು.
ಪ್ರೋತ್ಸಾಹ, ನಗು, ಖುಷಿ, ಮತ್ತೊಂದಿಷ್ಟು (ಸಾಹಿತ್ಯಿಕ ಮತ್ತು ಜಠರದ) ಹಸಿವು ಹೊತ್ತುಕೊಂಡೇ ಬನ್ನಿ.
ಎಲ್ಲಿಗೇಂದಿರಾ?
ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣಕ್ಕೆ.
ಯಾಕೇಂತೀರಾ?
ಇಬ್ಬರು ಸಾಹಿತ್ಯ ದಿಗ್ಗಜರು ಅಂದು ನಮ್ಮನ್ನು ಪುಟ್ಟ ಯಾತ್ರೆ ಮಾಡಿಸಲಿದ್ದಾರೆ, ಸಾಹಿತ್ಯ ಯಾತ್ರೆ.
ಡಾ. ಸಾ.ಶಿ. ಮರುಳಯ್ಯ ಅವರು “ಹಳೇ ಮತ್ತು ಹೊಸ ಕಾವ್ಯದ ಸಂಬಂಧ” ವಿಷಯದ ಮೇಲೂ
ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರು ಈ ವಿಷಯಕ್ಕೆ ಪೂರಕವಾಗಿಯೂ
ಉಪನ್ಯಾಸ ಮಾಡಲಿದ್ದಾರೆ.
ಜೊತೆಗೆ, ಮಾಮೂಲು…
ಚಹಾ, ಕಾಫಿ, ತಿಂಡಿ. ಸ್ನೇಹ ಸಮ್ಮಿಲನ.
ಮೇಲೊಂದಿಷ್ಟು ಕವನವಾಚನಗಳ ಒಗ್ಗರಣೆ. ನಡುವೆ ಸಣ್ಣ ಹೂರಣ: ಎರಡು ಪುಸ್ತಕಗಳ ಅನಾವರಣ.
ಬರುತ್ತೀರಲ್ಲ! ನೀವಿಲ್ಲದೆ ಇವೆಲ್ಲ ಖುಷಿ ಕೊಡೋಲ್ಲ, ಗೊತ್ತು ತಾನೆ!
ನಿಮ್ಮನ್ನು ಎದುರುಗೊಳ್ಳಲು ತಯಾರಾಗುತ್ತಿರುವ,
ಸುಪ್ತದೀಪ್ತಿ-ಜ್ಯೋತಿ.







NIMMA AHAWANA ADBUTAVAGIDE,BUT HOSPETYINDA BARLIKKE AGALLA,NIMMA EE KARYAKRAMAKKE HRUTPURVAKA SHUBHASHAYA KARYAKRMA MISMADKOTIDINI ,HEGO AVADI NAMA JOTE IDEYALLA ADARA VARADI ODI KUSHIPADTENE, KARYAKRAMA YASHASWIYAGALI D.RAVI VARMA HOSPET