ಶುರುವಾಯ್ತು ನಿಮ್ಮೊಳಗೆ ಭಾವನೆಯ ಅಲೆ ಎಬ್ಬಿಸುವ ಆಟ
ಒಂದು ಫೋಟೋ- ನೂರಾರು ಕವಿತೆ
ಕಾಡುವ ಒಂದು ಫೋಟೋ ಕೊಡುತ್ತೇವೆ
ನೀವು ಕವಿತೆ ಬರೆದು ಕಳಿಸಿ
ಜೊತೆಗೆ ನಿಮ್ಮ ಫೋಟೋ ಸಹಾ ಕಳಿಸಿ
‘ಅವಧಿ’ ಸಂಪಾದಕ ಮಂಡಳಿ ಆಯ್ಕೆ ಮಾಡಿದ ಕವಿತೆಗಳನ್ನು ಪ್ರಕಟಿಸುತ್ತಾ ಹೋಗುತ್ತದೆ
ಪ್ರತೀ ಫೋಟೋ ಕವಿತೆಗೂ ಒಬ್ಬೊಬ್ಬ ಗಣ್ಯರು ಅತಿಥಿಯಾಗಿರುತ್ತಾರೆ
ಹಾಗೆ ಪ್ರಕಟಗೊಂಡ ಕವಿತೆಗಳ ಪೈಕಿ ಒಂದನ್ನು ಆಯ್ಕೆ ಮಾಡಿ ಕೊಡುತ್ತಾರೆ
ಅದಕ್ಕೆ ಬಹುಮಾನವಿದೆ
ಬಹುಮಾನದ ಪ್ರಾಯೋಜಕರು- ಯುವ, ಉತ್ಸಾಹಿ ಕ್ಯಾಮೆರಾ ಆರ್ಟಿಸ್ಟ್ ನಾಗರಾಜ ಸೋಮಯಾಜಿ.
ಈಗ ತಾನೇ ‘ಫೋಕಸ್’ ಎನ್ನುವ ಒಂದು ಕನಸಿನ ತಾಣವನ್ನು ಸೃಷ್ಟಿಸಿದ್ದಾರೆ
ಕವಿತೆ ಕಳಿಸಲು ಕಡೆ ದಿನಾಂಕ ಅಂತ ಇದೆಯಾ??-
ಇಲ್ಲ, ಆದರೆ ನಾವು ಇನ್ನೊಂದು ಹೊಸ ಫೋಟೋ ‘ಅವಧಿ’ಯಲ್ಲಿ ಪ್ರಕಟಿಸುವವರೆಗೆ ಮಾತ್ರ ಕಳಿಸಬಹುದು
ಈ ಬಾರಿಯ ಅತಿಥಿ- ಜೋಗಿ
ಅದಿರಲಿ, ಈ ಫೋಟೋ ತೆಗೆದವರ ಹೆಸರು ಹೇಳಿ ಅಂತ ಕೇಳ್ತೀರಿ ಗೊತ್ತು
ಒಂದು ಕುತೂಹಲದ ಕಥೆ ಇದೆ, ಜೋಗಿ ಆಯ್ಕೆಯ ಜೊತೆಗೆ ಇದನ್ನು ಪ್ರಕಟಿಸುತ್ತೇವೆ
ಮಡಿವಂತಿಕೆ ಬಿಟ್ಟು
ಹೇಳುತ್ತಿರುವೆ ಕೇಳಿ,
ಇದು ಗಂಡಸರ ನಡು-
ವಿನ ಅಂಗೀಕೃತ ಸತ್ಯ.
ಯಾವುದೂ ಹೊತ್ತಿಸುವುದಿಲ್ಲ ನಮ್ಮಲ್ಲಿ
ತುಂಬು ಜಘನದ ಹೆಣ್ಣಿನ
ನಡಿಗೆಯಷ್ಟು ಕಾವು.
ಇನ್ನಾವುದೂ ನೀಡುವುದಿಲ್ಲ
ಅಷ್ಟು ನೋವು.
ನೆನಪಾದ ಭರ್ತೃಹರಿಯ ಕವಿತೆ ……
ನಡು ಸಣ್ಣ
ತುಂಬು ನಿತಂಬ
ಬಳಿ ಸೆಳೆದುಕೊಳ್ಳಲು
ನೀಳ ಜಡೆ
ಸಾಕಷ್ಟೇ ನೀರೆ ನನಗೆ.
ಒಲ್ಲೆನ್ನುವ ಬಾಯಿರುವ
ಮುಕಾರವಿಂದ ಬೇಡ.
ಬಳಿ ಸೆಳೆದರೆ
ದೂರ ನೂಕುವ ಹಸ್ತ ಬೇಡ.
ಕಲ್ಲಾಗಿ ನಿಂತರೂ
ಕಾಲರಳಿಸಿದರೆ ಸಾಕು
ಹೆಣೇ ಸಾಕು
ಬೊಂಬೆಯಂತಹ ನಿನ್ನ ನಿಲುವು
ಮಾತನಾಡಬೇಡ.
ಚಲಿಸಬೇಡ.
ಸ್ಪಂದಿಸಲೂ ಬೇಡ.
ಸಹಕರಿಸು ಸಾಕು.
ನನಗಿದು ಕವನಕ್ಕೊಂದು ಸವಾಲು
ಕಲ್ಲಾಗಿ ನಿಂತಿರುವೆ
ನೀಲ ಜಡೆಯ ಸುಂದರಿ
ನೀ ಕಲ್ಲಾದರು
ನೋಡುಗನ ಹೃದಯ
ಭಾವನೆಗಳ ಆಗರ
ಸುಂದರಿ ನಿನ್ನ ಆ ನಿತಂಬ
ಶೃಂಗಾರ ರಸದ
ಆಸೆರೆಯೋ ಅಥವಾ
ಕಾಮದ ಆಹ್ವಾನವೋ
ಮುಂಗುರುಳ ಸರಿಸಿ ನೋಡಲು
ಕಾಣುವುದೇ, ಮನದೊಳಗಿನ ಭಾವ
ಮತ್ತೆನನ್ನು ನೆನಪಿಸುವಂತೆ ತೋರಿತ್ತಿದೆ
ಮರೆತಿರುವ ಹಿನ್ನಡುವಿನ ಬಳ್ಳಿಯ ವೇಣಿ
ಪುರುಷ ಸ್ಪರ್ಶ ಸುಖಕ್ಕಾಗಿ ಕಾದಿರುವ
ನಿನ್ನೊಳಗಿನ ಹೆಣ್ತನ
ಕಾಡುತ್ತಿದೆ, ಅಲ್ಲಲ್ಲೆ ಒಂದು ಕ್ಷಣ
ಕಲ್ಲಾಗಿರುವುದು ಯಾವುದು..?
ಮನದೊಳಗೆ ಅವುಚಿಟ್ಟ ಆಸೆಯ ಗೂಡು
ಬಾರನೆಂದರೆ ಬರುವುದಿಲ್ಲ, ಅಪರೂಪದ ಒಡವೆ
ನಿಂತಲ್ಲಿಗೆ ನಿಂತಾಗಿಗೆ ನೀನು
ಯಾರಿಗಾಗಿ ಕಾದಿರುವೆ ಕೇಳಬೇಕು ನಾನು..?