ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಹಿಂದೆ ಹದ್ದು ಅದಕೂ ಬದುಕು

ಕವಿದ ಮೋಡಗಳಿಗಿದೆ ಬೆಳ್ಳಿ ಕಿರಣ

rajakumar madivalara

ರಾಜಕುಮಾರ ಮಡಿವಾಳರ

ಇಷ್ಟು ಇಣುಕಿರುವ ಈ
ಯಾರದೋ ಕರುಳ ತುಣುಕು
ನನ್ನ ಅಣಕಿಸುವಂತಿದೆ!

pulitzer-award-won-photo-somalia-kevinಬಗ್ಗಿ ಹುಡುಕುತ್ತಿರುವುದು ಒಮ್ಮೆ
ಬದುಕು ಅನಿಸಿದರೂ ಮರುಕ್ಷಣ
ಪಾತಾಳದಿಂದೆದ್ದು ಬರುವ ಸಾವ
ಬಗೆದು ಮೇಲೆ ಕರೆಯುವಂತಿದೆ.

ಹಿಂದೆ ಹದ್ದು ಅದಕೂ ಬದುಕು
ಹಸಿವು ಹಸುಳೆ ಇಬ್ಬರಿಗೂ ಒಬ್ಬರಷ್ಟೇ
ಉಳಿವರು ತಿಂದವರು ಗೆದ್ದಂತೆ ಬೀಗಬೇಕಿಲ್ಲ ಮತ್ತೊಂದು ಹಸಿವಿಗೆ ಪ್ರತ್ಯಕ್ಷ ಸಾವು!

ಕವಿದ ಮೋಡಗಳಿಗಿದೆ ಬೆಳ್ಳಿ ಕಿರಣ
ಚೆಂದ ಕವಿತೆಯ ಸಾಲು, ಸುಯ್ಯನೆ
ಸುಳಿದು ಮಿಂಚಿ ಫಳಾರ್ ಹೊಳೆದು
ಮರೆಯಾಯ್ತು ಕ್ಯಾಮರಾ ಕಣ್ಣು!

ಈಗ ಹಸಿವು ನೆಲಕ್ಕೆ!
ಎಲ್ಲ ಮಣ್ಣು…

‍ಲೇಖಕರು admin

23 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading