ಭಯದ ಬಣ್ಣ ಹೇಗಿರುತ್ತದೆ?

`ಮೋಹನದಾಸ’ ಉದಯಪ್ರಕಾಶರ ನೀಳ್ಗತೆ. ಗಾತ್ರದ ದೃಷ್ಟಿಯಿಂದ ಇದನ್ನು ಕಾದಂಬರಿ ಎನ್ನಬಹುದಾದರೂ ನೀಳ್ಗತೆ ಎನ್ನುವುದೇ ಸೂಕ್ತ. ಇದನ್ನು ಹಿಂದಿಯಿಂದ ಅನುವಾದಿಸಿದವರು ಆರ್.ಪಿ.ಹೆಗಡೆ. ಇವರು `ತಿರೀಛ’ ಕತೆಯನ್ನು `ದೇಶಕಾಲ’ದಲ್ಲಿ ಓದಿ ಪ್ರಭಾವಿತರಾಗಿ ಉದಯಪ್ರಕಾಶರ `ಮೋಹನದಾಸ’ ಎಂಬ ನೀಳ್ಗತೆಯನ್ನು ತರಿಸಿ ಓದುತ್ತಾರೆ ಮತ್ತು ವಸ್ತು, ಶೈಲಿ, ತಂತ್ರದ ದೃಷ್ಟಿಯಿಂದ ಅದ್ಭುತವೆನಿಸುವ ಈ ನೀಳ್ಗತೆ ಕನ್ನಡಿಗರೆಲ್ಲರನ್ನು ತಲುಪಬೇಕೆಂಬ ಉದ್ದೇಶದಿಂದ ಅನುವಾದಿಸಲು ಮುಂದಾಗುತ್ತಾರೆ. ಆರ್.ಪಿ.ಹೆಗಡೆಯವರ ಈ ಘನ ಅಭಿರುಚಿಯ ಫಲಶ್ರುತಿ ಇದೀಗ ಲೋಹಿಯಾ ಪ್ರಕಾಶನದಿಂದಾಗಿ ನಮ್ಮೆಲ್ಲರ ಕೈಸೇರುವಂತಾಗಿರುವುದು ನಿಜಕ್ಕೂ ಅಭಿನಂದನೀಯ.
ಸಂಪೂರ್ಣ ಓದಿಗೆ ಭೇಟಿ ಕೊಡಿ- ಓದುವ ಹವ್ಯಾಸ
+++
ಬೇಂದ್ರೆ ಪದ್ಯ ಓದಿದರೆ ಕೀರಂ ತರ ಓದಬೇಕು!
ಚಿತ್ರ : ಸುಶ್ರುತ ದೊಡ್ಡೇರಿ
ಕೀರಂ ಪದ್ಯವನ್ನು ಓದುವ ಬಗೆಯೆಂದರೆ ಪುಟ್ಟ ಮಗುವೊಂದು ಒಂದು ಬಾರ್ ಚಾಕಲೇಟನ್ನು ಪ್ರಪಂಚದ ಆನಂದವೆಲ್ಲ ಅದರಲ್ಲೇ ಅಡಕವಾಗಿದೆ ಎಂಬಂತೆ ತಿನ್ನುವ ಬಗೆಯಂತೆ. ಅದರಲ್ಲಿ ಒಂದು ಇನೊಸೆಂಟ್ ತನ್ಮಯತೆ ಇದೆ ಅನ್ನಿಸುತ್ತದೆ. ಪಾಂಡಿತ್ಯ ಕಣ್ಣಿಗೆ ರಾಚುವುದಿಲ್ಲ, ಪದಗಳಲ್ಲಿ ಜಾರ್ಗನ್ನುಗಳ ಭರಾಟೆ ಇರುವುದಿಲ್ಲ. ಸ್ವಲ್ಪ ಸ್ಪಾನಿಶ್ ಸಿನೆಮಾದ ಹಾಗೆಯೇ!
ಸಂಪೂರ್ಣ ಓದಿಗೆ ಭೇಟಿ ಕೊಡಿ- ಬಾಗೇಶ್ರೀ
ಕಿ ರಂ ಮತ್ತು ಚಾಕಲೇಟು

0 Comments