ಕಾರಂತರಿಗೆ ಸಿಕ್ಕ ಗಾಂಧಿ

ಕಾರಂತರಿಗೆ ಗಾಂಧಿ ಬರೆದ ಮೂರು ಪತ್ರಗಳು.

531-mahatma-gandhi-610

ಪತ್ರ-1
ಗಾಂಧೀಜಿ ಈ ಪತ್ರ ಬರೆದಾಗ ಕಾರಂತರಿಗೆ 25 ವರ್ಷ. ಕಾರಂತರು ಆರು ಪ್ರಶ್ನೆಗಳಿಗೆ ಉತ್ತರ ಕೇಳಿ ಗಾಂಧೀಜಿಗೆ ಪತ್ರ ಬರೆದಿದ್ದರು. ಅದಕ್ಕೆ ಗಾಂಧಿ ಸರಳವಾಗಿ ಮತ್ತು ಎರಡು ಪುಟಗಳಷ್ಟು ದೀರ್ಘವಾಗಿ ಉತ್ತರಿಸುತ್ತಾರೆ.ಕಾರಂತರು ವಿಮೆ ಮಾಡಿಸುವುದು, ವಿವಾಹ, ಕೀರ್ತನೆ ಮತ್ತು ರಂಗಭೂಮಿ, ಲೈಂಗಿಕ ಸಂಬಂಧ, ಸ್ವಪ್ನ ಸ್ಖಲನ ಕುರಿತು ಗಾಂಧೀಜಿಗೆ ಪ್ರಶ್ನೆ ಕೇಳಿರುತ್ತಾರೆ.ಈ ಎಲ್ಲ ಪ್ರಶ್ನೆಗಳಿಗೆ ಗಾಂಧೀ ಉತ್ತರಿಸಿದ್ದಾರೆ.

ಪತ್ರ -2
ಕಾರಂತರು ಗಾಂಧಿಯವರಿಗೆ ಯೋಗಾಸನ ಕುರಿತ ಪುಸ್ತಕವೊಂದನ್ನು ಬರೆದಿದ್ದು, ಅದನ್ನು ಪ್ರಕಟಿಸುವ ಕುರಿತು ಗಾಂಧೀಜಿಯವರಲ್ಲಿ ಅಭಿಪ್ರಾಯ ಕೇಳಿ ಬರೆದಿರುತ್ತಾರೆ. ಪತ್ರದ ಜತೆ ಪುಸ್ತಕದ ಹಸ್ತ ಪ್ರತಿಯನ್ನು ರವಾನಿಸುತ್ತಾರೆ. ಇದನ್ನು ನೋಡಿದ ಗಾಂಧೀಜಿ 1927ರ ಡಿಸೆಂಬರ್ 19ರಂದು ಕಾರಂತರಿಗೆ ಉತ್ತರ ಬರೆಯುತ್ತಾರೆ. ಸುಮಾರು ಎರಡು ಪುಟಗಳ ಈ ಪತ್ರದಲ್ಲಿ ಗಾಂಧೀಜಿಯವರು 27 ವರ್ಷದ ಕಾರಂತರಿಗೆ ಬ್ರಹ್ಮಚರ್ಯ ಪಾಲನೆ ಮತ್ತು ವಿಧವಾ ವಿವಾಹ, ರಾಮಕೃಷ್ಣ ಪರಮಹಂಸ, ತಮ್ಮ ಪುಸ್ತಕವೊಂದರ ಅನುವಾದ ಕುರಿತು ಬರೆಯುತ್ತಾರೆ.ಆಸನ ಪ್ರಾಣಾಯಾಮ ಕುರಿತು ಬರೆಯುತ್ತಾ, `ಆಸನ, ಪ್ರಾಣಾಯಾಮಗಳು ನೀವು ಹೇಳುವಂತೆ ಅಷ್ಟೊಂದು ಪ್ರಭಾವಿಯಾಗಿದ್ದರೆ, ನೀವೇ ಸಂಪೂರ್ಣವಾಗಿ ಪ್ರಯತ್ನಿಸಿ ನೋಡಬಾರದೇಕೆ?, ಹಾಗೆ ಮಾಡಬೇಕೆಂದು ನನಗೂ ಅನ್ನಿಸುತ್ತದೆಯಾದರೂ ಪರಿಣತರೇ ಬೇಡವೆನ್ನುತ್ತಿದ್ದಾರೆ’.ಬ್ರಹ್ಮಚರ್ಯ ಮತ್ತು ವಿಧವಾ ವಿವಾಹ ಕುರಿತು; ಬ್ರಹ್ಮಚರ್ಯವನ್ನು ಒತ್ತಾಯ ಪೂರ್ವಕ ಹೇರುವುದಲ್ಲ, ಮತ್ತು ಬಾಲ ವಿಧವೆಯ ಮರುವಿವಾಹ ನಿರಾಕರಿಸುವುದು ಪಾಪ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.ಪತ್ರದ ಕಡೆಗೆ ಅಹಿಂಸೆಯ ಕುರಿತು ಹೇಳುವ ಸಾಲುಗಳು ಅಮೂಲ್ಯ. `ಅಹಿಂಸೆಯನ್ನು ಸಂಪೂರ್ಣವಾಗಿ ಪಾಲಿಸುವ ವ್ಯಕ್ತಿ ಯಾರೂ ಇಲ್ಲ. ಆದರೆ ಹಿಂಸೆಯನ್ನು ಆದಷ್ಟು ಕನಿಷ್ಠಗೊಳಿಸುವುದು ನಮ್ಮ ಪ್ರಯತ್ನವಾಗಬೇಕು’.

s81

ಪತ್ರ-3
ಇದು 1929ರ ಜನವರಿ 2ರಂದು ಗಾಂಧೀಜಿ ಬರೆದ ಪತ್ರ. ಕಾರಂತರು ಮತಾಂತರ ಮತ್ತು ಶುದ್ಧಿ ಹಾಗೂ ವಿವಾಹ ಕುರಿತು ಕೇಳಿದ ಪ್ರಶ್ನೆಗಳಿಗೆ ಸರಳವಾಗಿ ಉತ್ತರಿಸುತ್ತಾರೆ.ಯಾವುದೇ ಧರ್ಮವನ್ನೇ ಒಪ್ಪಿ ಹೋದ ವ್ಯಕ್ತಿ ಅದನ್ನು ಪಾಲಿಸಲಾಗದೆ ಹೋದ ವ್ಯಕ್ತಿಯನ್ನು ಶುದ್ಧಿ ಕರಿಸುವುದು ಮುಖ್ಯವಲ್ಲ. ಮೊದಲಿನಂತೆ ಕಾಣುವುದು ಮುಖ್ಯ ಎಂದು ಬರೆಯುತ್ತಾರೆ.ಹಿಂದಿನ ಪತ್ರದಲ್ಲಿ ಹೇಳಿದೆ ಬಾಲವಿಧವಾ ವಿವಾಹದ ಬಗ್ಗೆ ಸಕಾರಾತ್ಮಕವಾದ ಪ್ರತಿಕ್ರಿಯೆ ನೀಡುತ್ತಾರೆ.

ಕಾರಂತರಿಗೆ ಬರೆದ ಈ ಪತ್ರಗಳಲ್ಲಿ ಸಾಮಾನ್ಯ ಎನಿಸುವ ಸಂಗತಿಗಳು ಚಚರ್ೆಯಾಗಿವೆ. ಹಾಗೆಯೇ ಬಾಲ ವಿಧವಾ ವಿವಾಹದಂಥ ಗಂಭೀರ ವಿಷಯಗಳು ಚಚರ್ೆಯಾಗಿವೆ. ಆದರೆ ಗಾಂಧೀಜಿ ಸಾಮಾನ್ಯ ಸಂಗತಿಗಳಿಗೂ ಪ್ರತಿಕ್ರಿಯಿಸುವಷ್ಟು ಆಸ್ಥೆ ವಹಿಸುತ್ತಿದ್ದರು ಎಂಬುದು ಈ ಪತ್ರಗಳಿಂದ ತಿಳಿಯುತ್ತದೆ. ಹಾಗೆಯೇ ಕಾರಂತರು ತಮ್ಮ ಯುವ ದಿನಗಳಲ್ಲೇ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕಾಳಜಿಯ ಪ್ರಶ್ನೆಗಳು ಎತ್ತಿದ್ದರು ಎಂಬುದೂ ತಿಳಿಯುತ್ತದೆ. ಗಾಂಧೀಯವರ ಈ ಮಾರ್ಗದರ್ಶನದಿಂದಲೇ ಕಾರಂತರು ಸರಳ ಜೀವನಕ್ಕೆ ಮಾರು ಹೋಗಿದ್ದು. ಹೋರಾಟದ ಗುಣ ಮೈಗೂಡಿಸಿಕೊಂಡಿದ್ದು ಎಂದರೆ ತಪ್ಪಾಗುವುದೆ?

 

‍ಲೇಖಕರು avadhi

October 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: