‘ಕರವೇ ನಲ್ನುಡಿ ಮಾಸ ಪತ್ರಿಕೆ ಕನ್ನಡ ರಾಜ್ಯೋತ್ಸವ ವಿಶೇಷಾಂಕ ಪ್ರಯುಕ್ತ ಏರ್ಪಡಿಸಿದ್ದ ದ್ವಿತೀಯ ವರ್ಷದ ಕಥಾಸ್ಪರ್ಧೆ-೨೦೧೧ ರಲ್ಲಿ
ಮಂಜುನಾಥ ಲತಾ ಅವರ ‘ಮಂಟೇದರನೊಕ್ಕಲು ಲೋಕರೂಢಿಗೊಳಗಾದುದು’ ಕಥೆಯು ಪ್ರಥಮ ಬಹುಮಾನ ಪಡೆದು ಕೊಂಡಿದೆ.
ಗೌತಮ ಜೋತ್ಸ್ನ ಅವರ ‘ನೀಲಿ ಕಥೆಗೆ ದ್ವಿತೀಯ ಹಾಗೂ
ಚಿಂತಕ ಹಾಗೂ ಬರಹಗಾರ ಡಾ.ನಟರಾಜ್ ಹುಳಿಯಾರ್ ಅವರ ನೇತೃತ್ವದಲ್ಲಿ ತೀರ್ಪುಗಾರರ ಸಮಿತಿ ಸ್ಪಧೆಗೆ ಬಂದ ಕಥೆಗಳನ್ನು ಪರಿಶೀಲನೆ ನಡೆಸಿ ಫಲಿತಾಂಶ ಪ್ರಕಟಿಸಿದೆ.
ಮೆಚ್ಚುಗೆ ಪಡೆದ ಕಥೆಗಳು:
‘ಬಾಡಿ ಡೊನೇಷನ್ (ಡಾ.ಪ್ರಹ್ಲಾದ ಅಗಸನಕಟ್ಟೆ), ‘ಸ್ವರ್ಗದ ಬಾಗಿಲು ತೆರೆಯುವ ದಿನ (ತೊಡಿರಾನ ಅಬ್ದುಲ್ಲ), ‘ಉರಿವ ಸೂರ್ಯನ ಪಾದ (ಅಬ್ಬಾಸ ಮೇಲಿನ ಮನಿ), ಬಿಸಿಲುಗುದುರೆಯ ಬಿಸುಪು ( ಡಾ.ಬಸು ಬೇವಿನ ಗಿಡದ), ಪೆಪ್ಸಿಯ ಡೈರಿಯಿಂದ ಕದ್ದ ಪುಟಗಳು (ಡಾ.ಜಿ.ಎಸ್.ಸತೀಶ್ ಹೊಸಕೆರೆ), ಅಸ್ತಿತ್ವ (ಅನುಬೆಳ್ಳಿ), ನಿರ್ಗಮನ (ಜ್ಯೋತಿ ಬಿ.ಕುಲಕರ್ಣಿ), ಉಣಲೆಂದು ಬಂದ ಸುಖ (ಕಲ್ಲೇಶ್ ಕುಂಬಾರ್), ಮಸಿಪೆನ್ನು (ಬಸವಣ್ಣೆಪ್ಪ ಪ.ಕಂಬಾರ), ಚಡ್ಡಿ ಶಾಮಣ್ಣನೂ, ಹನ್ನೆರಡು ಕತ್ತೆಗಳೂ (ವಿಶ್ವನಾಥ ಪಾಟೀಲ ಗೋನಾಳ), ಅಭಿವೃದ್ಧಿ (ಹನುಮಂತ ಹಾಲಿಗೇರಿ) ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕಥಾ ಸ್ಪರ್ಧೆಯ ವಿಜೇತರಿಗೆ ಕರವೇ ‘ನಲ್ನುಡಿ ವತಿಯಿಂದ ಬೆಂಗಳೂರಿನಲ್ಲಿ ನಡೆವ ಕಾರ್ಯಕ್ರಮದಲ್ಲಿ ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.







ಎಲ್ಲರಿಗೂ ಶುಭಾಷಯಗಳು.
– ಗುಬ್ಬಚ್ಚಿ ಸತೀಶ್.
Congratulations