
ದಿನವೊಂದರಲ್ಲಿ ಕನಿಷ್ಟ ಹದಿನೈದು ಬಾರಿ ಮನುಷ್ಯ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳುತ್ತಾನೆ ಎಂದು ಒಂದು ಅಧ್ಯಯನ ಹೇಳುತ್ತದೆ. ಪ್ರತಿ ನೋಟದಲ್ಲೂ ತನ್ನ ಕೆದರಿರುವ ತಲೆಕೂದಲನ್ನು ಸರಿಪಡಿಸಿಕೊಳ್ಳುತ್ತಾನೆ. ಅಥವಾ ಇಣುಕುತ್ತಿರುವ ಬೆಳ್ಳಿಕೂದಲನ್ನು ಕಂಡು ಕಳವಳಗೊಳ್ಳುತ್ತಾನೆ. ಇಲ್ಲವೇ ಕಣ್ಣಂಚ ತುದಿಗಂಟಿದ ಪಿಸುರನ್ನೋ, ತುಟಿತುದಿಯಲ್ಲಿ ಕೂತ ಅನ್ನದಗಳನ್ನೋ ಒರೆಸಿಕೊಳ್ಳುತ್ತಾನೆ. ಕೊಳೆಯಾಗಿರುವ ಬಟ್ಟೆಯನ್ನು ಕಂಡು ಅಸಹ್ಯ ಪಟ್ಟುಕೊಳ್ಳುತ್ತಾನೆ.
ಕನ್ನಡಿ ಎಂದೇ ನಾವೆಲ್ಲ ಸಾಮಾನ್ಯವಾಗಿ ಕರೆಯುವ ಈ ದರ್ಪಣ ಹೀಗೆ ನಮ್ಮ ಮುಖದ ಮೇಲಣ ಬಾಹ್ಯದ ಶುಚಿಗೆ ಕಾರಣವಾಗುವಂತೆಯೇ ಅಶುಚಿಯನ್ನು ಎತ್ತಿ ತೋರುತ್ತದೆ. ಸರಿಯಿಲ್ಲದುದನ್ನು ಸರಿಪಡಿಸಿಕೊಳ್ಳಬೇಕೆಂಬ ಅರಿವನ್ನು ಒಳಗಿನಿಂದ ಮೂಡಿಸುತ್ತದೆ.
ಕನ್ನಡಿ ಎಂದೇ ನಾವೆಲ್ಲ ಸಾಮಾನ್ಯವಾಗಿ ಕರೆಯುವ ಈ ದರ್ಪಣ ಹೀಗೆ ನಮ್ಮ ಮುಖದ ಮೇಲಣ ಬಾಹ್ಯದ ಶುಚಿಗೆ ಕಾರಣವಾಗುವಂತೆಯೇ ಅಶುಚಿಯನ್ನು ಎತ್ತಿ ತೋರುತ್ತದೆ. ಸರಿಯಿಲ್ಲದುದನ್ನು ಸರಿಪಡಿಸಿಕೊಳ್ಳಬೇಕೆಂಬ ಅರಿವನ್ನು ಒಳಗಿನಿಂದ ಮೂಡಿಸುತ್ತದೆ.
ಸಂಪೂರ್ಣ ಓದಿಗೆ ಭೇಟಿ ಕೊಡಿ: ಬೆಂಕಿ ಕಡ್ಡಿ
+++
ರಂಜನೆಯಾಗುತ್ತಿದೆ ಸಾಹಿತ್ಯ
ಕನ್ನಡದ ಇವತ್ತಿನ ಸಾಹಿತ್ಯದ ಕುರಿತು ಯೋಚಿಸುತ್ತಿರುವಾಗ ಯಾಕೋ ಮತ್ತೆ- ಮತ್ತೆ ಎಫ್.ಆರ್. ಲೆವಿಸ್ ಮಾತುಗಳು ನೆನಪಾಗುತ್ತವೆ. ಜನಪ್ರಿಯ ಸಾಹಿತ್ಯ ಯಾವಾಗಲೂ ಬಂಡವಾಳಶಾಹಿ ಶಕ್ತಿಗಳಿಂದಲೇ ಪ್ರೇರಿತವಾಗಿರುವುದರಿಂದ ಅದರ ಏಕೈಕ ಉದ್ದೇಶ ಸದಾ ಹಣವಷ್ಟೇ ಆಗಿರುತ್ತದೆ ಎಂಬ ಆತನ ಮಾತನ್ನು ಈಗಿನ ಸಂದರ್ಭದಲ್ಲಿ ತುಸು ಮಾರ್ಪಾಡು ಮಾಡಿ ಹೀಗೆ ಹೇಳಬಹುದೇನೋ.. ‘ಜನಪ್ರಿಯ ಸಾಹಿತ್ಯ ಈಗ ಸದಾ ದುಡ್ಡು ಮಾಡುವುದರ ಮೇಲೇ ಕಣ್ಣಿಟ್ಟು ತಾನೇ ಸ್ವತಃ ಬಂಡವಾಳಶಾಹಿಯಾಗಿ ವರ್ತಿಸುತ್ತಿರುವುದರಿಂದ ಅದರ ಕಣ್ಣಿಗೆ ಹಣವಲ್ಲದ ಬೇರೆ ಜಗತ್ತು ಕಾಣುತ್ತಿಲ್ಲ’!?
ಈ ಮಾತನ್ನು ಹೀಗೆ ಅಚಾನಕ್ಕಾಗಿ ಹೇಳುತ್ತಿಲ್ಲ, ಕಳೆದ ಏಳೆಂಟು ವರ್ಷಗಳಿಂದ ಕನ್ನಡದ ಬಹುತೇಕ ಲೇಖಕರನ್ನು ಗಮನಿಸಿದಾಗೆಲ್ಲಾ ಯೋಚನೆಗೆ ಹಚ್ಚಿದ್ದು ಎಫ್.ಆರ್. ಲೆವಿಸ್. ಆತನ ನಂತರ ಬಹಳಷ್ಟು ಸಾಹಿತ್ಯ ಥಿಯರಿಗಳು ಬಂದಿವೆ, ಪೋಸ್ಟ್ ಮಾರ್ಡನಿಸಂನಂತಹ ಆತನಿಗೆ ಬಹುತೇಕ ವಿರುದ್ಧವಾದ ಚಳವಳಿ ಕೂಡ ಬಂದಾಯಿತು. ಗಂಭೀರ ಮತ್ತು ಜನಪ್ರಿಯ ಎಂಬ ಪ್ರತ್ಯೇಕತೆಗಳನ್ನು ಅಳಿಸಿ ಹಾಕಿ ‘ಸೆಲೆಬ್ರೇಷನ್ ಆಫ್ ಫ್ರಾಗ್ಮಾಟಿಸಂ’ ಎಂದು ಹುಯಿಲೆದ್ದಿದ್ದೂ ಆಯಿತು. ಆದರೆ, ಈಗಿನ ಪ್ರಶ್ನೆಯೆಂದರೆ, ಸಾಹಿತ್ಯ ಎಲ್ಲರಿಗೂ ತಲುಪಬೇಕು, ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂಬುದು ಯಾವ ಬೆಲೆ ತೆತ್ತು ಸಾಧಿಸಬೇಕಾಗಿರುವ ಉದ್ದೇಶ? ನಾನು ಬರೆದದ್ದನ್ನು ಸಾವಿರಾರು ಜನ ಓದಬೇಕು, ಟಾಪ್ಟೆನ್ ಎಂಬ ಪ್ರಹಸನಪಟ್ಟಿಯಲ್ಲಿ ಹೆಸರು ಕಾಣಿಸಿಕೊಳ್ಳಬೇಕು, ಪ್ರಕಾಶಕನ ಜೇಬು ತುಂಬಬೇಕು, ತಾನೂ ಬೇಡಿಕೆಯ ಬರಹಗಾರನಾಗಿ ಹಣ ಮಾಡಿಕೊಂಡು ಇರಬೇಕು,… ಎಲ್ಲದರ ಒಟ್ಟರ್ಥ ಬರವಣಿಗೆಯೆನ್ನುವುದೇ ಒಂದು ದಂಧೆ!
ಸಂಪೂರ್ಣ ಓದಿಗೆ ಭೇಟಿ ಕೊಡಿ: ಮಲೆಯ ಮಾತು



0 Comments