ಕನ್ನಡ ಸಾಹಿತ್ಯ ಲೋಕಕ್ಕೆ ಚೆಕಾವ್ , ರವೀಂದ್ರನಾಥ ಟಾಗೋರ್, ಇಬ್ಸನ್, ದಾಸ್ತೋವ್ಸ್ಕಿ ಇವರುಗಳನ್ನು ಪರಿಚಯಿಸಿದ ಶ್ರೀನಿವಾಸ ವಿ ಸುತ್ರಾವೆ ಅವರು ಇಂದು ನಿಧನ ಹೊಂದಿದರು.
ದಾವಣಗೆರೆ ಮೂಲದ ಸುತ್ರಾವೆ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಇವರ ಕವಿತಾ ಸಂಕಲನ ‘ಉದುರುವ ಎಲೆಗಳು’ ಸಾಕಷ್ಟು ಹೆಸರು ಮಾಡಿತ್ತು.
ಅನುವಾದ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಯನ್ನು ಗಮನಿಸಿ ಕುವೆಂಪು ಭಾಷಾ ಪ್ರಾಧಿಕಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು
0 ಪ್ರತಿಕ್ರಿಯೆಗಳು