
ಎಂ ಎಸ್ ವಿದ್ಯಾ
ಸೋಜಿಗ ಹಾಗೂ ಸಂತೋಷದ ವಿಷಯ!! ಬೆಂಗಳೂರು ಕನಕಪುರದ ಬಸ್ಸಿನಲ್ಲಿ ನಮ್ಮ ತಾಯಿಯ ಫೋಟೊ, ಜನಪ್ರಿಯ ಲೇಖಕಿಯರ ನಡುವೆ ಇದನ್ನು ನೋಡಿದ ಕೂಡಲೆ ನನಗೆ ವಿಡಿಯೋ ಕಾಲ್ ಮಾಡಿ, ಫೋಟೊ ಸಹ ಕಳಿಸಿದ ಹಿತೈಷಿ ಶಿವಣ್ಣ ಅವರಿಗೆ ಧನ್ಯವಾದಗಳು.
ಮತ್ತೊಂದು ಆಶ್ಚರ್ಯಕರ ವಿಷಯವೆಂದರೆ ಬಸ್ಸಿನ ಚಾಲಕ ಮತ್ತು ನಿರ್ವಾಹಕರೆ ಇದನ್ನು ಪ್ರಾಯೋಜಿಸಿರುವುದು!! ಎಲ್ಲೆಲ್ಲೂ ರಾರಾಜಿಸುವ ಜನಪ್ರಿಯ ತಾರೆಯರ ಲೇಖಕಿಯರ ಚಿತ್ರಗಳು ಕಾಣಿಸುವುದು ಅಪರೂಪ.








ಕನ್ನಡ ನುಡಿ ತೇರಿನ ಮುಡಿಗೆ ಇಂತಹ ಕಾರ್ಯಗಳು ಗರಿ ಮೂಡಿಸಿವೆ. ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ಕನ್ನಡ ಸಾಹಿತ್ಯದ ಅಭಿಮಾನ ಆಸಕ್ತಿಗೆ ಇದೋ ಸಾವಿರದ ಶರಣು