’ಒಂದು ಕವಿತೆ ಯಾಕೆ ತಲೆ ಕೆಡಿಸುತ್ತದೆ?’ – ಪ್ರಜ್ಞಾ ಶಾಸ್ತ್ರಿ

ಪ್ರಜ್ಞಾ ಶಾಸ್ತ್ರಿ

ಒಂದು ಕವಿತೆ ಯಾಕೆ ತಲೆ ಕೆಡಿಸುತ್ತದೆ?

ಅದು ಒಂದು ಘನೀಭವಿಸಿದ ಹನಿಯಾದಾಗ. ಆಕಾಶವನ್ನ ಕಲ್ಪಿಸಿಕೊ. ಅದರ ಒಡಲೊಳಗಿದ್ದ ರಹಸ್ಯವನ್ನೆಲ್ಲ ಬಸಿದು ಮೋಡ ಕಟ್ಟಿ ಆ ಮೋಡದ ಒಂದು ಅಂಶ ಆ ಕವಿತೆಯೊಳಗಿನ ಹನಿಯಾದಾಗ. ಆ ಹನಿಯ ಜಾಡು ಹಿಡಿದು ಆಕಾಶದ ಒಡಲನ್ನು ತಲುಪುವ ರೋಚಕ ಯಾನವೊಂದನ್ನು ಊಹಿಸಿಕೋ. ಆ ಯಾನ ನನ್ನದು. ಯಾನಕ್ಕೆ ದಾರಿ ಕೊಡುವವನು ಕವಿ. ತಲೆ ಕೆಡೋದಿಲ್ಲವಾ!


ಏನಿಲ್ಲ. ನೆನಪುಗಳನ್ನ ಕೆದಕುತ್ತದ. ಕಲಕುತ್ತದೆ. ಕನಸುಗಳನ್ನ ಬಿತ್ತುತ್ತದೆ. ಹೊಳೆಯೊಳಗೆ ಸುಳಿ ಇರ‍್ತದೆ ನೋಡು ಹಾಗೆ…ಯಾವ ಅಂತರಿಕ್ಷಕ್ಕೆ ಕೊಂಡೊಯ್ಯುತ್ತದೋ ಯಾರು ಬಲ್ಲರು…
ಈಗ ಈ ಕೊಳ. ಆ ಹಣ್ಣೆಲೆ ಯಾವುದೋ ಮರದ ನಂಟಿನ ತೊಟ್ಟು ಕಳಚಿಕೊಂಡು ಬಂಧಮುಕ್ತನಾದ ಭ್ರಮೆಯಲ್ಲಿ ತುಪ್ಪಳದಷ್ಟು ಹಗುರವಾಗಿ ನೀರಿಗೆ ಬಿತ್ತು. ಅಲ್ಲಿಗೆ ಆ ಕತೆ ಮುಗಿಯಿತು.
ಆದರೆ ಆ ಕೊಳವೇಕೆ ಹಾಗೆ ಕಂಪಿಸುತ್ತಿದೆ? ಹಾಗೆ ಯಾಕೆ ಅಲೆಯ ತೇರೆದ್ದಿದೆ? ಅಲ್ಲೊಂದು ಕವಿತೆ ಹುಟ್ಟಿರಬೇಕು. ಅಲ್ಲಿಗೆ ಈ ಕತೆ ಈಗಷ್ಟೇ ಶುರುವಾಯಿತು! ಯಾಕಿಲ್ಲ?
 

‍ಲೇಖಕರು G

March 31, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. sahyadri nagaraj

    🙂 ಹಮ್… ಚಂದಿದೆ ಪ್ರಜ್ಞಾ. ಪದ್ಯ ಹುಟ್ಟುವಾಗ ಅಲೆ ಏಳಲೇಬೇಕು ಬಿಡಿ, ಇಲ್ಲದಿದ್ದರೆ ಅದಕ್ಕೆ ಪದ್ಯ ಎಂದು ಒಪ್ಪುವುದಾದರೂ ಹೇಗೆ?! 😉

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: