ಅಕ್ಷತಾ ಹುಂಚದಕಟ್ಟೆ
“ಜನ ನುಡಿಯಲ್ಲಿ ನೀವು ಕೊರಗ ಸಮುದಾಯದ ನೃತ್ಯ ನಡೆದ ನಂತರ ಅವರಿಗೆ ಪುಸ್ತಕ ಕೊಡುಗೆ ಕೊಡುವ ಹೊತ್ತಲ್ಲಿ.. ಆ ಕಲಾವಿದರ ಕಾಲು ಮುಟ್ಟಿ ನಮಸ್ಕರಿಸಿದಿರಿ.. ಯಾವ ಸಮುದಾಯವನು ದೂರ ಇಡಲಾಗಿತ್ತೋ, ಯಾವ ಸಮುದಾಯವನ್ನು ಅಸ್ಪೃಶ್ಯ ಎಂದು ನೋಡಲಾಗಿತ್ತೋ, ಆ ಸಮುದಾಯದವರ ಕಾಲಿಗೆ ಬಿದ್ದಿರಿ.. ಇದು ಬಹಳ ವಿಶೇಷವೆನಿಸಿತು.. ಈ ನಿಮ್ಮ ಕ್ರಿಯೆ ಏನನ್ನು ಸೂಚಿಸುತ್ತೆ?” ಎಂದು ಕೇಳಲಾದ ಪ್ರಶ್ನೆಗೆ ಬಿಳಿಮಲೆ ಸರ್ ಉತ್ತರ..
ನಾನು ಇಷ್ಟೊತ್ತು ಮಾತಾಡಿದೆನೆಲ್ಲ ಆ ಜ್ಞಾನದ ಮೂಲ ಅವರು.. ನಾನು ಕಾಲಿಗೆ ಬೀಳುವ ಮೂಲಕ ನಾನವರಿಂದ ಪಡೆದಿದ್ದಕ್ಕೆ ಸಲ್ಲಿಸಿದ ಗೌರವ ಅಷ್ಟೇ.. ನಾನವರಿಂದ ಪಡೆಯದೇ ಇದ್ದಿದ್ದರೆ ನಿಮಗೆ ಏನನ್ನು ಕೊಡಲಿಕ್ಕಾಗುತ್ತಿತ್ತು? ನಾನು ವಾಹಕ ಅಷ್ಟೇ.. ಜ್ಞಾನದ ಮೂಲ ಆ ಹಿರಿಯರು.. ಅವರಿಂದ ಪಡೆದಿದ್ದಕ್ಕೆ ನನ್ನ ಕೃತಜ್ಞತೆ..
ಹೀಗೆ ಹೇಳುತ್ತಾ ಹೋದರು ಬಿಳಿಮಲೆ ಸರ್..
ನಾವು ಅವರ ನುಡಿಗೆ ಮಣಿದೆವು.. ಅವರ ನೋಟಕ್ಕೆ ಬೆರಗಾದೆವು..
ನಿನ್ನೆಯ ದಿನ ಒಂದು ಅಪೂರ್ವ ದಿನ ಕಾರಣ ಬಿಳಿಮಲೆ ಸರ್
0 ಪ್ರತಿಕ್ರಿಯೆಗಳು