ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..

ನಿಮ್ಮ ಮುಕ್ತ ಅಭಿಪ್ರಾಯಕ್ಕೆ ಸ್ವಾಗತ 

[email protected] ಗೆ ಕಳಿಸಿಕೊಡಿ 

ಡಾ. ವಡ್ಡಗೆರೆ ನಾಗರಾಜಯ್ಯ

“ಡಾ.ಎಸ್.ರಾಧಾಕೃಷ್ಣನ್ ಅವರು ಭಾರತದ ರಾಷ್ಟ್ರಪತಿಯಾಗಿದ್ದವರು. ಅವರು ದೇಶದ ಪ್ರಥಮ ಪ್ರಜೆ ಎಂದು ಗುರುತಿಸಿಕೊಳ್ಳುವುದಕ್ಕಿಂತಲೂ ಮಿಗಿಲಾಗಿ ತಾನೊಬ್ಬ ಶಿಕ್ಷಕ ಎಂದು ಗುರುತಿಸಿಕೊಳ್ಳುವುದರ ಮೂಲಕ ಶಿಕ್ಷಕರ ವೃತ್ತಿಗೂ ಅಧ್ಯಾಪಕರ ವರ್ಗಕ್ಕೂ ಘನತೆ ತಂದುಕೊಟ್ಟವರು. ಪ್ರತಿ ವರ್ಷ ಸೆಪ್ಟೆಂಬರ್ 5 ರಂದು, ರಾಧಾಕೃಷ್ಣನ್ ಅವರ ಜನ್ಮ ದಿನದ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ನಡೆಸುತ್ತಿರುವುದು ಹೆಮ್ಮೆಯ ಮತ್ತು ಅಭಿಮಾನದ ಸಂಗತಿ ” ಎಂದು ರಾಧಾಕೃಷ್ಣನ್ ಅವರ ಹೆಸರನ್ನು ಇವತ್ತು ದೇಶದೆಲ್ಲೆಡೆ ಭಜಿಸಲಾಗುತ್ತಿದೆ.

ಶಿಕ್ಷಕರ ವೃತ್ತಿ ಗೌರವದ ರೂಪಕವಾಗಿ ಬಾಳಿದ ರಾಧಾಕೃಷ್ಣನ್ ಅವರ ಜನ್ಮ ದಿನ ಆಚರಿಸುವ ಮೂಲಕ ಇಡೀ ಅಧ್ಯಾಪಕ ವರ್ಗ ತನ್ನನ್ನು ತಾನು ಗೌರವಿಸಿಕೊಳ್ಳುತ್ತಿದೆ ಎಂದು ಇಲ್ಲಿಯವರೆಗೂ ನಾವು ಕುರುಡಾಗಿ ಭಾವಿಸಿದ್ದೇವೆ. ರಾಧಾಕೃಷ್ಣನ್ ಅವರು ಇಡೀ ಶಿಕ್ಷಕ ಕುಲ ಹೆಮ್ಮೆಪಡುವಂಥ ಮತ್ತು ಶಿಕ್ಷಕರಿಗೆ ಆದರ್ಶಪ್ರಾಯವಾಗಬಲ್ಲ ಘನತೆಯ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದವರಲ್ಲ. ಗುರುವಿನ ಪರಮ ಪದವಿಯೇ ಶ್ರೇಷ್ಠ ಎನ್ನಿಸಿರುವಾಗ ನಮ್ಮ ಗುರುವರ್ಗದವರು ರಾಧಾಕೃಷ್ಣನ್ ಎಂಬ ವ್ಯಕ್ತಿಯೊಬ್ಬನನ್ನು ಆದರ್ಶ ಮಾದರಿಯಾಗಿ ಪ್ರತಿಷ್ಠಾಪಿಸಿಕೊಂಡು ವ್ಯಕ್ತಿಪೂಜೆ ಮಾಡುವುದು ಶೋಭೆಯಲ್ಲ.

ಇಷ್ಟಕ್ಕೂ, 5 ಸೆಪ್ಟೆಂಬರ್ 1888 ರಾಧಾಕೃಷ್ಣನ್ ಅವರ ಜನ್ಮ ದಿನವಲ್ಲ 20 ಸೆಪ್ಟೆಂಬರ್ 1887 ಎಂಬುದನ್ನು ಸ್ವತಃ ಅವರ ಮಗ ಡಾ. ಸರ್ವಪಲ್ಲಿ ಗೋಪಾಲ್ ದಾಖಲಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಪ್ರಾಧ್ಯಾಪಕರೂ ಇತಿಹಾಸಕಾರರೂ ಆಗಿರುವ ಡಾ. ಸರ್ವಪಲ್ಲಿ ಗೋಪಾಲ್ ಅವರು ತಮ್ಮ ತಂದೆಯನ್ನು ಕುರಿತು ಬರೆದಿರುವ ಹಾಗೂ ಪ್ರಖ್ಯಾತ Oxford University Press 1989 ರಲ್ಲಿ ಪ್ರಕಟಿಸಿರುವ Radhakrishnan : A Biography ಎಂಬ ಪುಸ್ತಕದ 10ನೇ ಪುಟದಲ್ಲಿ ಈ ಅಂಶ ದಾಖಲಾಗಿದೆ.

ಪುಸ್ತಕದಲ್ಲಿ ನಮಗೆ ತಿಳಿದುಬರುವ ಸಂಗತಿಗಳೇನೆಂದರೆ ರಾಧಾಕೃಷ್ಣನ್ ಅವರು ತನಗೆ ಜನ್ಮಕೊಟ್ಟ ತಾಯಿಯನ್ನು ಆಕೆಯ ಜೀವಮಾನ ಪರ್ಯಂತ ದೂರ ಇಟ್ಟಿದ್ದರು. ವೈಷ್ಣವ ಅಧಿಕಾರಿಯೊಬ್ಬನಿಗೆ ರಾಧಾಕೃಷ್ಣನ್ ವಿವಾಹ ಬಾಹಿರ ಸಂಬಂಧದಿಂದ ಜನಿಸಿದವರು. ಇದೇ ಕಾರಣದ ಹಿನ್ನೆಲೆಯಲ್ಲಿ ರಾಧಾಕೃಷ್ಣನ್ ತನ್ನ ತಾಯಿಯ ಚಾರಿತ್ರ್ಯದ ಬಗ್ಗೆ ನೈತಿಕ ಕ್ರೋಧ ವ್ಯಕ್ತಪಡಿಸುತ್ತಿದ್ದರು.

ಡಾ.ಸರ್ವಪಲ್ಲಿ ಗೋಪಾಲ್ ಬರೆಯುತ್ತಾರೆ : “Most of the major details about the birth of Sarvepalli Radhakrishnan are uncertain. The official version is that he was born on 5 September 1888 at Tirutini, a very small temple town to the north west of Madras city, the second son of a poor Brahmin couple, Sarvepalli Veeraswamyi and his wife Sitamma.

However, Radhakrishnan himself was inclined to believe that the date of his birth was in fact 20 September 1887. More important is the doubt whether Veeraswami was his father. Parental responsibility lay, according to village rumor, with an itinerant Vaishnavite official. Sitamma’s brother, who served in the local administration, was thought to have arranged the rendezvous to oblige a superior officer. Credence is lent to the story by the difficulty in believing that Radhakrishnan and his four brothers and sister belonged to the same genetic pool. Intellectual endowment and physical appearance both suggested that Radhakrishnan belonged to different stock. Radhakrishnan himself accepted this version and, critical of his mother’s conduct, always, throughout her long life, kept her at a distance. But he was attached to the man who passed for his father.(ಪುಟ 10)

ಬ್ರಾಹ್ಮಣ ಮನೆತನದ ರಾಧಾಕೃಷ್ಣನ್ ಅವರ ತಾಯಿಯಾದ ಸೀತಮ್ಮನವರು, ಸ್ಥಳೀಯ ಆಡಳಿತದಲ್ಲಿ ಅಧಿಕಾರಿಯಾಗಿದ್ದ ಸ್ವತಃ ತನ್ನ ತಮ್ಮನಿಂದಲೇ ಆತನ ಹಿರಿಯ ವೈಷ್ಣವ ಅಧಿಕಾರಿಯೊಂದಿಗೆ ವಿವಾಹಬಾಹಿರ ಸಂಬಂಧ ಹೊಂದಿದ್ದ ಬಗ್ಗೆ ಬರೆದಿರುವ ಡಾ.ಸರ್ವಪಲ್ಲಿ ಗೋಪಾಲ್, ತಮ್ಮ ತಂದೆಯಾದ ಡಾ.ಎಸ್.ರಾಧಾಕೃಷ್ಣನ್ ಅವರ ವಿವಾಹ ಬಾಹಿರ ಸಂಬಂಧಗಳ ಬಗ್ಗೆಯೂ ಈ ಪುಸ್ತಕದಲ್ಲಿ ನಿರ್ಮಮಕಾರವಾಗಿ ತೆರೆದಿಟ್ಟಿದ್ದಾರೆ. ನೈತಿಕ ಪ್ರಶ್ನೆಯನ್ನು ಮುಂದಿಟ್ಟುಕೊಂಡು ತನ್ನ ಹೆತ್ತ ತಾಯಿಯನ್ನು ನಿಂದಿಸುತ್ತಿದ್ದ ಮಗ ರಾಧಾಕೃಷ್ಣನ್, ವೈಯಕ್ತಿಕವಾಗಿ ಅಂತಹ ಯಾವುದೇ ವೈವಾಹಿಕ ನೈತಿಕ ಮೌಲ್ಯಗಳನ್ನು ಕಾಪಾಡಿಕೊಂಡಿದ್ದವರಾಗಿರಲಿಲ್ಲ.

“…… Radhakrishnan began, too, to show an interest in another woman…… He would not accept, even to himself, that that his loyalty to her was tarnished by his extramarital adventures….. Marriage as he saw it, did not require a husband;s monogamous attitude. She was a devoted wife by any standards. (ಪುಟ. 14).

ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾಧಾಕೃಷ್ಣನ್, ತಮ್ಮ ಪಕ್ಕದ ಮನೆಯಲ್ಲಿದ್ದ ವ್ಯಕ್ತಿಯ ಹೆಂಡತಿಯೊಂದಿಗೆ ಅಕ್ರಮ ಲೈಂಗಿಕ ಸಂಬಂಧ ಹೊಂದಿದ್ದರು. ಒಬ್ಬಿಬ್ಬರು ಹೆಂಗಸರೊಂದಿಗಲ್ಲದೆ ಹಲವಾರು ಹೆಂಗಸರೊಂದಿಗೆ ವಿವಾಹ ಬಾಹಿರ ಲೈಂಗಿಕ ಸಂಬಂಧಗಳ ಸರಣಿಯನ್ನು ಹೊಂದಿದ್ದರೆಂದು ಈ ಪುಸ್ತಕದ ಓದಿನಿಂದ ತಿಳಿದುಬರುತ್ತದೆ.

“….he showed his mistresses consideration…. But he never gave them even the semblance of love….. all the women whom he accepted in his life were of superficial mind some enjoyed dubious reputations and many were dominating and hysterical.” (ಪುಟ. 50 – 51).

ತಮ್ಮ”The Hindu view of life” ಎಂಬ ಪುಸ್ತಕದಲ್ಲಿ ಹಿಂದೂ ಧರ್ಮದ ಮೌಲ್ಯಗಳನ್ನು ಕುರಿತು, ಆಧ್ಯಾತ್ಮಿಕತೆಯನ್ನು ಕುರಿತು ಪುಂಕಾನುಪುಂಕವಾಗಿ ಬರೆದಿರುವ ರಾಧಾಕೃಷ್ಣನ್, ಒಬ್ಬ ಶಿಕ್ಷಕನಾಗಿ, ಒಬ್ಬ ರಾಷ್ಟ್ರಾಧ್ಯಕ್ಷನಾಗಿ ಸಾರ್ವಜನಿಕ ಜೀವನದಲ್ಲಿ ಬೋಧಿಸುವುದೊಂದು.. ತನ್ನದೇ ವೈಯಕ್ತಿಕ ಖಾಸಗಿ ಜೀವನದಲ್ಲಿ ನಡೆದುಕೊಳ್ಳವುದು ಇನ್ನೊಂದು.

ಇದು ಎಂತಹ ಆದರ್ಶ ಶಿಕ್ಷಕನ ಆದರ್ಶ ಮಾದರಿ? ಸರ್ವಪಲ್ಲಿ ಗೋಪಾಲ್ ಬರೆಯುತ್ತಾರೆ : “…But what castes a shadow is the contrast between the way he conducted his private life and what he preached in public”. ಇಂತಹ ಆಷಾಢಭೂತಿ ಮಾದರಿ ವ್ಯಕ್ತಿತ್ವವನ್ನು ಶಿಕ್ಷಕರು ಅನುಸರಿಸಬೇಕೇನು?

ಡಾ.ಎಸ್.ರಾಧಾಕೃಷ್ಣನ್ ತನ್ನ ಐದು ಜನ ಹೆಣ್ಣುಮಕ್ಕಳ ಮದುವೆಯನ್ನು ಅಪ್ರಾಪ್ತ ವಯಸ್ಸಿನಲ್ಲಿಯೇ ಅವರ ಯಾವುದೇ ಒಪ್ಪಿಗೆ ಕೇಳದೆ ಮಕ್ಕಳ ಇಚ್ಛೆಗೆ ವಿರುದ್ಧವಾಗಿ ನೆರವೇರಿಸಿದ್ದಾರೆ.

ಗೋಪಾಲ್ ಅವರು ದಾಖಲಿಸುತ್ತಾರೆ…”But his attitude also indicates that, whatever his utterances, his instinctive outlook was that women were made for men” (ಪುಟ. 49) ಮಹಿಳೆಯರು ಪುರುಷನ ಸರಕು ಎಂಬ ರೀತಿಯಲ್ಲಿ ಉಪಚರಿಸಿರುವ ರಾಧಾಕೃಷ್ಣನ್, ತನ್ನೊಬ್ಬಳು ಮಗಳನ್ನು ಮದುವೆಯಾಗುವ ವರನನ್ನು ಮದುವೆಯ ದಿನಕ್ಕಿಂತ ಮೊದಲು ನೋಡಿರಲಿಲ್ಲವೆಂದು ದಾಖಲಿಸಿದ್ದಾರೆ ಡಾ.ಸರ್ವಪಲ್ಲಿ ಗೋಪಾಲ್.

ಇಂತಹ ವ್ಯಕ್ತಿಯ ಜನ್ಮ ದಿನವನ್ನು ನಮ್ಮ ವಿಚಾರವಂತ ಶಿಕ್ಷಕರು ಯಾವ ಧ್ಯೇಯಾದರ್ಶಗಳ ಪಾಲನೆಯ ಕಾರಣಗಳಿಗಾಗಿ
ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಬೇಕು? ಯೋಚಿಸಿರಿ..

ಶಿಕ್ಷಕರಾದ ನಮಗೀಗ ಉಳಿದಿರುವ ಶ್ರೇಷ್ಠ ಶಿಕ್ಷಕ ಮಾದರಿ ಎಂದರೆ ನಮ್ಮೆಲ್ಲರ “ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ…. “

‍ಲೇಖಕರು avadhi

September 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ಜನಾರ್ದನ್

    ಯಾರೂ ಯಾರನ್ನೂ ಅನುಸರಿಸ ಬೇಕಾದ್ದಿಲ್ಲ. ಅಷ್ಟೇ ಅಲ್ಲದೆ ಆಚರಣೆಗಳು ಅರ್ಥ ಕಳೆದ ಬೂಟಾಟಿಕೆಗಳಾಗಿವೆ. ತಮತಮಗೆ ಬೇಕಾದ್ದನ್ನು ಬೇಕಾದಂತೆ ಅರಿತು ಅವರವರೇ ಸರಿಯಾದ ದಾರಿ ಕಂಡು ಸಾಗುವುದು ಸೂಕ್ತ.

    ಪ್ರತಿಕ್ರಿಯೆ
    • prathibha nandakumar

      May be and one can debate on that. But why demoralise him and demand to erase history purely based on his personal life?

      ಪ್ರತಿಕ್ರಿಯೆ
      • P.R.Vishwanath

        Agree. His personal life is his life . my comments are more on his impact on people like me who grew up during those years. Philosopher as the leader was Plato’s dream. It was said that Plato’s dream has come true. May be he was dwarfed by Nehru.

        ಪ್ರತಿಕ್ರಿಯೆ
  2. Parameshwarappa Kudari

    ಎಲ್ಲ ಆಗಿ ಹೋದ ಇತಿಹಾಸ.ನಮಗೆ ಅವರ ಶೈಕ್ಷಣಿಕ ಮೌಲ್ಲಗಳು ಮುಖ್ಯವಾಗಲಿ.ಅವರು ಮಕ್ಕಳ ಮೆಚ್ಚಿನ ಗುರುವಾಗಿದ್ದರು ಎನ್ನುವುದಂತೂ ಸತ್ಯ ಅಲ್ಲವೇ? ಆ ನಿಟ್ಟಿನಲ್ಲಿ ಗೌರವಿಸೋಣ.

    ಪ್ರತಿಕ್ರಿಯೆ
  3. premalatha B

    Can we reject Michelangelo based on his Ego, temper and personal hygiene? Albert Einstein and Isaac newton for their Autism and Asperger mental disorders? Numerous world leaders across the globe for Polygamy and extramarital relations? In a very broad sense not only the contributions are important but the concept matters too.
    Many great people emerge when their personal life is not as normal as the other fortunate ones. That is true all along the history.That should never stop people from appreciating their achievements, contributions, the struggle and the power of life. The concept of celebrating a day in memory of all great teachers in itself is a wonderful thing.If we can dig deep there is no one who is perfect. Dr. Sarsaparilla Ramakrishna’s advise of celebrating a day in the memory of all other teachers in itself shows that the man had some vision.I do not agree that one’s personal life should never stop celebrating their achievements. Are those achievements great enough is a different question all-together.

    ಪ್ರತಿಕ್ರಿಯೆ
  4. Srikanth

    ಇದೇ ರೀತಿಯ ಮನಸುಗಳು ನಮ್ಮ ಹಿಂದಿನ ಎಲ್ಲಾ ನಾಯಕರ ಜನ್ಮ ಜಾಲಾಡುತ್ತಿವೆ.

    ಪ್ರತಿಕ್ರಿಯೆ
  5. CanTHeeRava

    ವಡ್ಡಗೆರೆ ಅವರ ಬರಹಕ್ಕೆ ನನ್ನ ಪ್ರತಿಕ್ರಿಯೆ
    ೧. ಎಸ್ ರಾಧಾಕೃಷ್ಣನ್ ಅವರ ಜನ್ಮ ದಿನಾಂಕದ ಬಗ್ಗೆ ಅವರಿಗೇ ಸಂದೇಹವಿತ್ತು ಎಂದು ಗೋಪಾಲ್ ಬರೆದಿದ್ದಾರೆಯೇ ಹೊರತು ಖಚಿತ ಮಾಹಿತಿ ಅವರಿಗೂ ಇರಲಿಲ್ಲ.
    ೨. ವಿವಾಹೇತರ ಲೈಂಗಿಕ ಸಂಬಂಧಗಳನ್ನು ರಾಧಾಕೃಷ್ಣನ್ ಹೊಂದಿದ್ದರು ಎಂಬುದು ಅವರ ವೈಯಕ್ತಿಕ ವಿಚಾರ. ಸಾರ್ವಜನಿಕ ಬದುಕಿನ ಮಾನದಂಡಗಳೇ ಬೇರೆ. ರಾಧಾಕೃಷ್ಣನ್ ಅವರು ತಮ್ಮ ಸಂಬಂಧಗಳ ಮುಸುಕಿನಲ್ಲಿ ಸಾರ್ವಜನಿಕ ನಷ್ಟ ಉಂಟು ಮಾಡುವ ಅವ್ಯವಹಾರಗಳಲ್ಲಿ ತೊಡಗಿರಲಿಲ್ಲ. ಅವರು ಯಾರಿಗೂ “ಹೀಗೇ ಜೀವನ ಮಾಡಿ” ಎಂದು ಬೋಧನೆ ಮಾಡಿದ್ದು ನನಗೆ ಗೊತ್ತಿಲ್ಲ. “ಹೀಗೆ ಜೀವನ ಮಾಡಿ” ಎಂದು ನಮ್ಮ ಫಿಲಾಸಫಿ ಹೇಳುತ್ತದೆ ಎಂದು ವಿಚಾರ ಮಾಡಿರಬಹುದು. ವಿಚಾರ ಮಾಡುವ ಹಕ್ಕು ಅವರದ್ದು. ಬೇರೆಯವರಿಗೆ ಹೀಗೆಯೇ ಮಾಡಿ ಎಂದು ಹೇಳಿ ತಾವು ಅದನ್ನು ಅನುಸರಿಸದೇ ಹೋದಾಗ ಅದು ಆತ್ಮ ವಂಚನೆ ಆಗುತ್ತದೆ. ಸಾರ್ವಜನಿಕವಾಗಿ ಗೊತ್ತಾಗದ ಆತ್ಮ ವಂಚನೆಗಳಿಗೆ ಯಾರಿಗೂ ಕೊರತೆ ಇರುವುದಿಲ್ಲ.
    ೩. ಎಸ್. ರಾಧಾಕೃಷ್ಣನ್ ಅವರ ವಿದ್ವತ್ತಿನ ಗುಣಮಟ್ಟವೂ ಚರ್ಚಾರ್ಹ ಆಗಿರಬಹುದು. ನನಗೆ ಅವರ ಹಿಂದೂ ಫಿಲಾಸಫಿ ಅಥ್ವಾ ಇನ್ನಾವುದೇ ಬಗೆಗಿನ ಸಾಹಿತ್ಯ ಕೆಲಸದ ಬಗ್ಗೆ ಹೆಚ್ಚು ಗೊತ್ತಿಲ್ಲ. “ಸುಮಾರು ಗುಣಮಟ್ಟ” ಹೊಂದಿದ ಚಿಂತಕರ ದಂಡೇ ಅಂದಿನ ಭಾರತದಲ್ಲಿ ಇತ್ತು, ಇವತ್ತು ಇನ್ನೂ ಹೆಚ್ಚಾಗಿದ್ದಾರೆ. “ಶ್ರೇಷ್ಠತೆ”ಯ ಅಳತೆಗೋಲು ಮೊಳದ ಕೈ ಇದ್ದ ಹಾಗೆ.
    ೩. ಎಸ್. ರಾಧಾಕೃಷ್ಣನ್ ಅವರ ವೈಯಕ್ತಿಕ ಆಯ್ಕೆಗಳನ್ನು “ಭ್ರಷ್ಟತೆ” ಎಂದು ಬಿಂಬಿಸುವ ಸ್ವಾತಂತ್ರ್ಯ ವಡ್ಡಗೆರೆ ಅವರಿಗಿದೆ. ಆದರೆ, ವಡ್ಡಗೆರೆ ಅವರು ಒಂದು ಅಂಶವನ್ನು ಗಮನಿಸಿಯೂ ಗಮನಿಸಿಲ್ಲ. ಎಸ್. ರಾಧಾಕೃಷ್ಣನ್ ಅವರ ಜೀವನ ಚರಿತ್ರೆಯನ್ನು ಬರೆದಿರುವುದು ಅವರ ಮಗನೇ ಆಗಿದ್ದ ಎಸ್ ಗೋಪಾಲ್. ಮಗನಾದವನು ತಂದೆಯ ಬಗ್ಗೆ ಬರೆಯುವಾಗ ಇಷ್ಟು ಪರದೆಇಲ್ಲದ ವಿವರಗಳನ್ನು ಕೊಟ್ಟಿರುವ ಸಂಗತಿಯೇ ವಿಶೇಷವಾದುದು. ಭಾರತದಲ್ಲಿ ಈ ವರೆಗೆ ಬಂದಿರುವ ಖ್ಯಾತನಾಮರ ಜೀವನ ಚರಿತ್ರೆಗಳಲ್ಲಿ ಅತ್ಯಂತ ನೇರವಾದ ಮತ್ತು ಯಾವುದೇ ವ್ಯಕ್ತಿನಿಷ್ಠ ಕಟ್ಟುಪಾಡುಗಳಿಗೆ ಸಿಲುಕದ ಬರವಣಿಗೆಗಳಲ್ಲಿ ಗೋಪಾಲ್ ಅವರ ಬರವಣಿಗೆಯನ್ನು ಮುಂಚೂಣಿಯಲ್ಲಿದೆ ಎಂದು ಪರಿಗಣಿಸುತ್ತಾರೆ ಅನೇಕರು.
    ೪. ಸಾವಿತ್ರಿ ಬಾಯಿ ಫುಲೆ ಅವರು ಮಾದರಿ ಸಾರ್ವಜನಿಕ ಜೀವನ ನಡೆಸಿರಬಹುದು. ಅವರ ಜನ್ಮ ದಿನಾಂಕ ೧೮೩೧ ರಲ್ಲಿಯದ್ದು. ಅದರ ಬಗ್ಗೆ ಖಚಿತವಾದ ದಾಖಲೆಗಳು ಇವೆಯೇ ಎಂಬ ಅನುಮಾನ ಯಾರಿಗಾದರೂ ಬರುತ್ತದೆ. ಮೊದಲ ಸೆಪ್ಟೆಂಬರ್ ೫ ನ್ನು ಅರ್ಹರಿಗೆ ಕೊಟ್ಟಿಲ್ಲ ಎನ್ನುವ ವಾದ ಒಂದು ಮಿತಿ, ಫುಲೆ ಒಬ್ಬರೇ ಮಾದರಿ ಶಿಕ್ಷಕಿಯಾಗಿ ನಿಮಗೆ ಗೋಚರಿಸುವುದು ಇನ್ನೂ ದೊಡ್ಡ ಮಿತಿ. ಜೊತೆಗೆ ಆಕೆಯ ಸಾಮಾಜಿಕ ಹಿನ್ನೆಲೆ (ಜಾತಿ ಒಂದೇ ಅಲ್ಲ) ಯೂ ನಿಮ್ಮನ್ನು ಆಕೆಯತ್ತ ಆಕರ್ಷಿಸಬಹುದು. ಇದು ಒಂದು ಥರಾ ಮೂಲದಲ್ಲಿದ್ದ ದಾರ್ಶನಿಕರಿಗೆ ಹೆಚ್ಚಿನ ಸ್ಥಾನಮಾನಗಳನ್ನು ಕೊಡಿಸುವ ಆಸೆ ಎನ್ನಬಹುದು. ಪ್ರತಿಯೊಂದು ಜಾತಿಗೂ ಒಬ್ಬ ದಾರ್ಶನಿಕನ/ಳ ಜಯಂತಿ (ಅದಕ್ಕೆ ಸರ್ಕಾರಿ ರಜೆ) ಬೇಕೆನ್ನುವ ಇಂದಿನ ರಾಜಕೀಯ ಸನ್ನಿವೇಶದಲ್ಲಿ ಜನವರಿ ಮೂರನ್ನು ಶಿಕ್ಷಕರ ಎರಡನೇ ದಿನ ಎಂದು ಘೋಷಿಸಿದರೆ ಆಶ್ಚರ್ಯವಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: