’ಕತರ ಕತರ ಮಿಲ್ತಾ ಹೈ, ಕತರ ಕತರ ಜೀನೆ ದೋ, ಜಿ೦ದಗೀ ಹೈ….’ – ಇಜಾಜ಼ತ್ ಚಿತ್ರದ ಈ ಹಾಡು,
ಅದರ ಅದ್ಭುತ ಛಾಯಾಗ್ರಹಣ ಮರೆಯಲು೦ಟೆ?
ಗುಲ್ಜಾರ್ ರವರ ಆ ಹಾಡನ್ನು ಕನ್ನಡಕ್ಕೆ ಭಾವಾನುವಾದ ಮಾಡಿದವರು ಸ್ವರ್ಣ ಎನ್ ಪಿ.
ಶೋಧ
– ಸ್ವರ್ಣ ಎನ್ ಪಿ
ಕ್ಷಣಗಳಲ್ಲಿ ಸಿಕ್ಕ ಬದುಕ
ಹನಿಗಳಲ್ಲಿ ಬದುಕ ಬಿಡು
ನನ್ನ ನಾ ಹುಡುಕುತ್ತಿದ್ದೇನೆ, ಹುಡುಕ ಬಿಡು
ಕಳೆದ ರಾತ್ರಿಯೂ ಹೀಗೆ ಆಗಿತ್ತು,
ಮಂಪರಿನಲ್ಲಿ , ನೀ ನನ್ನ ಕೈ ಹಿಡಿದಂತಾಗಿತ್ತು.
ಎಡವಿ ಬೀಳುವುದರಲ್ಲಿ, ನಿನ್ನ ತೋಳು ಸಿಕ್ಕಂತಾಗಿತ್ತು
ಕನಸಿನಲೆಗಳ ಮೇಲೆ, ನನ್ನ ಹೆಜ್ಜೆ ಇಟ್ಟಾಗಿತ್ತು.
ಕನಸಲ್ಲೇ ತೇಲಿ ಸಾಗಲು ಬಿಡು
ನನ್ನ ನಾ ಹುಡುಕುತ್ತಿದ್ದೇನೆ , ಹುಡುಕ ಬಿಡು
ನೀನೇನೋ ಮುಗಿಲ ಬಿಡಿಸಿಟ್ಟಿದ್ದೆ
ನಾ, ಬರಿಗಾಲಲ್ಲಿ ಭುವಿಯ ಮೇಲಿದ್ದೆ .
ನೀನಿದ್ದೂ ನಿನ್ನ ಹಂಬಲವಿರಬೇಕು,
ಆ ಬದುಕು ಬಹು ಸುಂದರವಿರಬೇಕು ?
ನಿನ್ನಾಸೆಯಲ್ಲೇ ತೇಲಿ ಸಾಗಲು ಬಿಡು
ನನ್ನ ನಾ ಹುಡುಕುತ್ತಿದ್ದೇನೆ , ಹುಡುಕ ಬಿಡು
ಮಂಜ ಹನಿಗಳಲ್ಲಿ ನಡೆದಿದೆ ಪಯಣ ,
ಸುಂದರವಾಗಿದೆ ನನ್ನ ಸ್ವಪ್ನಾಕಾಶಯಾನ .
ನಿನ್ನೊಂದು ನೋಟವೇ ಬಲವಾಗಿರಲು,
ಸಾಗುವೆ ನಾ ಮೇಘಮಾಲೆಯೊಲು
ಇಬ್ಬನಿಯಲ್ಲೇ ತೇಲಿ ಸಾಗಲು ಬಿಡು
ನನ್ನ ನಾ ಹುಡುಕುತ್ತಿದ್ದೇನೆ , ಹುಡುಕ ಬಿಡು
ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ]]>
ನನಗೆ ನನ್ನಿಷ್ಟ ಹಾಗೆ ಇರಲು ಬಿಡು ಎಂಬ ಸಾಲುಗಳಿರುವ ಬೆಂಗಾಳಿ ಹಾಡೊಂದು ನೆನಪಾಯಿತು. ಸ್ವರ್ಣಕ್ಕ, ಚೆನ್ನಾಗಿದೆ ಅನುವಾದ 🙂
ನೀನೇನೋ ಮುಗಿಲ ಬಿಡಿಸಿಟ್ಟಿದ್ದೆ
ನಾ, ಬರಿಗಾಲಲ್ಲಿ ಭುವಿಯ ಮೇಲಿದ್ದೆ .
ನೀನಿದ್ದೂ ನಿನ್ನ ಹಂಬಲವಿರಬೇಕು,
ಆ ಬದುಕು ಬಹು ಸುಂದರವಿರಬೇಕು ?
ನಿನ್ನಾಸೆಯಲ್ಲೇ ತೇಲಿ ಸಾಗಲು ಬಿಡು
ನನ್ನ ನಾ ಹುಡುಕುತ್ತಿದ್ದೇನೆ , ಹುಡುಕ ಬಿಡು
nimma anuvaada tumbaa chennagide, haage hindiyalli mukesh haadugalannu kelutta hodare nammanne naavu maretubidutteve. anuvaada munduvaresi shubhashayagalu .
ravi varma hosapete